Don't Miss!
- Sports
ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ಗೆ ಸೋಲು: ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವಿರುದ್ಧ ಬೆನ್ ಸ್ಟೋಕ್ಸ್ ಟೀಕೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಾನೇ ಆರ್ಯವರ್ಧನ್ ಎಂದ ಸಂಜುಗೆ ಹರ್ಷ ಮಾಡಿದ್ದು ಸರಿನಾ..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು, ಸಂಜು ಬಳಿ ಸಹಾಯ ಕೇಳುತ್ತಾಳೆ. ನನ್ನ ಪತಿಯ ಸಾವಿಗೂ ನಿಮಗೂ ಏನೋ ಸಂಬಂಧವಿದೆ ಎಂದು ಅನಿಸುತ್ತಿದೆ. ನೀವು ಟ್ರೀಟ್ ಮೆಂಟ್ ತೆಗೆದುಕೊಂಡರೆ ಸತ್ಯ ಗೊತ್ತಾಗುತ್ತೆ ಎಂದು ಹೇಳುತ್ತಾಳೆ.
ಸಂಜು, ಅನು ಮಾತನ್ನು ನಂಬುತ್ತಾನೆ. ಸರಿ ನಾನು ಟ್ರೀಟ್ ಮೆಂಟ್ ತೆಗೆದುಕೊಳ್ಳುತ್ತೇನೆ. ನಿಮಗೆ ನಾನು ಸಹಾಯ ಮಾಡುತ್ತೇನೆ ಎಂದು ಹೇಳುತ್ತಾನೆ. ಆದರೆ, ಇವರಿಬ್ಬರ ಮಾತಿನಿಂದ ಆರಾಧನಾ ಕನ್ಫ್ಯೂಸ್ ಆಗುತ್ತಾಳೆ.
ಮಾಳವಿಕಾ
ಬಣ್ಣ
ಬಯಲು
ಮಾಡುತ್ತಾಳಾ
ಸತ್ಯ..?
ಅನು ಡಾಕ್ಟರ್ ಬಳಿ ಮಾತನಾಡಲು ಆಸ್ಪತ್ರೆಗೆ ಹೋಗುತ್ತಾಳೆ. ಆದರೆ ಅಲ್ಲಿ ವೈದ್ಯರು ಇರುವುದಿಲ್ಲ. ವೈದ್ಯರ ಫೋನ್ ಕೂಡ ಸ್ವಿಚ್ ಆಫ್ ಆಗಿರುತ್ತದೆ. ಅನು ಎಷ್ಟೇ ಹೊತ್ತು ಕಾದರೂ ವೈದ್ಯರು ಬರುವುದಿಲ್ಲ.

ಸಂಜುಗೆ ಸತ್ಯ ಗೊತ್ತಾಯ್ತಾ..?
ಇತ್ತ ಸಂಜು ವೈದ್ಯರನ್ನು ಕಿಡ್ನ್ಯಾಪ್ ಮಾಡಿರುತ್ತಾನೆ. ಕಿಡ್ನ್ಯಾಪ್ ಮಾಡಿದ್ದಲ್ಲದೇ ಚಾಕು ತೋರಿಸಿ ಹೆದರಿಸುತ್ತಾನೆ. ನನಗೆ ಯಾಕೆ ಟ್ರೀಟ್ ಮೆಂಟ್ ಕೊಡುವುದಿಲ್ಲ. ನಾನು ಯಾರು ಎಂದು ಹೇಳಿ. ನನ್ನ ಹೆಸರು ಸಂಜು ಅಲ್ಲವೇ ಅಲ್ಲ. ನೀವೆಲ್ಲಾ ನನಗೆ ಸುಳ್ಳು ಹೇಳುತ್ತಿದ್ದೀರಾ ಎಂದು ಹೆದರಿಸುತ್ತಾನೆ. ಅಷ್ಟೇ ಅಲ್ಲದೇ, ನನಗೆ ಸಾಯಿಸಲು ಸಾಧ್ಯವಿಲ್ಲ. ಆದರೆ, ಈ ಕೆಲಸವನ್ನು ಈ ಮುಂಚೆ ನಾನು ಮಾಡಿದ್ದೀನಿ ಅನಿಸುತ್ತಿದೆ. ಸತ್ಯ ಹೇಳಿ ಬಚಾವ್ ಆಗಿ ಎನ್ನುತ್ತಾನೆ. ವೈದ್ಯರು ಸಂಜು ನಡವಳಿಕೆಯಿಂದ ಹೆದರಿಕೊಂಡು ಸತ್ಯ ಹೇಳುತ್ತಾರೆ. ಪೊಲೀಸರು ಸತ್ಯವನ್ನು ಮುಚ್ಚಿಡಲು ಹೇಳಿದ್ದಾರೆ. ನೀನೇ ಆರ್ಯವರ್ಧನ್ ಎಂದು ಹೇಳುತ್ತಾನೆ. ಆಗ ಸಂಜು ಖುಷಿಯಿಂದ ಮನೆಗೆ ಹೊರಡುತ್ತಾನೆ.

ವೈದ್ಯರಿಗೆ ಬೆದರಿಕೆ ಹಾಕಿದ ಝೇಂಡೇ!!
ಅಲ್ಲಿಂದ ವೈದ್ಯರು ತಪ್ಪಿಸಿಕೊಂಡು ಹೋಗುವಾಗ ಝೇಂಡೇ ಕಿಡ್ನ್ಯಾಪ್ ಮಾಡಿ ಬಿಡುತ್ತಾನೆ. ಗನ್ ತೋರಿಸಿ ಹೆದರಿಸುತ್ತಾನೆ. ಸಂಜು ಬಗ್ಗೆ ನನಗೆ ಎಲ್ಲಾ ಸತ್ಯವೂ ಗೊತ್ತಿದೆ. ಆದರೆ ಸಂಜುನೇ ಆರ್ಯ ಎಂಬ ಸತ್ಯವನ್ನು ನೀನು ಯಾವುದೇ ಕಾರಣಕ್ಕೂ ಯಾರಿಗೂ ಹೇಳಬಾರದು ಎನ್ನುತ್ತಾನೆ. ಆದರೆ ವೈದ್ಯರು ಈಗಾಗಲೇ ಸಂಜುಗೆ ಆತನೇ ಆರ್ಯವರ್ಧನ್ ಎಂದು ಹೇಳಿರುವುದನ್ನು ಹೇಳಿ ಬಿಡುತ್ತಾನೆ. ಇದರಿಂದ ಈಗ ಝೇಂಡೇ ಹೇಗಾದರೂ ಮಾಡಿ ಸಂಜುನನ್ನು ತನ್ನ ಪರ ಸೆಳೆದುಕೊಳ್ಳುವ ಬಗ್ಗೆ ಯೋಚಿಸುತ್ತಿರುತ್ತಾನೆ.

ನಾನೇ ಆರ್ಯವರ್ಧನ್ ಎಂದ ಸಂಜು
ಮನೆಗೆ ಬರುವ ಸಂಜುನನ್ನು ಆರಾಧನಾ ಮಾತನಾಡಿಸುತ್ತಾಳೆ. ಹೇಳದೆ ಕೇಳದೆ ಎಲ್ಲಿಗೆ ಹೋಗಿದ್ದೆ ಎಂದು ವಿಚಾರಿಸುತ್ತಾಳೆ. ಆದರೆ ಸಂಜು ನೋಡಿ ನಿಮ್ಮ ಗಂಡ ನಾನಲ್ಲ. ನಾನು ಆರ್ಯವರ್ಧನ್. ನನಗೆ ಡಾಕ್ಟರ್ ಹೇಳಿದ್ದಾರೆ. ನಾನು ವಿಶ್ವಾಸ್, ಸಂಜು ಇಬ್ಬರೂ ಅಲ್ಲ ಎಂದು ಕೂಗಿ ಕೂಗಿ ಹೇಳುತ್ತಾನೆ. ಮನೆಯಲ್ಲಿ ಎಲ್ಲರೂ ಗೊಂದಲಕ್ಕೊಳಗಾಗಿ ಸಂಜುಗೆ ಬುದ್ಧಿ ಹೇಳುತ್ತಿರುತ್ತಾರೆ. ಇದೇ ವೇಳೆಗೆ ಬರುವ ಅನು, ಸಂಜುಗೆ ಬೈಯುತ್ತಾಳೆ. ಇನ್ನೊಂದು ಸಲ ಹೀಗೆ ಹೇಳಬೇಡಿ ಎಂದು ಹೇಳುತ್ತಾಳೆ.

ಸಂಜು ಮಾತು ಕೇಳಿ ಎಲ್ಲರೂ ಶಾಕ್
ಎಷ್ಟು ಹೇಳಿದರೂ ಸಂಜು ಮಾತ್ರ ಕೇಳುವುದಿಲ್ಲ. ಅನುಗೆ ಕೋಪ ಬಂದು ಕೂಗಾಡುತ್ತಾಳೆ. ಆದರೂ ಸಂಜು ನಾನೇ ಆರ್ಯವರ್ಧನ್. ಬೇಕಿದ್ದರೆ ಹೋಗಿ ವೈದ್ಯರನ್ನು ವಿಚಾರಿಸಿ ಎಂದು ಹೇಳುತ್ತಾನೆ. ಆಗ ಹರ್ಷ ಸಂಜುಗೆ ನಿದ್ರೆ ಬರುವ ಇಂಜೆಕ್ಷನ್ ಅನ್ನು ಕೊಡುತ್ತಾನೆ. ಆರಾಧನಾಳಿಗೆ ಸಮಾಧಾನ ಮಾಡುತ್ತಾರೆ. ಆದರೆ ಸಂಜುನೇ ಆರ್ಯ ಎಂಬ ಸತ್ಯ ಗೊತ್ತಾಗುವ ಮುನ್ನವೇ ಝೇಂಡೇ ಕಿಡ್ನ್ಯಾಪ್ ಮಾಡುತ್ತಾನಾ ಎಂಬ ಕುತೂಹಲ ಸೃಷ್ಟಿಯಾಗಿದೆ.