Just In
Don't Miss!
- News
ಡ್ರಗ್ಸ್ ಪ್ರಕರಣ: ಜೈಲಿನಲ್ಲಿ ಜೀವಕ್ಕೆ ಬೆದರಿಕೆ ಇದೆ ಎಂದು ಬಿಜೆಪಿ ಯುವ ನಾಯಕಿ ಪಮೇಲಾ ಆರೋಪ
- Automobiles
ರ್ಯಾಪಿಡ್ ಬದಲಾಗಿ ಹೊಸ ಸಿ ಸೆಗ್ಮೆಂಟ್ ಸೆಡಾನ್ ಬಿಡುಗಡೆ ಮಾಡಲಿದೆ ಸ್ಕೋಡಾ
- Lifestyle
ಬೆಡ್ನಲ್ಲಿ ಪುರುಷರ ಸಾಮರ್ಥ್ಯ ಹೆಚ್ಚಿಸುತ್ತೆ ಈ ಕೆಗೆಲ್ ವ್ಯಾಯಾಮ
- Sports
ಭಾರತ vs ಇಂಗ್ಲೆಂಡ್: ಕೊಹ್ಲಿ ಜೊತೆಗಿನ ಮಾತಿನ ಚಕಮಕಿ ಬಗ್ಗೆ ಪ್ರತಿಕ್ರಿಯಿಸಿದ ಬೆನ್ ಸ್ಟೋಕ್ಸ್
- Finance
ಮತ್ತಷ್ಟು ಕಡಿಮೆಯಾಯ್ತು ಚಿನ್ನದ ಬೆಲೆ: ಮಾರ್ಚ್ 04ರ ಬೆಲೆ ಇಲ್ಲಿದೆ
- Education
UAS Dharwad Recruitment 2021: ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮತ್ತೆ ಅಣ್ಣವ್ರ ಹಾಡಿನ ಆರಾಧನೆ ಮಾಡಿದ ಜ್ಞಾನೇಶ್ವರ್
ಈ ಬಾರಿಯ ಸರಿಗಮಪ ಕಾರ್ಯಕ್ರಮದ ಸ್ಪರ್ಧಿಗಳ ಪೈಕಿ ಹೆಚ್ಚು ಗಮನ ಸೆಳೆದ ಹುಡುಗ ಜ್ಞಾನೇಶ್ವರ. ಹಳ್ಳಿ ಹುಡುಗನಾದ ಜ್ಞಾನೇಶ್ವರ್ ತನ್ನ ಸಂಗೀತ ಜ್ಞಾನದ ಮೂಲಕ ಈಗಾಗಲೇ ಕಾರ್ಯಕ್ರಮದ ಹೈಲೆಟ್ ಆಗಿದ್ದಾನೆ.
ಬಳ್ಳಾರಿಯ ಈ ಬಡ ಹುಡುಗನ ಹಾಡು ಕೇಳಿ ಕೈ ಮುಗಿದ ಹಂಸಲೇಖ!
ಸದ್ಯ ಜ್ಞಾನೇಶ್ವರ್ ಮತ್ತೆ ಡಾ.ರಾಜ್ ಕುಮಾರ್ ಅವರ ಹಾಡನ್ನು ಹಾಡಿದ್ದಾನೆ. ಇಂದಿನ ಸಂಚಿಕೆಯಲ್ಲಿ ರಾಜ್ ಅವರ 'ಕಸ್ತೂರಿ ನಿವಾಸ' ಸಿನಿಮಾದ 'ಆಡಿಸಿ ನೋಡು... ಬೀಳಿಸಿ ನೋಡು...' ಹಾಡಿಗೆ ಜ್ಞಾನೇಶ್ವರ್ ಧ್ವನಿಯಾಗಿದ್ದಾರೆ. ಮತ್ತೆ ಜ್ಞಾನೇಶ್ವರ್ ಹಾಡು ಕೇಳಿ ಕಾರ್ಯಕ್ರಮದ ಮೂರು ತೀರ್ಪುಗಾರರು ಕೂಡ ತಲೆ ಬಾಗಿದ್ದಾರೆ. ಅಲ್ಲದೆ ಗಾಯಕ ವಿಜಯ ಪ್ರಕಾಶ್ ವೇದಿಕೆ ಮೇಲೆ ಬಂದು ಜ್ಞಾನೇಶ್ವರ್ ಜೊತೆಗೆ ಈ ಹಾಡನ್ನು ಹಾಡಿದ್ದಾರೆ.
ಈ ಹಿಂದೆ ರಾಜ್ ಕುಮಾರ್ ಅವರ 'ಹಾಲಲ್ಲಾದರೂ ಹಾಕು..ನೀರಲ್ಲಾದರೂ ಹಾಕು..' ಮತ್ತು 'ಬೆಳ್ಳಿ ಮೂಡಿತು.. ಕೋಳಿ ಕೂಗಿತು..' ಹಾಡನ್ನು ಹಾಡಿದ ಜ್ಞಾನೇಶ್ವರ್ ಗೋಲ್ಡನ್ ಬಜರ್ ಪಡೆದಿದ್ದರು. ಅದರ ಬಳಿಕ ಈಗ ಮತ್ತೆ ತನ್ನ ಹಾಡಿನ ಮೂಲಕ ಜ್ಞಾನೇಶ್ವರ್ ಕಾರ್ಯಕ್ರಮದಲ್ಲಿ ಗಾನಗಂಧರ್ವ ರಾಜ್ ಕುಮಾರ್ ಅವರನ್ನು ನೆನಪು ಮಾಡುತ್ತಿದ್ದಾರೆ. ಅಂದಹಾಗೆ, ಜ್ಞಾನೇಶ್ವರ್ ಅವರ ಈ ಹಾಡಿನ ಸಂಚಿಕೆ ಇಂದು ರಾತ್ರಿ 7.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ.