Don't Miss!
- Lifestyle ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- Automobiles ಜಾವಾ ಮೋಟಾರ್ಸೈಕಲ್ ಮಾಲೀಕರಿಗೆ ಸಿಹಿಸುದ್ದಿ: ಈ ಅವಕಾಶ ಕಳೆದುಕೊಳ್ಳಬೇಡಿ!
- Finance ಎಮರ್ಜೆನ್ಸಿ ಲೋನ್ ಅಂದ್ರೆ ಏನು, ಇದನ್ನು ಪಡೆದುಕೊಳ್ಳುವುದು ಹೇಗೆ ? ಇಲ್ಲಿದೆ ನೋಡಿ ಸುಲಭ ಉಪಾಯ
- News Yaduveer Wadiyar: ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ಗೆ ಶಾಕ್ ಕೊಟ್ಟ ಒಕ್ಕಲಿಗರು!
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈಟಿವಿ ಕನ್ನಡದಲ್ಲಿ ಕಾಮಿಡಿ ಸೀರಿಯಲ್ ತರರಂಪಂ
ಈಟಿವಿ ಕನ್ನಡ ವಾಹಿನಿಯಲ್ಲಿ ನೂತನ ಕಾಮಿಡಿ ಧಾರಾವಾಹಿ 'ತರರಂಪಂ' ಆರಂಭವಾಗುತ್ತಿದೆ. ಸೆಪ್ಟೆಂಬರ್ 3ರಿಂದ ಸಂಜೆ 6ರಿಂದ 6.30ಕ್ಕೆ ಈ ಹೊಸ ಹಾಸ್ಯ ಧಾರಾವಾಹಿ ಪ್ರಸಾರವಾಗಲಿದೆ. ಹಾಸ್ಯ ಧಾರಾವಾಹಿಗಳಿಗೆ ಪ್ರೇಕ್ಷಕರು ಮನಸೋಲುತ್ತಿರುವುದು ಗೊತ್ತಿರುವ ಸಂಗತಿಯೇ.
ಇದೇ ಸ್ಲಾಟ್ ನಲ್ಲಿ 'ಅನುವಾದ' ನಿರ್ದೇಸುತ್ತಿದ್ದ ಎಂ.ಎನ್. ಜಯಂತ್ ಅವರ ಸಾರಥ್ಯದಲ್ಲೇ 'ತರರಂಪಂ' ಮೂಡಿಬರಲಿದೆ. ರಂಗಭೂಮಿ ಹಿನ್ನೆಲೆಯಿಂದ ಬಂದಂತಹ ಜಯಂತ್ ಅವರ 'ಅನುವಾದ' ವಿಭಿನ್ನ ಕತೆ ಕಾರಣ ಎಲ್ಲರ ಗಮನಸೆಳೆದಿತ್ತು.
ನಿತ್ಯ ಬದುಕಿನ ಸಣ್ಣಪುಟ್ಟ ಸಂಗತಿಗಳೇ 'ತರರಂಪಂ' ಕಥಾವಸ್ತು. ಈ ಧಾರಾವಾಹಿಯಲ್ಲಿ ಆರು ಪ್ರಮುಖ ಪಾತ್ರಗಳಿರುತ್ತವೆ. ಮಹದೇವ ಹಾಗೂ ಆತನ ಕುಟುಂಬ ಸುತ್ತ ಸುತ್ತುವ ಕಥೆ.
ತನ್ನ ಮಗಳು ಲಕ್ಷ್ಮಿಯನ್ನು ಅಪಾರವಾಗಿ ಪ್ರೀತಿಸುವ ಈತ ಆಕೆ ತನ್ನ ಪಾಲಿಗೆ ಅದೃಷ್ಟದ ಲಕ್ಷ್ಮಿ ಎಂದೇ ಭಾವಿಸಿರುತ್ತಾನೆ. ಕತೆ ವಿನೋಧಭರಿತವಾಗಿ ಸಾಗುತ್ತದೆ. ವಾಣಿಶ್ರೀ ಹಾಗೂ ಲಕ್ಷ್ಮಿ ಉಳಿದ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಸಿಲ್ಲಿ ಲಲ್ಲಿ, ಪಾ.ಪ.ಪಾಂಡು ಕಾಮಿಡಿ ಸೀರಿಯಲ್ ಗಳ ಮೂಲಕ ಆರಂಭವಾದ ಈ ಟ್ರೆಂಡ್ ಮುಂದುವರಿಯುತ್ತಲೇ ಬರುತ್ತಿದೆ. ಕೌಟುಂಬಿಕ ಕಥೆಗಳ ನಡುವೆ ಈ ಪ್ರಯೋಗಗಳು ವೀಕ್ಷಕರಿಗೆ ಕಚಗುಳಿ ಯಿಡುತ್ತವೆ. ತರರಂಪಂ ಕೂಡ ತನ್ನ ವೀಕ್ಷಕರಿಗೆ ಇಷ್ಟವಾಗುತ್ತದೆ ಎಂಬ ನಿರೀಕ್ಷೆಯಲ್ಲಿದೆ ಈಟಿವಿ ಕನ್ನಡ ವಾಹಿನಿ. (ಒನ್ ಇಂಡಿಯಾ ಕನ್ನಡ)