Don't Miss!
- News 'ಚೊಂಬು' ವಾಗ್ದಾದ: ಕಾವೇರಿ ನೀರು ಹರಿಸಿ ಕನ್ನಡಿಗರಿಗೆ ಖಾಲಿ ಚೊಂಬು ಕೊಟ್ಟಿದ್ದು ನೀವು: ಬಿಜೆಪಿ ತಿರುಗೇಟು
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಳೆಯ ಫೋನ್ ಅನ್ನು ಸಂಜು ಹಾಳು ಮಾಡಿದ್ದೇಕೆ..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆರ್ಯವರ್ಧನ್, ಸಂಜು ಆಗಿ ಎಲ್ಲರ ಎದುರು ಕಾಣಿಸಿಕೊಂಡಿದ್ದಾರೆ. ಪ್ರೇಕ್ಷಕರಿಗೆ ಇದು ಗೊತ್ತಿದೆ. ಆದರೆ ಧಾರಾವಾಹಿಯಲ್ಲಿರುವ ಪಾತ್ರಗಳಿಗೆ ಆರ್ಯ ಸಾವನ್ನಪ್ಪಿದ್ದು, ಸಂಜು ಬೇರೆಯ ವ್ಯಕ್ತಿ ಎಂದು ತಿಳಿದಿದ್ದಾರೆ.
ಸಂಜುಗೆ ನೆನಪಿನ ಶಕ್ತಿ ಇಲ್ಲದ ಕಾರಣ ಆತ ಯಾರು ಎಂಬುದು ಆತನಿಗೂ ಗೊತ್ತಿಲ್ಲ. ಬೇರೆಯವರು ಹೇಳಿದ್ದನ್ನಷ್ಟೇ ಕೇಳುತ್ತಿದ್ದಾನೆ. ಆದರೆ ಅನು ವಿಚಾರದಲ್ಲಿ ಮಾತ್ರ, ಆಕೆಗೂ ತನಗೂ ಯಾವುದೋ ಸಂಬಂಧವಿದೆ ಎಂಬಂತೆ ನಡೆದುಕೊಳ್ಳುತ್ತಿದ್ದಾನೆ. ಇದರಿಂದ ಕೆಲ ಅನುಮಾನಗಳು ಕೂಡ ಸೃಷ್ಟಿಯಾಗಿವೆ.
ತಾರಕಕ್ಕೆ ಏರಿದ ನಂಜವ್ವ-ಬಂಗಾರಮ್ಮನ ಜಗಳ!
ಇನ್ನು ಝೇಂಡೇಗೆ ಸಂಜು ಮೇಲೆ ಹಾಗೂ ಆರ್ಯನ ಸಾವಿನ ಬಗ್ಗೆ ಅನುಮಾನವಿದ್ದು, ಈ ಬಗ್ಗೆ ಈಗಾಗಲೇ ತನ್ನದೇ ರೀತಿಯಲ್ಲಿ ತನಿಖೆಯನ್ನೂ ಆರಂಭಿಸಿದ್ದಾನೆ. ಆದರೆ, ಸತ್ಯ ಮೊದಲು ಯಾರಿಗೆ ತಿಳಿಯುತ್ತದೆ ಎಂಬುದೇ ಧಾರಾವಾಹಿಯಲ್ಲಿರುವ ಕುತೂಹಲಕಾರಿ ಅಂಶ.
ಫೋನ್ ಉಡುಗೊರೆ ಕೊಟ್ಟ ಹರ್ಷ
ಸಂಜು ಬಳಿ ಇರುವ ಫೋನ್ ವಿಶ್ವಾಸ್ ದೇಸಾಯಿ ಅವರದ್ದು. ಆ ಫೋನಿಗೆ ಆಗಾಗ ಆರಾಧನಾ ಕಾಲ್ ಬರುತ್ತಿರುತ್ತದೆ. ಆದರೆ ಸಂಜುಗೆ ಈ ಆರಾಧನಾ ಯಾರು..? ಅವರೊಂದಿಗೆ ಏನು ಮಾತನಾಡಬೇಕು ಎಂಬುದೇ ಗೊತ್ತಿಲ್ಲ. ಹಾಗಾಗಿ ಆ ಫೋನ್ ಅನ್ನೇ ಬಳಸುವುದಿಲ್ಲ. ತನ್ನ ಫೋನ್ ಹಾಳಾಗಿದೆ ಎಂಬ ಸುಳ್ಳನ್ನು ಹೇಳಿರುತ್ತಾನೆ. ಈ ಸುಳ್ಳನ್ನೇ ನಂಬಿದ ಹರ್ಷ, ಸಂಜುಗೆ ಹೊಸ ಫೋನ್ ಅನ್ನು ಗಿಫ್ಟ್ ಮಾಡುತ್ತಾನೆ. ಇದರಿಂದ ಸಂಜು ಖುಷಿ ಪಡುತ್ತಾನೆ. ಹರ್ಷ ಫೋನ್ ಅನ್ನು ಗಿಫ್ಟ್ ಮಾಡಿದ್ದಕ್ಕೆ ಶಾರದಾ ಕೂಡ ಸಂತಸ ಪಡುತ್ತಾಳೆ. ಇನ್ನು ನೀನು ಆರಾಧನಾ ಹಾಗೂ ನಿಮ್ಮ ತಾಯಿಗೆ ಫೋನ್ ಮಾಡಬಹುದು ಎಂದು ಹೇಳುತ್ತಾಳೆ.
ಮೊದಲ ಕರೆ ಅನುಗೆ ಮಾಡಿದ ಸಂಜು
ಇನ್ನು ಸಂಜು ಫೋನ್ ಅನ್ನು ತೆಗೆದುಕೊಂಡು ತನ್ನ ರೂಮಿಗೆ ಹೋಗುತ್ತಾನೆ. ನನ್ನ ಹಳೆಯ ಫೋನ್ ಇನ್ನು ಬೇಡ. ಅದರಲ್ಲಿರುವ ಕಾಂಟ್ಯಾಕ್ಟ್ ಗಳು ಕೂಡ ನನಗೆ ಬೇಡ. ನನಗೆ ಈ ಆರಾಧನಾ ಯಾರು ಎಂಬುದೇ ಗೊತ್ತಾಗುವುದಿಲ್ಲ. ಅವರ ಬಳಿ ಏನು ಮಾತನಾಡುವುದೋ. ಈ ಹೊಸ ಫೋನ್ನಲ್ಲಿ ನನಗೆ ನೆನಪಿರುವಂತಹ, ಬೇಕಾಗಿರುವಂತಹ ಕಾಂಟ್ಯಾಕ್ಟ್ ಗಳನ್ನು ಮಾತ್ರ ಸೇವ್ ಮಾಡಿಕೊಳ್ಳುತ್ತೀನಿ ಎಂದು ಹೇಳಿಕೊಂಡು ಮೊದಲು ಅನುಗೆ ಕರೆ ಮಾಡುತ್ತಾನೆ. ನನಗೆ ಹರ್ಷ ಹೊಸ ಫೋನ್ ಕೊಡಿಸಿದ್ರು, ಅದಕ್ಕೆ ನಿಮಗೆ ಫಸ್ಟ್ ಕಾಲ್ ಮಾಡ್ದೆ ಎಂದು ಹೇಳುತ್ತಾನೆ. ಅದಕ್ಕೆ ಅನು ನನಗ್ಯಾಕೆ ಮಾಡಿದ್ದು, ನಿಮ್ಮ ಹೆಂಡತಿಗೆ ಮಾಡಬೇಕಿತ್ತು. ಆಗ ಅವರು ಖುಷಿ ಪಡುತ್ತಿದ್ದರು ಎಂದು ಹೇಳುತ್ತಾಳೆ. ಸಂಜು ಹಾಗೆ ಇಲ್ಲ ನನ್ನ ಪ್ರೀತಿಯನ್ನ ನೆನಪು ಮಾಡಿದವರು ನೀವು ಎಂದು ಮ್ಯಾನೇಜ್ ಮಾಡುತ್ತಾನೆ.
ಜಗಳವಾಡಿದ ಮಾನ್ಸಿ
ಇತ್ತ ಮಾನ್ಸಿ ಹರ್ಷನ ಜೊತೆಗೆ ಜಗಳ ಮಾಡುತ್ತಾಳೆ. ಸಂಜು ಫೋನ್ ಚೆನ್ನಾಗಿಯೇ ಇತ್ತು. ನೀವ್ಯಾಕೆ ಅಷ್ಟು ಕಾಸ್ಟ್ಲಿ ಫೋನ್ ಕೊಡಿಸಿದ್ದು ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಹರ್ಷ ಫೋನ್ ಕೆಟ್ಟೋಗಿದೆ ಎಂದಿದ್ದಕ್ಕೆ ಕೊಡಿಸಿದ್ದು ಎಂದು ಹೇಳಿದಾಗ ಮಾನ್ಸಿ ಚೆಕ್ ಮಾಡೋಣ ಬನ್ನಿ ಎಂದು ಸಂಜು ರೂಮಿಗೆ ಹೋಗುತ್ತಾರೆ. ನಿಮ್ಮ ಫೋನ್ ಡಾಟಾಗಳನ್ನು ಟ್ರಾನ್ಸ್ ಫರ್ ಮಾಡಿಕೊಡೋಣ ಅಂತ ಬಂದ್ವಿ ಹಳೆ ಫೋನ್ ಕೊಡಿ ಎನ್ನುತ್ತಾಳೆ. ಸಂಜು ಫೋನ್ ಕೊಟ್ಟಾಗ ಆ ಫೋನ್ ಆನ್ ಆಗುವುದಿಲ್ಲ. ಕೊನೆಗೆ ತನ್ನ ಊಹೆ ತಪ್ಪು ಎಂದು ತಿಳಿದು ಹೋಗುತ್ತಾಳೆ.
ಸುಳ್ಳು ಹೇಳುತ್ತಿರುವ ಸಂಜು
ಆದರೆ ಸಂಜು ಆ ಫೋನ್ ಅನ್ನು ಬೇಕಂತಲೇ ಹಾಳು ಮಾಡಿರುತ್ತಾನೆ. ಅದು ಯಾಕೆ ಎಂಬುದು ಮಾತ್ರ ತಿಳಿಸುವುದಿಲ್ಲ. ಇನ್ನು ಸಂಜು, ಅನು ಬಳಿ ಹೇಳುತ್ತಿರುವ ಸುಳ್ಳಿನ ಬಗ್ಗೆ ಅವನೇ ಯೋಚಿಸುತ್ತಾನೆ. ನಾನ್ಯಾಕೆ ಇಷ್ಟೊಂದು ಸುಳ್ಳು ಹೇಳುತ್ತೇನೆ.? ನಾಳೆ ಅನು ಅವರು ನಿಮ್ಮ ಹೆಂಡತಿಗೆ ಫೋನ್ ಮಾಡಿದ್ದಿರಾ ಎಂದು ಕೇಳಿದರೆ ಏನು ಹೇಳುವುದು ಎಂದು ಯೋಚಿಸುತ್ತಾನೆ. ಇನ್ನು ಸಂಜು ಹೇಳುತ್ತಿರುವ ಸುಳ್ಳುಗಳಿಗೆ ಇಷ್ಟರಲ್ಲೇ ಕೊನೆ ಕಾದಿರೋದಂತೂ ಪಕ್ಕಾ.