ತವರು ಮನೆ ಸೇರಿದ ಅಮೂಲ್ಯ: ವೇದಾಂತ್ ಹೆಂಡತಿ ಮಾತನ್ನು ಕೇಳುತ್ತಾನಾ..?

By ಪ್ರಿಯಾ ದೊರೆ

'ಗಟ್ಟಿಮೇಳ' ಧಾರಾವಾಹಿಯಲ್ಲಿ ಅಮೂಲ್ಯ ಸದ್ಯ ಡುಪ್ಲಿಕೇಟ್ ವೈದೇಹಿ ಹಿಂದೆ ಬಿದ್ದಿದ್ದಾಳೆ. ವೇದಾಂತ್ ಅಮ್ಮ ಎಂದುಕೊಂಡು ಮನೆಗೆ ಬಂದಿರುವ ಚಂದ್ರ ಯಾರು ಎಂದು ಪತ್ತೆ ಹಚ್ಚಲು ಮುಂದಾಗಿದ್ದಾಳೆ. ಆದರೆ, ಈ ಬಗ್ಗೆ ಯಾವುದೇ ಮಾಹಿತಿ, ಸಾಕ್ಷಿ ಆಕೆಗೆ ಇನ್ನು ಸಿಕ್ಕಿದ್ದಂತೆ ಇಲ್ಲ.

ಅಲ್ಲದೇ ಅಮೂಲ್ಯಗೆ ಸಾಕ್ಷಿ ಇಲ್ಲದೇ ಮನೆಯಲ್ಲೂ ಯಾರ ಬಳಿಯೂ ಸತ್ಯ ಹೇಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಅಮೂಲ್ಯ ಸುಹಾಸಿನಿ ಮತ್ತು ಚಂದ್ರ ಹಿಂದೆಯೇ ಇದ್ದಾಳೆ. ಅವರಿಬ್ಬರ ನಡುವೆ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುತ್ತಿದ್ದಾಳೆ.

ದೇವಸ್ಥಾನಕ್ಕೆ, ಆಶ್ರಮಕ್ಕೆ ಹೋಗುತ್ತೇನೆ ಎಂದು ಸುಳ್ಳು ಹೇಳಿ ಚಂದ್ರ, ತೇಜಸ್‌ನನ್ನು ಭೇಟಿಯಾಗಲೂ ಮುಂದಾಗಿದ್ದಾಳೆ. ಅವಳನ್ನೇ ಹಿಂಬಾಲಿಸಿದ ಅಮೂಲ್ಯಗೆ ಚಂದ್ರ ಬಣ್ಣ ತಿಳಿದಿದೆ. ಇದನ್ನೆಲ್ಲಾ ವೀಡಿಯೋ ಮಾಡಿದ್ದಾಳೆ.

ಅಮೂಲ್ಯಗೆ ಜೋರು ಮಾಡಿದ ಚಂದ್ರ

ಅಮೂಲ್ಯಗೆ ಜೋರು ಮಾಡಿದ ಚಂದ್ರ

ಮನೆಗೆ ಬಂದ ಅಮೂಲ್ಯ, ಚಂದ್ರಳ ಮೇಲೆ ಕೂಗಾಡಿದ್ದಾಳೆ. ಯಾರು ನೀನು, ನಮ್ಮ ಮನೆಗೆ ಯಾಕೆ ಬಂದೆ ಎಂದು ಬೈಯುತ್ತಾಳೆ. ಆದರೆ ಚಂದ್ರ ವಾಪಸ್ ಅಮೂಲ್ಯಳಿಗೆ ಜೋರು ಮಾಡಿ ಬೈಯುತ್ತಾಳೆ. ಇಬ್ಬರು ವಾದ ಮಾಡುತ್ತಾರೆ. ಅಮೂಲ್ಯ, ಚಂದ್ರಾಗೆ ವೀಡಿಯೋ ತೋರಿಸಿ ಯಾರು ನೀನು, ನಿನಗೂ ತೇಜಸ್‌ಗೂ ಏನು ಸಂಬಂಧ, ನಮ್ಮ ಮನೆಗೆ ಯಾಕೆ ಬಂದೆ ಎಂದು ಪ್ರಶ್ನೆ ಮಾಡುತ್ತಾಳೆ. ಚಂದ್ರ ಬಗ್ಗುವುದಿಲ್ಲ. ಅಮೂಲ್ಯಳಿಗೆ ಎದುರುತ್ತರ ಕೊಡುತ್ತಾಳೆ.

ವೇದಾಂತ್ ಕೋಪಕ್ಕೆ ಸುಹಾಸಿನಿ ಕಾರಣ

ವೇದಾಂತ್ ಕೋಪಕ್ಕೆ ಸುಹಾಸಿನಿ ಕಾರಣ

ಈ ವೇಳೆ ಸುಹಾಸಿನಿ ಬೇಕಂತಲೇ ಚಂದ್ರಳನ್ನು ತಳ್ಳುತ್ತಾಳೆ. ಆಗ ವೇದಾಂತ್ ಬಂದು ಅಮೂಲ್ಯಗೆ ಬೈಯುತ್ತಾನೆ. ಅಮೂಲ್ಯ ಸತ್ಯ ಹೇಳಿದರೂ ಕೇಳುವುದಿಲ್ಲ. ವೀಡಿಯೋ ತೋರಿಸಲು ಬಂದರೂ ಕೂಡ ವೇದಾಂತ್ ಕೇಳದೇ ಅಮೂಲ್ಯ ಮೇಲೆ ಕೈ ಮಾಡಲು ಕೈ ಎತ್ತುತ್ತಾನೆ. ಆಗ ಅಮೂಲ್ಯ ಕೋಪ ಮಾಡಿಗೊಂಡು ರೂಮಿಗೆ ಹೋಗುತ್ತಾಳೆ. ಸುಹಾಸಿನಿ ಮಾಡಿದ ಕೆಲಸದಿಂದ ಅಮೂಲ್ಯ, ವೇದಾಂತ್ ಎದುರು ಕೆಟ್ಟವಳಾಗಿದ್ದಾಳೆ. ವೇದಾಂತ್ ಕೂಡ ಹೆಂಡತಿ ಮಾತು ಕೇಳದೇ ತಪ್ಪು ಮಾಡಿದ್ದಾನೆ.

ಮನೆ ಬಿಟ್ಟು ಬಂದ ಅಮೂಲ್ಯ

ಮನೆ ಬಿಟ್ಟು ಬಂದ ಅಮೂಲ್ಯ

ಅಮೂಲ್ಯ, ವೇದಾಂತ್ ಮೇಲೆ ಕೋಪ ಮಾಡಿಕೊಂಡು ಮನೆಯಿಂದ ಹೊರಡುತ್ತಾಳೆ. ಮನೆಯಲ್ಲಿ ಯಾರು ತಡೆದರೂ ಕೇಳುವುದಿಲ್ಲ. ಎಲ್ಲರಿಗೂ ವಾಪಸ್ ಬುದ್ಧಿ ಹೇಳಿ ಮನೆಯಿಂದ ಹೊರಡುತ್ತಾಳೆ. ಅಮೂಲ್ಯ ಸೀದಾ ತನ್ನ ತವರು ಮನೆಗೆ ಹೋಗುತ್ತಾಳೆ. ಅಮೂಲ್ಯ ಮನೆಯಲ್ಲಿ ಏನೆಲ್ಲಾ ನಡೆಯಿತು ಎಂಬುದನ್ನು ವಿವರಿಸುತ್ತಾಳೆ. ಅಮೂಲ್ಯ ಮನೆ ಬಿಟ್ಟು ಬಂದಿದ್ದಕ್ಕೆ ಮೊದಲು ಭಯಪಡುತ್ತಾರೆ. ನಂತರ ಸುಮ್ಮನಾಗುತ್ತಾರೆ. ವೇದಾಂತ್‌ಗೆ ಎಲ್ಲವೂ ಅರ್ಥವಾಗುತ್ತದೆ ಎಂದು ಸಮಾಧಾನ ಮಾಡುತ್ತಾರೆ. ಅಮೂಲ್ಯ ಕೂಡ ವೇದಾಂತ್ ಬಂದು ಕ್ಷಮೆ ಕೇಳುವವರೆಗೂ ಹೋಗುವುದಿಲ್ಲ ಎಂದು ಹೇಳುತ್ತಾಳೆ.

ಅಮೂಲ್ಯ ವೇದಾಂತ್‌ಗೆ ಸತ್ಯ ಹೇಳುತ್ತಾಳಾ..?

ಅಮೂಲ್ಯ ವೇದಾಂತ್‌ಗೆ ಸತ್ಯ ಹೇಳುತ್ತಾಳಾ..?

ಮನೆಯಲ್ಲಿ ಎಲ್ಲರೂ ವೇದಾಂತ್‌ಗೆ ಬೈಯುತ್ತಾರೆ. ನೀನು ಅಮೂಲ್ಯ ಮೇಲೆ ಕೈ ಎತ್ತಬಾರದಿತ್ತು. ಅಮೂಲ್ಯ ಮೇಲೆ ಅಷ್ಟು ಪ್ರೀತಿ ಇಟ್ಟಿರುವ ನೀನು ಹೀಗೆ ಮಾಡಬಾರದಿತ್ತು ಎಂದು ಹೇಳುತ್ತಾರೆ. ಇನ್ನು ಸಾರ್ಥಕ್, ವೇದಾಂತ್‌ಗೆ ಬುದ್ಧಿ ಹೇಳುತ್ತಾನೆ. ಮೊದಲು ಹೋಗಿ ಅಮೂಲ್ಯಳನ್ನು ಮನೆಗೆ ವಾಪಸ್ ಕರೆದುಕೊಂಡು ಬನ್ನಿ. ಮುಂದಿನ ಸಲ ಹೀಗೆ ನಡೆಯದಂತೆ ನೋಡಿಕೊಳ್ಳಿ ಎನ್ನುತ್ತಾನೆ. ಇನ್ನು ಅಮೂಲ್ಯ ವೇದಾಂತ್ ಗೆ ಸತ್ಯ ಹೇಳುತ್ತಾಳಾ..?

More from Filmibeat

English summary
Gattimela serial 16th december Episode Written Update. vedanth shows anger on amulya. Amulya goes to her mother house and this makes home disturbed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X