Don't Miss!
- Sports BCCI Central Contract: ಶ್ರೇಯಸ್, ಇಶಾನ್ ಕಡೆಗಣನೆ: ಯುವ ಆಟಗಾರರಿಗೆ ಮಣೆ
- News ಬೆಂಗಳೂರು ಬೆಳ್ಳಂದೂರು ಶಾಲಾ ಆವರಣದಲ್ಲಿ ಸ್ಪೋಟಕ ಪತ್ತೆ, ಮಕ್ಕಳು ಪೋಷಕರಲ್ಲಿ ಆತಂಕ
- Finance ಬಯೋಕಾನ್ ರಾಜಕೀಯ ದೇಣಿಗೆ ನೀಡಿಲ್ಲ ಎಂದ ಕಿರಣ್ ಮಜುಂದಾರ್ ಶಾ: ಹಾಗಿದ್ರೆ 6 ಕೋಟಿ ರೂ. ಯಾರದ್ದು?
- Technology ಇಂದು ಮಾರುಕಟ್ಟೆಗೆ ಬರಲಿದೆ ಗೆಸ್ಚರ್ ಮೂಲಕ ಕೆಲಸ ಮಾಡುವ ಸ್ಮಾರ್ಟ್ಫೋನ್!
- Automobiles Tata Nexon: ಮುಂಬರಲಿರುವ ಟಾಟಾ ನೆಕ್ಸಾನ್ ಸಿಎನ್ಜಿ ಕಾರಿನ ವಿಶೇಷತೆಗಳಿವು.. ಹೆಚ್ಚು ಮೈಲೇಜ್!
- Lifestyle ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮತ್ತೆ ಅಣ್ಣವ್ರ ಹಾಡಿನ ಆರಾಧನೆ ಮಾಡಿದ ಜ್ಞಾನೇಶ್ವರ್
ಈ ಬಾರಿಯ ಸರಿಗಮಪ ಕಾರ್ಯಕ್ರಮದ ಸ್ಪರ್ಧಿಗಳ ಪೈಕಿ ಹೆಚ್ಚು ಗಮನ ಸೆಳೆದ ಹುಡುಗ ಜ್ಞಾನೇಶ್ವರ. ಹಳ್ಳಿ ಹುಡುಗನಾದ ಜ್ಞಾನೇಶ್ವರ್ ತನ್ನ ಸಂಗೀತ ಜ್ಞಾನದ ಮೂಲಕ ಈಗಾಗಲೇ ಕಾರ್ಯಕ್ರಮದ ಹೈಲೆಟ್ ಆಗಿದ್ದಾನೆ.
ಬಳ್ಳಾರಿಯ ಈ ಬಡ ಹುಡುಗನ ಹಾಡು ಕೇಳಿ ಕೈ ಮುಗಿದ ಹಂಸಲೇಖ!
ಸದ್ಯ ಜ್ಞಾನೇಶ್ವರ್ ಮತ್ತೆ ಡಾ.ರಾಜ್ ಕುಮಾರ್ ಅವರ ಹಾಡನ್ನು ಹಾಡಿದ್ದಾನೆ. ಇಂದಿನ ಸಂಚಿಕೆಯಲ್ಲಿ ರಾಜ್ ಅವರ 'ಕಸ್ತೂರಿ ನಿವಾಸ' ಸಿನಿಮಾದ 'ಆಡಿಸಿ ನೋಡು... ಬೀಳಿಸಿ ನೋಡು...' ಹಾಡಿಗೆ ಜ್ಞಾನೇಶ್ವರ್ ಧ್ವನಿಯಾಗಿದ್ದಾರೆ. ಮತ್ತೆ ಜ್ಞಾನೇಶ್ವರ್ ಹಾಡು ಕೇಳಿ ಕಾರ್ಯಕ್ರಮದ ಮೂರು ತೀರ್ಪುಗಾರರು ಕೂಡ ತಲೆ ಬಾಗಿದ್ದಾರೆ. ಅಲ್ಲದೆ ಗಾಯಕ ವಿಜಯ ಪ್ರಕಾಶ್ ವೇದಿಕೆ ಮೇಲೆ ಬಂದು ಜ್ಞಾನೇಶ್ವರ್ ಜೊತೆಗೆ ಈ ಹಾಡನ್ನು ಹಾಡಿದ್ದಾರೆ.
ಈ ಹಿಂದೆ ರಾಜ್ ಕುಮಾರ್ ಅವರ 'ಹಾಲಲ್ಲಾದರೂ ಹಾಕು..ನೀರಲ್ಲಾದರೂ ಹಾಕು..' ಮತ್ತು 'ಬೆಳ್ಳಿ ಮೂಡಿತು.. ಕೋಳಿ ಕೂಗಿತು..' ಹಾಡನ್ನು ಹಾಡಿದ ಜ್ಞಾನೇಶ್ವರ್ ಗೋಲ್ಡನ್ ಬಜರ್ ಪಡೆದಿದ್ದರು. ಅದರ ಬಳಿಕ ಈಗ ಮತ್ತೆ ತನ್ನ ಹಾಡಿನ ಮೂಲಕ ಜ್ಞಾನೇಶ್ವರ್ ಕಾರ್ಯಕ್ರಮದಲ್ಲಿ ಗಾನಗಂಧರ್ವ ರಾಜ್ ಕುಮಾರ್ ಅವರನ್ನು ನೆನಪು ಮಾಡುತ್ತಿದ್ದಾರೆ. ಅಂದಹಾಗೆ, ಜ್ಞಾನೇಶ್ವರ್ ಅವರ ಈ ಹಾಡಿನ ಸಂಚಿಕೆ ಇಂದು ರಾತ್ರಿ 7.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ.