Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೂಕ್ತ ಕಾರಣ ಕೊಟ್ಟು ನಾಮಿನೇಟ್ ಮಾಡದವರಿಗೆ ಮಾತಲ್ಲೇ ಪೆಟ್ಟು ಕೊಟ್ಟ ಸುದೀಪ್.!
Recommended Video
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಐದನೇ ವಾರ ಓಪನ್ ನಾಮಿನೇಷನ್ ಪ್ರಕ್ರಿಯೆ ನಡೆಯಿತು. ತಾವು ನಾಮಿನೇಟ್ ಮಾಡುವ ಇಬ್ಬರು ಸದಸ್ಯರ ಭಾವಚಿತ್ರವನ್ನ, ಅವರ ಎದುರಿಗೆ ಸ್ಪರ್ಧಿಗಳು ಅಗ್ನಿಕುಂಡಕ್ಕೆ ಸಮರ್ಪಿಸಬೇಕಿತ್ತು.
ಈ ಪ್ರಕ್ರಿಯೆಯಲ್ಲಿ ಕೆಲವರು ಸೂಕ್ತ ಕಾರಣ ನೀಡಲಿಲ್ಲ. ಸೆಲೆಬ್ರಿಟಿ ಸ್ಪರ್ಧಿಗಳೆಲ್ಲ ಜನಸಾಮಾನ್ಯ ಸ್ಪರ್ಧಿಗಳನ್ನೇ ಟಾರ್ಗೆಟ್ ಮಾಡಿದರು. ಇನ್ನೂ ಜನಸಾಮಾನ್ಯ ಸ್ಪರ್ಧಿಗಳು ಕೂಡ ಸೆಲೆಬ್ರಿಟಿ ಸ್ಪರ್ಧಿಗಳನ್ನೇ ನಾಮಿನೇಟ್ ಮಾಡಿದರು.
'ಬಿಗ್ ಬಾಸ್' ಮನೆಯಲ್ಲಿ ಬೆಂಕಿಗೆ ಬಿದ್ದ ಅತಿ ಹೆಚ್ಚು ಮುಖಗಳಿವು.!
ಇದನ್ನ ಗಮನಿಸಿದ ಕಿಚ್ಚ ಸುದೀಪ್, 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಎಲ್ಲ ಸ್ಪರ್ಧಿಗಳಿಗೂ ಬೆಂಡೆತ್ತಿದರು. ಮುಂದೆ ಓದಿರಿ...
ಮಕ್ಕಳ ತರಹ ಆಡಿದ್ದು ಯಾಕೆ.?
''ಓಪನ್ ನಾಮಿನೇಷನ್ ನಲ್ಲಿ ಮಕ್ಕಳ ತರಹ ಆಡಿದ್ದು ಯಾಕೆ.? ಒಳಗಿರುವವರೆಲ್ಲ ಹೊರಗಡೆ ಇರುವವರನ್ನ ನಾಮಿನೇಟ್ ಮಾಡುತ್ತೀರಿ. ಹೊರಗಡೆ ಇರುವವರೆಲ್ಲ ಒಳಗಡೆ ಇರುವವರನ್ನ ನಾಮಿನೇಟ್ ಮಾಡುತ್ತೀರಿ. ಅವರು ನಾಮಿನೇಟ್ ಮಾಡಿದರು ಅಂತ ಇವರು, ಇವರು ನಾಮಿನೇಟ್ ಮಾಡಿದರು ಅಂತ ಅವರು. ಕಾರಣ ಬಹಳ ಕಮ್ಮಿ ಜನ ಕರೆಕ್ಟಾಗಿ ಕೊಟ್ರಿ. ಇನ್ನೂ ಕೆಲವರು ಮಕ್ಕಳಿಗಿಂತ ಕಡೆ ರೀಸನ್ ಕೊಟ್ರಿ'' ಎಂದು ಓಪನ್ ನಾಮಿನೇಷನ್ ಪ್ರಕ್ರಿಯೆ ಬಗ್ಗೆ ಸುದೀಪ್ ಬೇಸರ ವ್ಯಕ್ತಪಡಿಸಿದರು.
ಆಶಿತಾ ಹೇಳಿದ್ದೇನು.?
''ಅದು ಟಿಟ್ ಫಾರ್ ಟಾಟ್ ಅಂತಲೇ ಆಗಿದ್ದು. ಇಲ್ಲಿ ಯಾರನ್ನೂ ನಾಮಿನೇಟ್ ಮಾಡಬೇಕು ಅಂತ ನನಗೆ ಅನಿಸುವುದೇ ಇಲ್ಲ. ಅದೊಂದು ಪೇನ್ ಫುಲ್ ಪ್ರೋಸೆಸ್'' ಎಂದು ಸುದೀಪ್ ಗೆ ಉತ್ತರಿಸಿದರು ಆಶಿತಾ.
ರಿಯಾಝ್ ಹೇಳಿದ್ದೇನು.?
''ನಾನು ಆಶಿತಾ ಹೆಸರೇ ಹೇಳಬೇಕು ಅಂತ ಫಿಕ್ಸ್ ಆಗಿ ಬಂದಿದ್ದೆ. ಯಾಕಂದ್ರೆ, ಅವರು 'ಚೀಪ್' ಎಂಬ ಪದವನ್ನು ನನ್ನ ಮೇಲೆ ಬಳಸಿದರು. ನಾನು ಚೀಪ್ ಮನುಷ್ಯ ಅಲ್ಲ. ಹೀಗಾಗಿ, ಅದೇ ಕಾರಣ ಕೊಟ್ಟು ನಾನು ನಾಮಿನೇಟ್ ಮಾಡಿದೆ. ಕೃಷಿ ವಿಷಯದಲ್ಲಿ ನಾನು ಸ್ವಲ್ಪ ಸಿಲ್ಲಿ ಆದೆ. ಅದಕ್ಕೆ ನಾನು ಅವರ ಬಳಿ ಕ್ಷಮೆ ಕೇಳಿದೆ'' ಎಂದರು ರಿಯಾಝ್.
ಕಾರಣ ಸೂಕ್ತ ಆಗಿರಬೇಕು.!
ನಾಮಿನೇಷನ್ ಪ್ರಕ್ರಿಯೆಯಲ್ಲಿ ಕೊಡುವ ಕಾರಣ ಸೂಕ್ತ ಆಗಿರಬೇಕು ಎಂದು ಸುದೀಪ್ ಇದೇ ವೇಳೆ ಎಲ್ಲರಿಗೂ ಎಚ್ಚರಿಸಿದರು. ಸುದೀಪ್ ಮಾತಿನಂತೆ, ಮುಂಬರುವ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸುಮ್ಮನೆ ಟಾರ್ಗೆಟ್ ಮಾಡದೆ ಎಲ್ಲರೂ ಸೂಕ್ತ ಕಾರಣಗಳನ್ನೇ ನೀಡುತ್ತಾರಾ.? ಕಾದು ನೋಡೋಣ..