Jothe Jotheyali: ಅನು ಸಿರಿಮನೆ ಕೈ ತಪ್ಪಿ ಹೋಗುತ್ತಾನಾ ಆರ್ಯವರ್ಧನ್..?

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮೀರಾ ಮತ್ತೆ ಮೊದಲಿನಂತೆ ಆಕ್ಟೀವ್ ಆಗಿರುತ್ತಾಳೆ. ಆರ್ಯ ಸರ್ ಮತ್ತೆ ಬಂದಿದ್ದಾರೆ ಎಂಬುದು ಮೀರಾ ಖುಷಿಗೆ ಕಾರಣವಾಗಿದೆ. ಮತ್ತೆ ಚುರುಕಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಾಳೆ.

ಆಫೀಸಿಗೆ ಬಂದ ಮೀರಾ ಮೊದಲಿನಂತೆ ಎಲ್ಲರಿಗೂ ಕೆಲವನ್ನು ಪಟಪಟನೇ ಮಾಡಲು ಹೇಳುತ್ತಾಳೆ. ಅವಳ ಧ್ವನಿಯಲ್ಲಿ ಖುಷಿ ಮತ್ತು ಶಿಸ್ತು ಎದ್ದು ಕಾಣುತ್ತಿರುತ್ತದೆ. ಆದರೆ ಆಫೀಸಿನಲ್ಲಿ ಝೇಂಡೇ ಫೋಟೋವನ್ನು ನೋಡಿ ಬೇಸರ ಮಾಡಿಕೊಳ್ಳುತ್ತಾಳೆ.

ಆ ಫೋಟೋವನ್ನು ಮೊದಲು ತೆಗೆದು ಬಿಸಾಡಲು ಹೇಳುತ್ತಾಳೆ. ಆದರೆ, ಆಫೀಸ್ ಬಾಯ್ ಭಯ ಆಗುತ್ತೆ. ಅದಕ್ಕೆ ಆ ಫೋಟೋವನ್ನು ತೆಗೆಯಲಿಲ್ಲ ಎಂದು ಹೇಳುತ್ತಾನೆ. ಅದಕ್ಕೆ ಮೀರಾ ಯಾರಿಗೂ ಹೆದರಬೇಕಿಲ್ಲ ಎಂದು ಧೈರ್ಯವಾಗಿ ಹೇಳುತ್ತಾಳೆ.

ಶಾರದಾ ಬುದ್ಧಿ ಹೇಳಿದರೂ ಕೇಳದ ಅನು

ಶಾರದಾ ಬುದ್ಧಿ ಹೇಳಿದರೂ ಕೇಳದ ಅನು

ಅನುಗೆ ಶಾರದಾ ಹೇಳಿರುವ ಸತ್ಯ ಅರ್ಥವಾಗಿರುವುದಿಲ್ಲ. ಇದೆಲ್ಲಾ ಸುಳ್ಳು ಎಂದು ನಂಬಿರುತ್ತಾಳೆ. ಹಾಗಾಗಿ ಆರಾಧನಾಳಿಗೆ ಭರವಸೆಯನ್ನು ಕೊಡುತ್ತಾಳೆ. ಆರ್ಯ ಸರ್ ಇನ್ಯಾವತ್ತೂ ಬರುವುದಿಲ್ಲ. ಅವರು ಯಾವತ್ತಿದ್ದರು ನಿಮ್ಮ ವಿಶ್ವಾಸ್ ದೇಸಾಯಿ ಅವರೇ ಎಂದು ಹೇಳುತ್ತಾಳೆ. ಈ ಮಾತುಗಳನ್ನು ಕೇಳಿ ಶಾರದಾ, ಅನುಳನ್ನು ರೂಮಿಗೆ ಕರೆದುಕೊಂಡು ಹೋಗುತ್ತಾಳೆ. ನೀನು ತಪ್ಪಾಗಿ ತಿಳಿದುಕೊಂಡಿದ್ದೀಯಾ. ಅವನೇ ನಮ್ಮ ಆರ್ಯ ಎಂದು ಎಷ್ಟು ಬಿಸಿ ಹೇಳಿದರೂ ಕೇಳುವುದಿಲ್ಲ. ನನ್ನ ಪಾಲಿಗೆ ಆರ್ಯ ಸರ್ ಸತ್ತು ಕಾಲವೇ ಆಗಿದೆ. ಅವರು ಮತ್ತೆ ಬರುವುದಕ್ಕೆ ಸಾಧ್ಯವಿಲ್ಲ ಎಂದು ಹೇಳುತ್ತಾಳೆ. ಶಾರದಾ ಇಲ್ಲ ಇವನೇ ಆರ್ಯ ಎಂದು ಹೇಳಿದರೂ ಕೇಳುವುದಿಲ್ಲ.

ಸಮಾಧಾನ ಮಾಡಲು ಪ್ರಯತ್ನಿಸಿದ ಅನು

ಸಮಾಧಾನ ಮಾಡಲು ಪ್ರಯತ್ನಿಸಿದ ಅನು

ಇತ್ತ ಆರಾಧನಾ ಮನೆಯಲ್ಲಿ ನಡೆದ ಘಟನೆಗಳಿಂದ ಬೇಸರ ಮಾಡಿಕೊಂಡಿರುತ್ತಾಳೆ. ಹಾಗಾಗಿ ನಾನು ಮನೆಯಿಂದ ಹೊರಡುತ್ತೇನೆ. ವಿಶುಗೆ ನನ್ನ ನೆನಪಾದಾಗಲೇ ನನ್ನ ಬಳಿ ಬರಲಿ. ಅಲ್ಲಿಯವರೆಗೂ ಕಾಯುತ್ತೇನೆ ಎಂದು ಹೇಳುತ್ತಾಳೆ. ನಾನು ಇಷ್ಟು ದಿನ ಇದ್ದ ಭರವಸೆ ಎಲ್ಲಾ ಹೊರಟು ಹೋಗಿದೆ. ಕೋಪ ಮಾಡಿಕೊಂಡು ಹೇಳಿದ್ದಾಯ್ತು, ಪ್ರೀತಿಯಿಂದ ಹೇಳಿದ್ದಾಯ್ತು. ಆದರೆ ವಿಶುಗೆ ನನಗಿಂತ ನಿಮ್ಮ ಜೊತೆಗೆ ಜೀವನ ಮಾಡುವ ಆಸೆ ಇದೆ ಎಂದು ಹೇಳುತ್ತಾಳೆ. ಅನು ಆರಾಧನಾಳಿಗೆ ಸಮಾಧಾನ ಮಾಡುತ್ತಾಳೆ. ಇಷ್ಟೇ ದಿನ ಇದೀರಾ ಇನ್ನು ಸ್ವಲ್ಪ ದಿನ ಇರಿ ಎನ್ನುತ್ತಾಳೆ. ಆದರೆ ಆರಾಧನಾ ಕೇಳುವುದಿಲ್ಲ.

ಬೇಸರ ಮಾಡಿಕೊಂಡ ಆರಾಧನಾ

ಬೇಸರ ಮಾಡಿಕೊಂಡ ಆರಾಧನಾ

ಸಂಜು ಕೂಡ ಆರಾಧನಾ ಜೊತೆಗೆ ಹೋಗುವುದಿಲ್ಲ. ಆರಾಧನಾ ಏನೇ ಮಾತನಾಡಿದರೂ ತನಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ನಡೆದುಕೊಳ್ಳುತ್ತಾನೆ. ಇದರಿಂದ ಆರಾಧನಾ ಬೇಸರ ಮಾಡಿಕೊಳಳುತ್ತಾಳೆ. ಅನು ನೀವು ಹೋಗುವುದಕ್ಕೂ ಮೊದಲು ನಾನು ಇಲ್ಲಿಂದ ಹೊರಡುತ್ತೇನೆ. ಇವರು ಆರ್ಯ ಆಗುವುದಕ್ಕೆ ಸಾಧ್ಯಾನೇ ಇಲ್ಲ ಎಂದು ಹೇಳುತ್ತಾಳೆ.

ಅನು ಆರ್ಯನನ್ನು ಕಳೆದುಕೊಳ್ಳುತ್ತಾಳಾ..?

ಅನು ಆರ್ಯನನ್ನು ಕಳೆದುಕೊಳ್ಳುತ್ತಾಳಾ..?

ಅನು ಮಾತುಗಳನ್ನು ಕೇಳಿದರೆ, ಜೋಗ್ತವ್ವ ಹೇಳಿದಂತೆ ಆರ್ಯನನ್ನು ಕಳೆದುಕೊಳ್ಳಬಹುದು. ಕಣ್ಣ ಮುಂದೆಯೇ ಆರ್ಯ ಇದ್ದರೂ ಗುರುತಿಸದ ಅನು, ಆರಾಧನಾಳಿಗೆ ಬಿಟ್ಟು ಕೊಡುತ್ತಿದ್ದಾಳೆ. ಬೇರೆ ರೂಪದಲ್ಲಿರುವ ಆರ್ಯನನ್ನು ನಾನು ಒಪ್ಪಿಕೊಳ್ಳುವ ಬದಲು ಆರಾಧನಾ ಅವರ ತಮ್ಮ ಪತಿಯ ರೂಪದಲ್ಲಿರುವ ಇವರ ಜೊತೆ ಹೊಸ ಜೀವನ ಆರಂಭಿಸಲಿ ಎಂಬುದು ಅನು ಆಲೋಚನೆ. ಇದು ಹೀಗೆ ಮುಂದುವರಿದರೆ, ಆರ್ಯನನ್ನು ಅನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾಳೆ.

More from Filmibeat

English summary
Jothe Jotheyali Serial 10th January Episode Written Update. Anu strictly Says that this is not arya. He is vishwas desai. This makes more confusion at home. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X