Don't Miss!
- News
ಆರ್ಥಿಕ ಸಂಕಷ್ಟದ ನಡುವೆಯೇ ಪಾಕಿಸ್ತಾನದಲ್ಲಿ ಮತ್ತೊಂದು ದುರಂತ: ಮಸೀದಿಯಲ್ಲಿ ಆತ್ಮಹುತಿ ದಾಳಿ- 46 ಸಾವು, 150 ಮಂದಿಗೆ ಗಾಯ
- Sports
IND W vs WI W: ಭಾರತದ ಉತ್ತಮ ಆಲ್ರೌಂಡ್ ಪ್ರದರ್ಶನ: ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ
- Lifestyle
ಜನವರಿ 30ಕ್ಕೆ ಶನಿ ಅಸ್ತ: 35 ದಿನದವರೆಗೆ ಈ 6 ರಾಶಿಯವರು ಹೆಚ್ಚು ಜಾಗ್ರತೆವಹಿಸಬೇಕು
- Finance
ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
- Technology
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಧೂಳ್ ಎಬ್ಸಿ ಚಿಂದಿಉಡಾಯಿಸುವ ಈಟಿವಿ ಪ್ರೋಗ್ರಾಂ
ಈ ಹೊಸ ಕಾರ್ಯಕ್ರಮಕ್ಕೆ 'ಢೀ ಜೂನಿಯರ್ಸ್' ಎಂದು ಹೆಸರಿಡಲಾಗಿದೆ. ಇದೇ ಜುಲೈ 28ರಿಂದ ಪ್ರತಿ ಶನಿವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಮಕ್ಕಳಿಗಾಗಿ ನಡೆಯುತ್ತಿರುವ ಅತಿದೊಡ್ಡ ನೃತ್ಯ ಕಾರ್ಯಕ್ರಮ ಇದಾಗಿದೆ. ಅನುಭವಿ ಕೊರಿಯೋಗ್ರಾಫರ್ ಗಳ ನೃತ್ಯ ತರಬೇತಿಯಲ್ಲಿ ಮಕ್ಕಳು ಕುಣಿಯಲಿದ್ದಾರೆ.
'ಧೂಳ್ ಎಬ್ಸಿ ಚಿಂದಿಉಡಾಯ್ಸಿ' ಎಂಬುದು 'ಢೀ ಜೂನಿಯರ್ಸ್' ಕಾರ್ಯಕ್ರಮದ ಸಬ್ ಟೈಟಲ್. ಕಿರುತೆರೆಯಲ್ಲಿ ಈಗಾಗಲೆ ತಮ್ಮದೇ ಆದಂತಹ ಶೈಲಿಯ ನಿರೂಪಣೆಗೆ ಹೆಸರಾಗಿರುವ ಅನುಶ್ರೀ ಕಾರ್ಯಕ್ರಮದ ನಿರೂಪಕಿ.
ವಿಜಯಶಾಲಿ ಜೋಡಿಗಳಿಗೆ ಅತ್ಯಾಕರ್ಷಕ ಭಾರಿ ಮೊತ್ತದ ಬಹುಮಾನ ದೊರೆಯುತ್ತದೆ. ಇದು ನೃತ್ಯಪಟುಗಳಿಗೆ ಮಾತ್ರವಲ್ಲದೆ ಅವರನ್ನು ತರಬೇತಿಗೊಳಿಸಿದ ಕೊರಿಯೋಗ್ರಾಫರ್ಗಳಿಗೂ ಕೂಡಾ ಸ್ಪರ್ಧೆ.
ಈ ಹಿಂದೆ ಇದೇ ಸರಣಿಯಲ್ಲಿ ಢೀ (ಬಿಗ್ಗೆಸ್ಟ್ ಡಾನ್ಸ್ ಶೋ) ಕಾರ್ಯಕ್ರಮವನ್ನು ಈಟಿವಿ ಕನ್ನಡ ವಾಹಿನಿ ನಡೆಸಿತ್ತು. ಆ ಕಾರ್ಯಕ್ರಮಕ್ಕೆ ಅಭೂತಪೂರ್ವ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು. ಆಗ ಕಿರುತೆರೆ ತಾರೆ ಶ್ವೇತಾ ಚೆಂಗಪ್ಪ ಕಾರ್ಯಕ್ರಮವನ್ನು ನಿರೂಪಿಸಿದ್ದರು.
ಅನುಭವಿ ಕೊರಿಯೋಗ್ರಾಫರ್ಗಳಾದ ಸಾಯಿ ಲಕ್ಷ್ಮಣ್, ವಿಜಯನಗರ ಮಂಜು, ಧನಕುಮಾರ ಮತ್ತು ಕಲೈ ತರಬೇತಿ ನೀಡಿದ್ದರು. 6 ಯುವ ಜೋಡಿಗಳ ಮಧ್ಯೆ ನಡೆದ ನೃತ್ಯ ಹಣಾಹಣಿಯನ್ನು ಇಮ್ರಾನ್, ಹರ್ಷ ಮತ್ತು ಮಾಲೂರ್ ಶ್ರೀನಿವಾಸ್ ಅವರು ತೀರ್ಪುಗಾರರಾಗಿದ್ದರು. ಈ ಬಾರಿಯ ಕಾರ್ಯಕ್ರಮ ಇನ್ನೂ ವೈವಿಧ್ಯಭರಿತವಾಗಿ ಮೂಡಿಬರುತ್ತಿದೆ ಎಂದು ವಾಹಿನಿ ಪ್ರಕಟಣೆಯಲ್ಲಿ ತಿಳಿಸಿದೆ. (ಏಜೆನ್ಸೀಸ್)