twitter
    For Quick Alerts
    ALLOW NOTIFICATIONS  
    For Daily Alerts

    ಸೂಕ್ತ ಕಾರಣ ಕೊಟ್ಟು ನಾಮಿನೇಟ್ ಮಾಡದವರಿಗೆ ಮಾತಲ್ಲೇ ಪೆಟ್ಟು ಕೊಟ್ಟ ಸುದೀಪ್.!

    By Harshitha
    |

    Recommended Video

    ಬಿಗ್ ಬಾಸ್ ಕನ್ನಡ ಸೀಸನ್ 5 : ಎಲ್ಲಾ ಸ್ಪರ್ಧಿಗಳ ಮೇಲೆ ಗರಂ ಆದ ಸುದೀಪ್ | Filmibeat kannada

    'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಐದನೇ ವಾರ ಓಪನ್ ನಾಮಿನೇಷನ್ ಪ್ರಕ್ರಿಯೆ ನಡೆಯಿತು. ತಾವು ನಾಮಿನೇಟ್ ಮಾಡುವ ಇಬ್ಬರು ಸದಸ್ಯರ ಭಾವಚಿತ್ರವನ್ನ, ಅವರ ಎದುರಿಗೆ ಸ್ಪರ್ಧಿಗಳು ಅಗ್ನಿಕುಂಡಕ್ಕೆ ಸಮರ್ಪಿಸಬೇಕಿತ್ತು.

    ಈ ಪ್ರಕ್ರಿಯೆಯಲ್ಲಿ ಕೆಲವರು ಸೂಕ್ತ ಕಾರಣ ನೀಡಲಿಲ್ಲ. ಸೆಲೆಬ್ರಿಟಿ ಸ್ಪರ್ಧಿಗಳೆಲ್ಲ ಜನಸಾಮಾನ್ಯ ಸ್ಪರ್ಧಿಗಳನ್ನೇ ಟಾರ್ಗೆಟ್ ಮಾಡಿದರು. ಇನ್ನೂ ಜನಸಾಮಾನ್ಯ ಸ್ಪರ್ಧಿಗಳು ಕೂಡ ಸೆಲೆಬ್ರಿಟಿ ಸ್ಪರ್ಧಿಗಳನ್ನೇ ನಾಮಿನೇಟ್ ಮಾಡಿದರು.

    'ಬಿಗ್ ಬಾಸ್' ಮನೆಯಲ್ಲಿ ಬೆಂಕಿಗೆ ಬಿದ್ದ ಅತಿ ಹೆಚ್ಚು ಮುಖಗಳಿವು.!'ಬಿಗ್ ಬಾಸ್' ಮನೆಯಲ್ಲಿ ಬೆಂಕಿಗೆ ಬಿದ್ದ ಅತಿ ಹೆಚ್ಚು ಮುಖಗಳಿವು.!

    ಇದನ್ನ ಗಮನಿಸಿದ ಕಿಚ್ಚ ಸುದೀಪ್, 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಎಲ್ಲ ಸ್ಪರ್ಧಿಗಳಿಗೂ ಬೆಂಡೆತ್ತಿದರು. ಮುಂದೆ ಓದಿರಿ...

    ಮಕ್ಕಳ ತರಹ ಆಡಿದ್ದು ಯಾಕೆ.?

    ಮಕ್ಕಳ ತರಹ ಆಡಿದ್ದು ಯಾಕೆ.?

    ''ಓಪನ್ ನಾಮಿನೇಷನ್ ನಲ್ಲಿ ಮಕ್ಕಳ ತರಹ ಆಡಿದ್ದು ಯಾಕೆ.? ಒಳಗಿರುವವರೆಲ್ಲ ಹೊರಗಡೆ ಇರುವವರನ್ನ ನಾಮಿನೇಟ್ ಮಾಡುತ್ತೀರಿ. ಹೊರಗಡೆ ಇರುವವರೆಲ್ಲ ಒಳಗಡೆ ಇರುವವರನ್ನ ನಾಮಿನೇಟ್ ಮಾಡುತ್ತೀರಿ. ಅವರು ನಾಮಿನೇಟ್ ಮಾಡಿದರು ಅಂತ ಇವರು, ಇವರು ನಾಮಿನೇಟ್ ಮಾಡಿದರು ಅಂತ ಅವರು. ಕಾರಣ ಬಹಳ ಕಮ್ಮಿ ಜನ ಕರೆಕ್ಟಾಗಿ ಕೊಟ್ರಿ. ಇನ್ನೂ ಕೆಲವರು ಮಕ್ಕಳಿಗಿಂತ ಕಡೆ ರೀಸನ್ ಕೊಟ್ರಿ'' ಎಂದು ಓಪನ್ ನಾಮಿನೇಷನ್ ಪ್ರಕ್ರಿಯೆ ಬಗ್ಗೆ ಸುದೀಪ್ ಬೇಸರ ವ್ಯಕ್ತಪಡಿಸಿದರು.

    ಆಶಿತಾ ಹೇಳಿದ್ದೇನು.?

    ಆಶಿತಾ ಹೇಳಿದ್ದೇನು.?

    ''ಅದು ಟಿಟ್ ಫಾರ್ ಟಾಟ್ ಅಂತಲೇ ಆಗಿದ್ದು. ಇಲ್ಲಿ ಯಾರನ್ನೂ ನಾಮಿನೇಟ್ ಮಾಡಬೇಕು ಅಂತ ನನಗೆ ಅನಿಸುವುದೇ ಇಲ್ಲ. ಅದೊಂದು ಪೇನ್ ಫುಲ್ ಪ್ರೋಸೆಸ್'' ಎಂದು ಸುದೀಪ್ ಗೆ ಉತ್ತರಿಸಿದರು ಆಶಿತಾ.

    ರಿಯಾಝ್ ಹೇಳಿದ್ದೇನು.?

    ರಿಯಾಝ್ ಹೇಳಿದ್ದೇನು.?

    ''ನಾನು ಆಶಿತಾ ಹೆಸರೇ ಹೇಳಬೇಕು ಅಂತ ಫಿಕ್ಸ್ ಆಗಿ ಬಂದಿದ್ದೆ. ಯಾಕಂದ್ರೆ, ಅವರು 'ಚೀಪ್' ಎಂಬ ಪದವನ್ನು ನನ್ನ ಮೇಲೆ ಬಳಸಿದರು. ನಾನು ಚೀಪ್ ಮನುಷ್ಯ ಅಲ್ಲ. ಹೀಗಾಗಿ, ಅದೇ ಕಾರಣ ಕೊಟ್ಟು ನಾನು ನಾಮಿನೇಟ್ ಮಾಡಿದೆ. ಕೃಷಿ ವಿಷಯದಲ್ಲಿ ನಾನು ಸ್ವಲ್ಪ ಸಿಲ್ಲಿ ಆದೆ. ಅದಕ್ಕೆ ನಾನು ಅವರ ಬಳಿ ಕ್ಷಮೆ ಕೇಳಿದೆ'' ಎಂದರು ರಿಯಾಝ್.

    ಕಾರಣ ಸೂಕ್ತ ಆಗಿರಬೇಕು.!

    ಕಾರಣ ಸೂಕ್ತ ಆಗಿರಬೇಕು.!

    ನಾಮಿನೇಷನ್ ಪ್ರಕ್ರಿಯೆಯಲ್ಲಿ ಕೊಡುವ ಕಾರಣ ಸೂಕ್ತ ಆಗಿರಬೇಕು ಎಂದು ಸುದೀಪ್ ಇದೇ ವೇಳೆ ಎಲ್ಲರಿಗೂ ಎಚ್ಚರಿಸಿದರು. ಸುದೀಪ್ ಮಾತಿನಂತೆ, ಮುಂಬರುವ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸುಮ್ಮನೆ ಟಾರ್ಗೆಟ್ ಮಾಡದೆ ಎಲ್ಲರೂ ಸೂಕ್ತ ಕಾರಣಗಳನ್ನೇ ನೀಡುತ್ತಾರಾ.? ಕಾದು ನೋಡೋಣ..

    English summary
    Bigg Boss Kannada 5: Week 5: Sudeep speaks about open nomination process.
    Sunday, November 19, 2017, 17:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X