Don't Miss!
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- News ಐತಿಹಾಸಿಕ ಪ್ರಸಿದ್ಧ ವದ್ದಿಕೆರೆ ಸಿದ್ದಪ್ಪನ ಬಗ್ಗೆ ನಿಮಗೆಷ್ಟು ಗೊತ್ತು?-ಇಲ್ಲಿದೆ ಸಂಪೂರ್ಣ ವಿವರ
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಗ್ಬಾಸ್: ಐದನೇ ವಾರ ಮನೆಯಿಂದ ಹೊರಬಿದ್ದವರು ಯಾರು?
ಬಿಗ್ಬಾಸ್ ಕನ್ನಡ ಸೀಸನ್ 9 ರ ಐದನೇ ವಾರ ಪೂರ್ಣಗೊಂಡಿದೆ. ಭಾನುವಾರ ಸಂಜೆ ಎಪಿಸೋಡ್ನಲ್ಲಿ ವಾರದ ಪಂಚಾಯಿತಿ ನಡೆಸಿದ ಕಿಚ್ಚ ಸುದೀಪ್ ಎಲ್ಲರನ್ನೂ ಚೆನ್ನಾಗಿ ನಗಿಸಿದ್ದಾರೆ. ಕೆಲವರಿಗೆ ಬುದ್ಧಿವಾದ ಹೇಳಿದ್ದಾರೆ. ಸರಿ-ತಪ್ಪು ವಿಶ್ಲೇಷಿಸಿದ್ದಾರೆ.
ಪ್ರತಿ ವಾರವೂ ಒಬ್ಬೊಬ್ಬರು ಮನೆಯಿಂದ ಹೊರಗೆ ಹೋಗಬೇಕಾಗಿರುವುದು ವಾಡಿಕೆ. ಅಂತೆಯೇ ಈ ವಾರ ನಟಿ ನೇಹಾ ಗೌಡ ಬಿಗ್ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ.
ಗೊಂಬೆ ಎಂದೇ ಖ್ಯಾತಿಯಾಗಿರುವ ನೇಹಾ ಗೌಡ ಮನೆಯ ಉಳಿದ ಸದಸ್ಯರಿಗೆ ಹೋಲಿಸಿದರೆ ಕಡಿಮೆ ಸಕ್ರಿಯರಾಗಿದ್ದರು. ಹಾಗಾಗಿ ಅವರ ಎಲಿಮಿನೇಶನ್ ಆಗಿದೆ.
ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ರಾಕೇಶ್ ಅಡಿಗ, ಆರ್ಯವರ್ಧನ್, ಪ್ರಶಾಂತ್ ಸಂಬರ್ಗಿ, ನೇಹಾ ಗೌಡ, ಅಮೂಲ್ಯ, ಕಾವ್ಯಶ್ರೀ ಗೌಡ, ಆರ್ಯವರ್ಧನ್ ಅವರುಗಳು ಈ ವಾರ ನಾಮಿನೇಟ್ ಆಗಿದ್ದರು. ಶನಿವಾರದ ಸಂಚಿಕೆಯಲ್ಲಿ ಕಾವ್ಯಶ್ರೀ ಗೌಡ, ರಾಕೇಶ್ ಅಡಿಗ ಹಾಗೂ ಆರ್ಯವರ್ಧನ್ ಸೇಫ್ ಆಗಿದ್ದರು. ಭಾನುವಾರದ ಸಂಚಿಕೆಯಲ್ಲಿ ನೇಹಾ ಗೌಡ ಎಲಿಮಿನೇಶನ್ ಆಗಿ ಉಳಿದ ಸದಸ್ಯರು ಸೇಫ್ ಆದರು.
ನೇಹಾ ಗೌಡ ಚೆನ್ನಾಗಿಯೇ ಆಡುತ್ತಿದ್ದರು, ಆದರೆ ಮನೆಯಲ್ಲಿ ಇತರ ಸ್ಪರ್ಧಿಗಳಿಗೆ ಹೋಲಿಸಿದರೆ ನೇಹಾ ಗೌಡ ವೀಕ್ ಎಂದು ಪ್ರೇಕ್ಷಕರಿಗೆ ಅನಿಸಿರಬಹುದು.
ಪ್ರತಿವಾರವೂ, ಆಯಾ ವಾರ ಯಾರು ಚೆನ್ನಾಗಿ ಆಡಿರುತ್ತಾರೆಯೊ ಅವರಿಗೆ ಕಿಚ್ಚನ ಚಪ್ಪಾಳೆ ಸಿಗುವುದು ಸಾಮಾನ್ಯ. ಆದರೆ ಈ ವಾರ ಯಾರಿಗೂ ಕಿಚ್ಚನ ಚಪ್ಪಾಳೆ ಸಿಗಲಿಲ್ಲ. ಈ ವಾರ ಚಪ್ಪಾಳೆಗೆ ಅರ್ಹವಾಗಿ ಯಾರೂ ಆಡಲಿಲ್ಲ ಎಂದರು ಸುದೀಪ್.
ಈವರೆಗೆ ಬಿಗ್ಬಾಸ್ ಮನೆಯಿಂದ ಐದು ಮಂದಿ ಹೊರಗೆ ಹೋಗಿದ್ದಾರೆ. ಐಶ್ವರ್ಯಾ ಪಿಸೆ, ಮಯೂರಿ, ನವಾಜ್, ದರ್ಶ್ ಚಂದಪ್ಪ ಅವರುಗಳು ಎಲಿಮಿನೇಟ್ ಆಗಿದ್ದಾರೆ. ಮನೆಯಲ್ಲಿ ಅರುಣ್ ಸಾಗರ್, ಪ್ರಶಾಂತ್ ಸಂಬರ್ಗಿ, ದೀಪಿಕಾ ದಾಸ್, ಅನುಪಮಾ, ರಾಕೇಶ್ ಅಡಿಗ, ರೂಪೇಶ್ ರಾಜಣ್ಣ, ಆರ್ಯವರ್ಧನ್, ರೂಪೇಶ್ ಶೆಟ್ಟಿ, ಕಾವ್ಯಶ್ರೀ, ವಿನೋದ್ ಗೊಬ್ರಗಾಲ, ಸಾನ್ಯಾ ಐಯ್ಯರ್, ಅಮೂಲ್ಯ, ದಿವ್ಯಾ ಉರುಡುಗ ಉಳಿದಿದ್ದಾರೆ.