Don't Miss!
- Automobiles ರಾಂಗ್ ರೂಟ್ನಲ್ಲಿ ಬಂದು ಪ್ರಶ್ನಿಸಿದ ಬೈಕ್ ಸವಾರನಿಗೆ ಥಳಿಸಿದ ಕಾರು ಚಾಲಕ: ವಿಡಿಯೋ
- News CAA: ಸಿಎಎ ಜಾರಿ ಪ್ರಶ್ನಿಸಿ 230ಕ್ಕೂ ಹೆಚ್ಚು ಅರ್ಜಿ: ಸುಪ್ರೀಂಕೋರ್ಟ್ನಲ್ಲಿ ಮಹತ್ವದ ವಿಚಾರಣೆ
- Finance ಆಧಾರ್ ಉಚಿತ ಅಪ್ಡೇಟ್ ದಿನಾಂಕ ಜೂ.14ರವರೆಗೆ ವಿಸ್ತರಣೆ: ಆನ್ಲೈನ್ನಲ್ಲಿ ಹೀಗೆ ನವೀಕರಿಸಿ
- Lifestyle ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
- Sports IPL 2024: ಮುಂಬೈ ನಾಯಕನಿಗೆ ಪತ್ರಕರ್ತರಿಂದ ಬೌನ್ಸರ್: ಉತ್ತರಿಸದೆ ಮೌನಕ್ಕೆ ಶರಣಾದ ಹಾರ್ದಿಕ್ ಪಾಂಡ್ಯ
- Technology Best Coolers: ಭಾರತದಲ್ಲಿ 5 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ ಇರುವ ಅತ್ಯುತ್ತಮ ಕೂಲರ್ಗಳು! ಫೀಚರ್ಸ್ ಏನಿದೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಿಗ್ ಬಾಸ್' ಮನೆಯಲ್ಲಿ ಇದಕ್ಕಿದ್ದಂತೆ ಟಾರ್ಗೆಟ್ ಆದ ಶ್ರುತಿ ಪ್ರಕಾಶ್.!
ಕ್ಯಾಪ್ಟನ್ ಆಗಿದ್ದಾಗ 'ಕಳಪೆ' ಕಿತ್ತಾಟಕ್ಕೆ ಸಾಕ್ಷಿಯಾಗಿದ್ದರು ಎನ್ನುವುದನ್ನು ಬಿಟ್ಟರೆ ನಟಿ, ಗಾಯಕಿ ಶ್ರುತಿ ಪ್ರಕಾಶ್... ತಾವಾಯ್ತು, ತಮ್ಮ ಟಾಸ್ಕ್ ಆಯ್ತು ಅಂತ 'ಬಿಗ್ ಬಾಸ್' ಮನೆಯಲ್ಲಿ ಇದ್ದಾರೆ.
ಯಾವುದೇ ವಿವಾದಗಳಿಗೆ, ಜಗಳಗಳಿಗೆ ಸಿಲುಕದ ನಟಿ ಶ್ರುತಿ ಪ್ರಕಾಶ್ ಇದಕ್ಕಿದ್ದಂತೆ ಆರನೇ ವಾರ ಟಾರ್ಗೆಟ್ ಆಗಿದ್ದಾರೆ. ಶ್ರುತಿ ಪ್ರಕಾಶ್ ರನ್ನ ನಾಲ್ಕು ಮಂದಿ ನಾಮಿನೇಟ್ ಮಾಡಿದರು.
ನಾಮಿನೇಷನ್ ಪ್ರಕ್ರಿಯೆಯಲ್ಲಿ ಆರನೇ ವಾರ ಯಾರ್ಯಾರ ಲೆಕ್ಕಾಚಾರ ಏನಾಗಿತ್ತು ಅಂತ ನೋಡೋಣ ಬನ್ನಿ....
ಟಾರ್ಗೆಟ್ ಆದ ಶ್ರುತಿ ಪ್ರಕಾಶ್
ದಿವಾಕರ್, ರಿಯಾಝ್, ಸಮೀರಾಚಾರ್ಯ ಹಾಗೂ ಚಂದನ್ ಶೆಟ್ಟಿ... ನಟಿ ಶ್ರುತಿ ಪ್ರಕಾಶ್ ವಿರುದ್ಧ ಮತ ಚಲಾಯಿಸಿದರು.
'ಬಿಗ್ ಬಾಸ್': ಈ ವಾರ ಯಾರಿಗೂ ವೋಟ್ ಮಾಡಿ ಹಣ ವ್ಯರ್ಥ ಮಾಡಬೇಡಿ.!
ಮೊಟ್ಟ ಮೊದಲ ಬಾರಿಗೆ ನಾಮಿನೇಟ್ ಆದ ಚಂದನ್ ಶೆಟ್ಟಿ
ಪ್ರಭಲ ಸ್ಪರ್ಧಿ ಎಂದು ಅರಿವಿಗೆ ಬಂದ ಕಾರಣ ಸಿಹಿ ಕಹಿ ಚಂದ್ರು, ಅನುಪಮಾ ಗೌಡ, ಜಗನ್ ಹಾಗೂ ಶ್ರುತಿ ಪ್ರಕಾಶ್... ಚಂದನ್ ಶೆಟ್ಟಿ ವಿರುದ್ಧ ವೋಟ್ ಮಾಡಿದರು.
ಅದೃಷ್ಟ ಅಂದ್ರೆ ಇದು.! ಏನ್ ಗುರು ಚಂದನ್ ಶೆಟ್ಟಿ ಲಕ್ಕು.!
ಸಮೀರಾಚಾರ್ಯ ಮಿಸ್ ಆಗಲಿಲ್ಲ.!
ಅನುಪಮಾ, ಜಗನ್ ಹಾಗೂ ಆಶಿತಾಗೆ ಸಮೀರಾಚಾರ್ಯ ಕಂಡ್ರೆ ಅಷ್ಟಕಷ್ಟೆ. ಹೀಗಾಗಿ, ಈ ಮೂವರು ಸಮೀರಾಚಾರ್ಯ ರನ್ನ ನಾಮಿನೇಟ್ ಮಾಡಿದರು.
ವಾರವಿಡೀ ಗಳಿಸಿದ್ದನ್ನ ಒಂದೇ ನಿಮಿಷದಲ್ಲಿ ಹಾಳು ಮಾಡಿದ ಚಂದ್ರು, ಅನು.!
ಮತ್ತೆ ರಿಯಾಝ್ ವಿರುದ್ಧ ಮತಗಳು
ಸಿಹಿ ಕಹಿ ಚಂದ್ರು, ಜೆಕೆ ಮತ್ತು ಚಂದನ್ ಶೆಟ್ಟಿ... ರಿಯಾಝ್ ವಿರುದ್ಧ ಮತ ಹಾಕಿದರು.
ಜಯಶ್ರೀನಿವಾಸನ್ ಕೂಡ ತಪ್ಪಿಸಿಕೊಳ್ಳಲಿಲ್ಲ.!
ಸಮೀರಾಚಾರ್ಯ, ಆಶಿತಾ ಮತ್ತು ಜೆಕೆ ವೋಟ್ ಮಾಡಿದ್ರಿಂದಾಗಿ ಜಯಶ್ರೀನಿವಾಸನ್ ಕೂಡ ತಪ್ಪಿಸಿಕೊಳ್ಳಲಿಲ್ಲ.
ನಾಮಿನೇಟ್ ಆದ ಅನುಪಮಾ
ದಿವಾಕರ್ ಮತ್ತು ಶ್ರುತಿ ಪ್ರಕಾಶ್... ಅನುಪಮಾ ರನ್ನ ನಾಮಿನೇಟ್ ಮಾಡಿದರು
ಜಗನ್ ವಿರುದ್ಧ ಎರಡು ವೋಟ್
ರಿಯಾಝ್ ಮತ್ತು ಜಯಶ್ರೀನಿವಾಸನ್... ಜಗನ್ ಹೆಸರನ್ನ ಹೇಳಿದರು.
ಕ್ಯಾಪ್ಟನ್ ನಿವೇದಿತಾ ಆಯ್ಕೆ...
'ಬಿಗ್ ಬಾಸ್' ಮನೆಯಲ್ಲಿ ಮತ್ತೆ ಗ್ಯಾಸ್ ಟ್ರಬಲ್ ಆಗಲು ಸಿಹಿ ಕಹಿ ಚಂದ್ರು ಕಾರಣ. ಹೀಗಾಗಿ, ಕ್ಯಾಪ್ಟನ್ ನಿವೇದಿತಾ ಗೌಡ, ಸಿಹಿ ಕಹಿ ಚಂದ್ರು ರನ್ನ ನಾಮಿನೇಟ್ ಮಾಡಿದರು.
ಎಲ್ಲರೂ ಸೇಫ್ ಆಗಿದ್ದಾರೆ
ಎಂಟು ಮಂದಿ ನಾಮಿನೇಟ್ ಆಗಿದ್ದರೂ, ಈ ವಾರ ಎಲಿಮಿನೇಷನ್ ಇಲ್ಲ. ಆರನೇ ವಾರ ಎಲಿಮಿನೇಷನ್ ಕ್ಯಾನ್ಸಲ್ ಆಗಿರುವ ಸಂಗತಿ ಸ್ಪರ್ಧಿಗಳಿಗೆ ಗೊತ್ತಿಲ್ಲ.