ಭಾರ್ಗಿ ಮಾತಿನಿಂದ ಜಾನಕಿ ಮೇಲೆ ಸಿಟ್ಟಾದ ಮುದ್ದು ತಂಗಿ ಚಂಚಲ

ಕನ್ನಡ ಕಿರುತೆರೆ ಲೋಕದ ಖ್ಯಾತ ಧಾರಾವಾಹಿ ಮಗಳು ಜಾನಕಿ 250 ಸಂಚಿಕೆಯನ್ನು ಯಶಸ್ವಿಯಾಗಿ ಮುಗಿಸಿ ಮುನ್ನುಗ್ಗುತ್ತಿದೆ. ಸಾಕಷ್ಟು ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಾ ಪ್ರೇಕ್ಷಕರಲ್ಲಿ ಕುತೂಹಲವನ್ನು ಹೆಚ್ಚಿಸುತ್ತಿದೆ ಮಗಳು ಜಾನಕಿ.

ಸದ್ಯ ಜಾನಕಿ ಧಾರಾವಾಹಿಯಲ್ಲಿ ದುವೆ ವಿಚಾರ ಸದ್ದು ಮಾಡುತ್ತಿದೆ. ಬಾರ್ಗಿ ಮತ್ತು ಚಿರಂತನ್ ಇಬ್ಬರು ಸೇರಿ ಚಂಚಲಳಿಗೆ ಮೋಸ ಮಾಡುತ್ತಿದ್ದಾರೆ. ತಂಗಿ ಬಾಳು ಹಾಳಗಬಾರದು ಎಂದು ಒದ್ದಾಡುತ್ತಿರುವ ಜಾನಕಿಯನ್ನೆ ಕೆಟ್ಟವಳನ್ನಾಗಿ ಮಾಡುತ್ತಿದ್ದಾರೆ ಭಾರ್ಗಿ ಮತ್ತು ಚಿರಂತನ್.

ಭಾರ್ಗಿ ಮತ್ತು ಚಿರಂತನ್ ನಿಂದ ಚಂಚಲ ಕೂಡ ಜಾನಕಿ ವಿರುದ್ಧ ಸಿಟ್ಟಾಗಿದ್ದಾಳೆ. ಅಲ್ಲದೆ ಅನುಮಾನ ಭಗೆಹರಿಸಿಕೊಳ್ಳಲು ನೇರವಾಗಿ ಜಾನಕಿ ಮನೆಗೆ ಹೋಗಿದ್ದಾಳೆ ಚಂಚಲ.ಜಾನಕಿಗೆ ನೋವಾಗುವ ಹಾಗೆ ಮಾತನಾಡಿ, ಬೇಕು ಅಂತನೆ ಇದನ್ನೆಲ್ಲ ಮಾಡುತ್ತಿದ್ದೀಯಾ ಎನ್ನುವ ಹಾಗೆ ಹೇಳಿ ಜಾನಕಿಯನ್ನು ಮತ್ತಷ್ಟು ನೋವಿಸಿದ್ದಾಳೆ ಚಂಚಲ. ಮುಂದೆ ಓದಿ..

ಸುಳ್ಳು ಆರೋಪ ಎಂದು ಹೇಳಿದ ಚಿರಂತನ್

ಸುಳ್ಳು ಆರೋಪ ಎಂದು ಹೇಳಿದ ಚಿರಂತನ್

ಚಿರಂತನ್ ವಿರುದ್ಧ ಕೇಳಿ ಬರುತ್ತಿದ್ದ ಕ್ರಿಮಿನಲ್ ಕೇಸ್ ಬಗ್ಗೆ ಚಂಚಲ ವಿಚಾರಿಸಿದಾಗ ಇದೆಲ್ಲ ಸುಳ್ಳು ಸ್ನೇಹೇತನ ವಿರುದ್ಧ ಹಾಕಿದ ಕೇಸ್ ಎಂದು ಚಂಚಲಳಿಗೆ ಯಾಮಾರಿಸಿದ್ದಾನೆ ಚಿರಂತನ್. ಪೊಲೀಸ್ ಅವರು ನನ್ನ ಮೇಲು ಎಫ್ ಐ ಆರ್ ಆಕಿದ್ರು. ಆದ್ರೆ ಆರೋಪ ಸುಳ್ಳು ಎಂದು ಸಾಭೀತಾಗಿದೆ. ಸುಮ್ಮನೆ ಕ್ರಿಮಿನಲ್ ಮಾಡಿ ಬಿಟ್ಟೆ ಎಂದು ಹೇಳಿ, ಚಂಚಲಳನ್ನು ನಂಬಿಸಿದ್ದಾನೆ ಚಿರಂತನ್.

ಸಿ ಎಸ್ ಪಿ ವಿರುದ್ಧ ರೊಚ್ಚಿಗೆದ್ದ ಚಿರಂತನ್

ಸಿ ಎಸ್ ಪಿ ವಿರುದ್ಧ ರೊಚ್ಚಿಗೆದ್ದ ಚಿರಂತನ್

ಭಾರ್ಗಿ ಕಂಡ್ರೆ ಸಿ ಎಸ್ ಪಿಗೆ ಆಗುವುದಿಲ್ಲ. ಹಾಗಾಗಿ ಇಂತಹ ವಿಚಾರಗಳನ್ನು ಎಳೆದು ಸುಮ್ಮನೆ ಮನೆ ನೆಮ್ಮದಿ ಹಾಳು ಮಾಡುತ್ತಿದ್ದಾರೆ ಎಂದು ಸಿ ಎಸ್ ಪಿ ವಿರುದ್ಧ ಮಾತನಾಡುತ್ತ ಜಾನಕಿಯನ್ನು ನಿಂದಿಸುತ್ತಿದ್ದಾನೆ ಚಿರಂತನ್. ಆದ್ರೆ ಚಂಚಲಗೆ ಚಿರಂತನ್ ಮತ್ತು ಭಾರ್ಗಿ ನಡೆಸುತ್ತಿರುವ ಸಂಚು ಗೊತ್ತಾಗದೆ ಜಾನಕಿ ಮತ್ತು ಸಿ ಎಸ್ ಪಿ ವಿರುದ್ಧ ತಪ್ಪು ತಿಳಿದುಕೊಂಡಿದ್ದಾಳೆ. ಚಿರಂತನ್ ಮೇಲೆಯೆ ತಪ್ಪು ತಿಳಿದುಕೊಂಡಿದ್ದಾಗಿ ಕ್ಷಮೆ ಕೇಳಿದ್ದಾಳೆ ಚಂಚಲ.

ಜಾನಕಿ ಬಳಿ ಬಂದ ಚಂಚಲ

ಜಾನಕಿ ಬಳಿ ಬಂದ ಚಂಚಲ

ಜಾನಕಿ ಬಗ್ಗೆಯೆ ತಪ್ಪು ತಿಳಿದುಕೊಂಡ ಚಂಚಲ. ಚಿರಂತನ್ ಜೊತೆ ಮದುವೆ ಆಗುವುದು ನಿನಗೆ ಇಷ್ಟವಿಲ್ಲದೆ ಹೀಗೆ ಮಾಡುತ್ತಿದ್ದೀಯಾ ಎಂದು ಜಾನಕಿ ಜೊತೆ ಸ್ವಲ್ಪ ಕಾರವಾಗಿ ಮಾತನಾಡಿದ್ದಾಳೆ ಚಂಚಲ. ಅಷ್ಟೆಯಲ್ಲ ಅಫ್ಪನಿಗಿಂತ ಸಿ ಎಸ್ ಪಿ ಯೆ ಹೆಚ್ಚಾಗಿ ಹೋದ್ರ ಎಂದು ಜಾನಕಿಗೆ ಪ್ರಶ್ನೆ ಮಾಡುತ್ತಿದ್ದಾಳೆ. ಚಿರಂತನ್ ತಪ್ಪಿಲ್ಲ ಅಂದ ಮೇಲೆ ಅವರ ವಿರುದ್ಧ ಸುಳ್ಳು ಹೇಳ ಬಾರದು ಎಂದು ಚಂಚಲ ಜಾನಕಿಗೆ ನೋವಾಗುವ ಹಾಗೆ ಮಾತನಾಡಿದ್ದಾಳೆ.

ಜಾನಕಿ ಮೇಲೆಯೆ ರೇಗಿದ ಭಾರ್ಗಿ

ಜಾನಕಿ ಮೇಲೆಯೆ ರೇಗಿದ ಭಾರ್ಗಿ

ಚಂಚಲ ಮದುವೆ ನಿಲ್ಲಿಸಲು ಬೇಕು ಅಂತನೆ ಮಾಡಿದ ಪ್ಲಾನ್ ಎಂದು ಜಾನಕಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ ಭಾರ್ಗಿ. ನಿನ್ನ ಮದುವೆ ಒಬ್ಬ ಮೋಸಗಾರನ ಜೊತೆ ನಡೆಯಿತು ಎಂದು, ಚಂಚಲಗೆ ಒಳ್ಳೆಯ ಗಂಡ ಸಿಗುತ್ತಿದ್ದಾರೆ ಎಂದು ಹೊಟ್ಟೆಕಿಚ್ಚಿನಿಂದ ತಂಗಿಯ ಜೀವನ ಹಾಳು ಮಾಡುತ್ತಿದ್ದೀಯಾ ಎಂದು ಭಾರ್ಗಿ ನೇರವಾಗಿಯೆ ಜಾನಕಿಗೆ ಹೇಳಿದ್ದಾರೆ. ಸಿ ಎಸ್ ಪಿ ಜೊತೆ ಸೇರಿಕೊಂಡು ಮನೆಯ ನೆಮ್ಮದಿ ಹಾಳು ಮಾಡಬೇಡ ಎಂದು ಜಾನಕಿ ಬಳಿ ಕೇಳಿಕೊಂಡಿದ್ದಾರೆ ಭಾರ್ಗಿ.

More from Filmibeat

English summary
Chanchala meets Janaki and admonishes her for suspecting him Iin Magalu Janaki serial. Janaki justifies her action and explains the reason behind suspecting Chiranthan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X