twitter
    For Quick Alerts
    ALLOW NOTIFICATIONS  
    For Daily Alerts

    Jothe Jotheyali: ಅನು ಸಿರಿಮನೆಗೆ ಹೊಸಮನಿ ಅಜ್ಜಯ್ಯ ಹೇಳಿದ ಸತ್ಯವೇನು..?

    By ಪ್ರಿಯಾ ದೊರೆ
    |

    'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮೀರಾ, ಝೇಂಡೇ ಮಾತು ಕೇಳಿ ಎಡವಟ್ಟು ಮಾಡಿಕೊಂಡಿದ್ದಾಳೆ. ಇಡೀ ವರ್ಧನ್ ಕಂಪನಿಯನ್ನೇ ಸಂಕಷ್ಟಕ್ಕೆ ದೂಡಿದ್ದಾಳೆ. ಕಂಪನಿಯ ವಹಿವಾಟು ಎಲ್ಲವೂ ತಳೆಕೆಳಗಾಗಿದೆ.

    ಅನುಗೆ ಈಗ ಆರ್ಯ ಬದುಕಿದ್ದಾನೆ ಎಂಬುದರ ಬಗ್ಗೆ ಗಮನ ಕೊಡಬೇಕಾ..? ಸಂಜು ನಡವಳಿಕೆಗೆ ಪರಿಹಾರ ಹುಡುಕಬೇಕಾ ಇಲ್ಲವೇ ಕಂಪನಿಯಲ್ಲಿ ಆಗಿರುವ ತೊಂದರೆಗಳನ್ನು ಸರಿ ಪಡಿಸಬೇಕಾ ಎಂಬ ಗೊಂದಲವಿದೆ.

    'ಮತ್ತೆ ಮಯಾಮೃಗ'ದ ಮಹತಿ ಯಕ್ಷಗಾನಲ್ಲೂ ಎಕ್ಸ್‌ಪರ್ಟ್: ನಟಿ ನಿಖಿತಾ ಹಿನ್ನೆಯೇನು?'ಮತ್ತೆ ಮಯಾಮೃಗ'ದ ಮಹತಿ ಯಕ್ಷಗಾನಲ್ಲೂ ಎಕ್ಸ್‌ಪರ್ಟ್: ನಟಿ ನಿಖಿತಾ ಹಿನ್ನೆಯೇನು?

    ಆರಾಧನಾಳಿಗೆ ಈಗ ಈ ಮನೆಯೂ ಬೇಡ ಇವರ ಸಹವಾಸವೂ ಬೇಡ ಎಂಬಂತಾಗಿದೆ. ಮೊದಲು ತನ್ನ ಪತಿ ವಿಶ್ವಾಸ್ ದೇಸಾಯಿ ಅನ್ನು ಕರೆದುಕೊಂಡು ಊರಿಗೆ ಹೋಗಲು ನಿರ್ಧಾರ ಮಾಡಿದ್ದಾಳೆ.

    ಮತ್ತೆ ರಾಜನಂದಿನಿ ರೂಮಿಗೆ ಹೋದ ಸಂಜು

    ಮತ್ತೆ ರಾಜನಂದಿನಿ ರೂಮಿಗೆ ಹೋದ ಸಂಜು

    ಆರಾಧನಾ ಊರಿಗೆ ಹೊರಟ ವಿಚಾರವನ್ನು ಮನೆಯಲ್ಲಿ ಎಲ್ಲರಿಗೂ ತಿಳಿಸುತ್ತಾಳೆ. ಸಂಜು ಒಬ್ಬನೇ ತನ್ನನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲವಲ್ಲ ಎಂದು ಬೇಸರ ಮಾಡಿಕೊಂಡಿರುತ್ತಾನೆ. ಎಲ್ಲರಿಗೂ ಹೇಗೆ ಅರ್ಥ ಮಾಡಿಸುವುದು ಎಂದು ಯೋಚಿಸುತ್ತಿರುತ್ತಾನೆ. ಈ ವೇಳೆಗೆ ಹೊಸಮನಿ ಬಂದು ಮಾತನಾಡಿಸುತ್ತಾರೆ. ಆಗ ಸಂಜು ತನ್ನ ಮನದ ಮಾತುಗಳನ್ನು ಹೇಳಿಕೊಳ್ಳುತ್ತಾನೆ. ನಾನು ಆರ್ಯ ಎಂಬುದನ್ನು ಯಾರೂ ನಂಬುತ್ತಿಲ್ಲ ಎನ್ನುತ್ತಾನೆ. ಆಗ ಹೊಸಮನಿ ಅಜ್ಜಯ್ಯ ನಾನು ನಂಬುತ್ತೀನಿ. ನೀವು ಅವತ್ತು ರಾಜನಂದಿನಿ ಅವರ ರೂಮಿಗೆ ಹೋಗಿದ್ದನ್ನು ನೋಡಿದ್ದೀನಿ ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿ ಖುಷಿಯಾದ ಸಂಜು ಕೂಡಲೇ ರಾಜನಂದಿನಿ ರೂಮಿಗೆ ಹೋಗುತ್ತಾನೆ.

    BBK9: ಅರವಿಂದ್ ಬೆಡ್‌ ಅನ್ನೇ ಆಯ್ಕೆ ಮಾಡಿಕೊಂಡಿದ್ದ ದಿವ್ಯಾ ಕೊನೆಯಲ್ಲಿ ಸೀಕ್ರೆಟ್ ರಿವೀಲ್!BBK9: ಅರವಿಂದ್ ಬೆಡ್‌ ಅನ್ನೇ ಆಯ್ಕೆ ಮಾಡಿಕೊಂಡಿದ್ದ ದಿವ್ಯಾ ಕೊನೆಯಲ್ಲಿ ಸೀಕ್ರೆಟ್ ರಿವೀಲ್!

    ದೂರ ಹೋಗಲು ನಿರ್ಧರಿಸಿದ ಮೀರಾ

    ದೂರ ಹೋಗಲು ನಿರ್ಧರಿಸಿದ ಮೀರಾ

    ಆರಾಧನಾ ಊರಿಗೆ ಹೊರಟ ವಿಚಾರವನ್ನು ಮನೆಯಲ್ಲಿ ಎಲ್ಲರಿಗೂ ತಿಳಿಸುತ್ತಾಳೆ. ಸಂಜು ಒಬ್ಬನೇ ತನ್ನನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲವಲ್ಲ ಎಂದು ಬೇಸರ ಮಾಡಿಕೊಂಡಿರುತ್ತಾನೆ. ಎಲ್ಲರಿಗೂ ಹೇಗೆ ಅರ್ಥ ಮಾಡಿಸುವುದು ಎಂದು ಯೋಚಿಸುತ್ತಿರುತ್ತಾನೆ. ಈ ವೇಳೆಗೆ ಹೊಸಮನಿ ಬಂದು ಮಾತನಾಡಿಸುತ್ತಾರೆ. ಆಗ ಸಂಜು ತನ್ನ ಮನದ ಮಾತುಗಳನ್ನು ಹೇಳಿಕೊಳ್ಳುತ್ತಾನೆ. ನಾನು ಆರ್ಯ ಎಂಬುದನ್ನು ಯಾರೂ ನಂಬುತ್ತಿಲ್ಲ ಎನ್ನುತ್ತಾನೆ. ಆಗ ಹೊಸಮನಿ ಅಜ್ಜಯ್ಯ ನಾನು ನಂಬುತ್ತೀನಿ. ನೀವು ಅವತ್ತು ರಾಜನಂದಿನಿ ಅವರ ರೂಮಿಗೆ ಹೋಗಿದ್ದನ್ನು ನೋಡಿದ್ದೀನಿ ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿ ಖುಷಿಯಾದ ಸಂಜು ಕೂಡಲೇ ರಾಜನಂದಿನಿ ರೂಮಿಗೆ ಹೋಗುತ್ತಾನೆ.

    ಊರಿಗೆ ಹೋಗಲು ಒಪ್ಪಿದ ಸಂಜು

    ಊರಿಗೆ ಹೋಗಲು ಒಪ್ಪಿದ ಸಂಜು

    ಇನ್ನು ಅನು, ಸಂಜುನನ್ನು ಹುಡುಕಿ ಬರುತ್ತಾಳೆ. ಆಗ ಸಂಜು, ರಾಜನಂದಿನಿ ರೂಮಿನಿಂದ ಬಂದಿದ್ದಕ್ಕೆ ಬೈಯುತ್ತಾಳೆ. ಅಲ್ಲಿಗೆ ಯಾಕೆ ಹೋಗಿದ್ದು ಎಂದು ಕೇಳುತ್ತಾಳೆ. ಆಗ ಸಂಜು ನನ್ನ ಪ್ರಶ್ನೆಗಳಿಗೆ ಉತ್ತರ ಸಿಗುತ್ತಾ ಎಂದು ನೋಡೋದಕ್ಕೆ ಹೋಗಿದ್ದೆ ಎನ್ನುತ್ತಾನೆ. ಅನು ಆಗ ಝೇಂಡೇ ಜೊತಗಿರುವ ಫೋಟೋ ತೋರಿಸಿದ್ದಕ್ಕೆ, ಅವರೊಬ್ಬರೇ ನನ್ನ ಆರ್ಯ ಎಂದು ನಂಬಿರುವುದು ಎಂದು ಹೇಳುತ್ತಾನೆ. ಆಗ ಅನು ಇದೆಲ್ಲಾ ಬೇಡ. ನೀವು ಇಲ್ಲಿಂದ ಹೊರಡಿ, ಸುಮ್ಮನೆ ನಿಮ್ಮ ತಲೆಗೆ ಯಾರ್ಯಾರೋ ಏನೇನೋ ತುಂಬುತ್ತಿದ್ದಾರೆ ಎಂದು ಹೇಳುತ್ತಾಳೆ. ಇದಕ್ಕೆ ಸಂಜು ಒಪ್ಪಿಕೊಳ್ಳುತ್ತಾನೆ.

    BBK9:ಬಿಗ್ ಬಾಸ್ ಮನೆಯೊಳಗೆ ಹುಲಿ ಕುಣಿತ.. ರೂಪೇಶ್ ಶೆಟ್ಟಿಗೆ ಫುಲ್ ಸರ್ಪ್ರೈಸ್!BBK9:ಬಿಗ್ ಬಾಸ್ ಮನೆಯೊಳಗೆ ಹುಲಿ ಕುಣಿತ.. ರೂಪೇಶ್ ಶೆಟ್ಟಿಗೆ ಫುಲ್ ಸರ್ಪ್ರೈಸ್!

    ಹೊಸಮನಿ ಅಜ್ಜಯ್ಯ ಹೇಳಿದ್ದೇನು..?

    ಹೊಸಮನಿ ಅಜ್ಜಯ್ಯ ಹೇಳಿದ್ದೇನು..?

    ಸಂಜು ಅಲ್ಲಿಂದ ರೂಮಿಗೆ ಹೊರಟ ಮೇಲೆ ಹೊಸಮನಿ ಅಜ್ಜಯ್ಯ ಅನು ಜೊತೆ ಮಾತನಾಡುತ್ತಾರೆ. ಸಂಜು ಈ ಹಿಂದೆಯೂ ರಾಜನಂದಿನಿ ರೂಮಿಗೆ ಹೋದ ರೀತಿ ಬಗ್ಗೆ ಹೇಳುತ್ತಾರೆ. ಈ ಮಾತನ್ನು ಕೇಳಿದ ಅನು ಸಂಜು ಹೇಳುತ್ತಿರುವುದರ ಬಗ್ಗೆ ಮನದೊಳಗೆ ಯೋಚನೆ ಮಾಡುತ್ತಾಳೆ. ಸಂಜು ಮಾತುಗಳಲ್ಲಿ ಸತ್ಯ ಇದೆಯಾ ಎಂಬುದರ ಬಗ್ಗೆ ಯೋಚಿಸುತ್ತಾಳೆ. ಹಾಗಾದರೆ, ಅನುಗೆ ಸಂಜುನೇ ಆರ್ಯ ಎಂಬುದು ಗೊತ್ತಾಗುತ್ತಾ..?

    English summary
    Jothe Jotheyali Serial 29th December Episode Written Update. Meera feels guilt for her Mistakes. And she is worried about vardhan group.
    Thursday, December 29, 2022, 18:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X