ಕನ್ನಡ ಮನರಂಜನೆ ವಾಹಿನಿಗಳ ಮಧ್ಯೆ ಬಿರುಸಿನ ಸ್ಪರ್ಧೆ

<ul id="pagination-digg"><li class="next"><a href="/tv/parameshwar-gundkal-raghavendra-hunsur-etv-kannada-069045.html">Next »</a></li></ul>

Parameshwar Raghav
ಕನ್ನಡದಲ್ಲಿ ಮನರಂಜನೆಗಾಗಿ ಇರುವ ಚಾನೆಲ್ ಗಳಾದ (ಉದಯ, ಸುವರ್ಣ, ಈ ಟೀವಿ, ಜೀ ಕನ್ನಡ ಮತ್ತು ಕಸ್ತೂರಿ) ನಡುವೆ ಒಂದು ದೊಡ್ಡ ಮಟ್ಟದ ಸ್ಪರ್ಧೆಗೆ ವೇದಿಕೆ ಸಿದ್ಧವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಚಾನೆಲ್ ಮುಖ್ಯಸ್ಥರು ಪ್ರತಿಭಾವಂತ ಕ್ರಿಯೇಟಿವ್ ಹೆಡ್ ಗಳನ್ನು ತಮ್ಮಲ್ಲೇ ಉಳಿಸಿಕೊಳ್ಳುವುದಕ್ಕೆ ಅಥವಾ ಮತ್ತೊಂದು ಪ್ರತಿಸ್ಪರ್ಧಿ ಚಾನೆಲ್ಲಿನಿಂದ ಎಳೆದುಕೊಳ್ಳುವುದಕ್ಕೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಕೆಲವರು ಈಗಾಗಲೇ ಈ ನಿಟ್ಟಿನಲ್ಲಿ ಯಶಸ್ಸನ್ನೂ ಕಂಡಿದ್ದಾರೆ.

ಹಿಂದಿಯಲ್ಲಿ 'ಕಲರ್ಸ್' ವಾಹಿನಿಯನ್ನು ನಡೆಸುತ್ತಿರುವ 'ವಯಾಕಾಮ್' ಸಂಸ್ಥೆಯವರು ಈ ಟೀವಿ ಕನ್ನಡವನ್ನು ಕೊಂಡುಕೊಳ್ಳುವುದರೊಂದಿಗೇ ಈ ಸ್ಪರ್ಧೆ ಆರಂಭವಾಯಿತು ಎನಿಸುತ್ತದೆ. ಇದರಿಂದಾಗಿ ಈ ಟೀವಿ ಕನ್ನಡಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾಗಿರುವ ಒಂದು ಚಾನೆಲ್ ಬೆಂಬಲ ಸಿಕ್ಕಂತಾಯಿತು. ಇದಾಗಿ, ಸಂಸ್ಥೆಯ ಹಸ್ತಾಂತರದ ಕೆಲಸಕ್ಕೆ ತಿಂಗಳುಗಟ್ಟಲೇ ಸಮಯ ಹಿಡಿದು ಕೊನೆಗೂ ಈ ಟೀವಿ ಕನ್ನಡಕ್ಕೆ ಹೊಸ ಪ್ರೋಗ್ರಾಮಿಂಗ್ ಹೆಡ್ ಆಗಿ ಪರಮೇಶ್ವರ ಗುಂಡ್ಕಲ್ ಅವರು ನೇಮಕವಾಗಿದ್ದು ಈಗ ಹಳೆಯ ಸುದ್ದಿ.

ಕತೆಗಾರ, ಪತ್ರಕರ್ತ ಪರಮೇಶ್ವರ ಗುಂಡ್ಕಲ್ ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರೋಗ್ರಾಮಿಂಗ್ ಹೆಡ್ ಆಗಿದ್ದವರು. ಧಾರಾವಾಹಿಗಳಿಂದ ವೀಕ್ಷಕರನ್ನು ಸೆಳೆದುಕೊಳ್ಳಲು ಸಾಧ್ಯವಾಗದೇ ಜೀ ಕನ್ನಡ ಪರದಾಡುತ್ತಿದ್ದ ಸಂದರ್ಭದಲ್ಲಿ ಒಂದಾದ ಮೇಲೆ ಒಂದರಂತೆ ಗುಣಮಟ್ಟದ ಧಾರಾವಾಹಿಗಳನ್ನು ನೀಡಿದ (ಜೋಗುಳ, ಚಿ.ಸೌ. ಸಾವಿತ್ರಿ, ಪಾರ್ವತಿ ಪರಮೇಶ್ವರ, ದೇವಿ ಮತ್ತು ರಾಧಾ ಕಲ್ಯಾಣ) ಅವರು ಚಾನೆಲ್ಲಿನ ಕಾರ್ಯಕ್ರಮಗಳ ಗುಣಮಟ್ಟ ಮತ್ತು ಟಿಆರ್ ಪಿ ಯನ್ನು ಮೇಲಕ್ಕೆ ತೆಗೆದುಕೊಂಡು ಹೋದವರು. ಪ್ರತಿಭಾವಂತ ಪರಮೇಶ್ವರ್ ಗುಂಡ್ಕಲ್ ಮೇಲೆ ಕಣ್ಣಿಟ್ಟಿದ್ದ ವಯಾಕಾಮ್ ಸಂಸ್ಥೆಯವರು ಅವರನ್ನು ಈಗ ಈ ಟೀವಿ ಕನ್ನಡದ ಒಟ್ಟಾರೆ ಕಾರ್ಯಕ್ರಮ ವಿಭಾಗವನ್ನು ನೋಡಿಕೊಳ್ಳಲು ನೇಮಿಸಿದ್ದಾರೆ.

ಇದರ ಬೆನ್ನಲ್ಲೇ ಈಗ ಹೊಸದೊಂದು ಸುದ್ದಿ ಬಂದಿದೆ. ಅದೆಂದರೆ ಕನ್ನಡದ ಕೋಟ್ಯಾಧಿಪತಿ, ಪ್ಯಾಟೆ ಮಂದಿ ಕಾಡಿಗೆ ಬಂದ್ರು, ಹಳ್ಳಿ ಹೈದ ಪ್ಯಾಟೆಗೆ ಬಂದ ಇತ್ಯಾದಿ ಸೂಪರ್ ಹಿಟ್ ಕಾರ್ಯಕ್ರಮಗಳ ರೂವಾರಿ ರಾಘವೇಂದ್ರ ಹುಣಸೂರ್, ಈ ಟೀವಿ ಕನ್ನಡಕ್ಕೆ 'ನಾನ್ ಫಿಕ್ಶನ್' ಹೆಡ್' ಆಗಿ ಸೇರಿಕೊಂಡಿದ್ದಾರೆ. ಇದರಿಂದಾಗಿ ಈಟೀವಿ ಕನ್ನಡದ ಕಾರ್ಯಕ್ರಮ ವಿಭಾಗಕ್ಕೆ 'ಆನೆಬಲ' ಬಂದಂತಾಗಿದೆ. ಈ ಹಿಂದೆ ಸುವರ್ಣ ಚಾನೆಲ್ಲಿನ ಯಶಸ್ಸಿನ ಕತೆಗೆ ಮುಖ್ಯ ಕಾರಣರಾಗಿದ್ದವರು ಈ ರಾಘವೇಂದ್ರ ಹುಣಸೂರ್.

ಟಿಆರ್ ಪಿ ಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಸುವರ್ಣ ವಾಹಿನಿಯನ್ನು ಎರಡನೇ ಸ್ಥಾನಕ್ಕೆ ತಂದಿದ್ದರ ಯಶಸ್ಸು ಖಂಡಿತವಾಗಿಯೂ ರಾಘವೇಂದ್ರ ಹುಣಸೂರ್ ಅವರಿಗೆ ಸಲ್ಲಬೇಕು. ಕನ್ನಡದಲ್ಲಿ ಬಂದ ರಿಯಾಲಿಟಿ ಶೋಗಳಿಗೆ ಹೊಸ ವ್ಯಾಖ್ಯಾನ ಬರೆದವರು ಈ ರಾಘವೇಂದ್ರ ಹುಣಸೂರು. 'ಪ್ಯಾಟೆ ಮಂದಿ...' ಸರಣಿಯ ಜನಪ್ರಿಯತೆ ಎಂಥದ್ದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇದು ಇಡೀ ಕನ್ನಡದ ರಿಯಾಲಿಟಿ ಶೋಗಳಿಗೆ ಮರುವ್ಯಾಖ್ಯಾನ ನೀಡಿತು ಎಂದರೆ ಯಾವುದೇ ತಪ್ಪಿಲ್ಲ. ಸುವರ್ಣ ಚಾನೆಲ್ ಈಗ ಧಾರಾವಾಹಿಗಳಿಂದ ಜನಪ್ರಿಯ ಆಗಿರಬಹುದಾದರೂ ಅದಕ್ಕೆ ಸರಿಯಾದ ವೇದಿಕೆ ಕಲ್ಪಿಸಿಕೊಟ್ಟಿದ್ದು ರಾಘವೇಂದ್ರ ಅವರ ರಿಯಾಲಿಟಿ ಶೋಗಳು ಎನ್ನುವುದು ಎಲ್ಲರೂ ಗಮನಿಸಬೇಕಾದ ಅಂಶ.

ಈ ಬೆಳವಣಿಗೆಗಳ ಜೊತೆಯಲ್ಲಿ ಇನ್ನೊಂದಿಷ್ಟು ಜನ ಪ್ರತಿಭಾವಂತರು ಈ ಟೀವಿ ಸೇರಿಕೊಳ್ಳಲಿದ್ದಾರೆ ಎನ್ನುತ್ತಿವೆ ನಮ್ಮ ಸುದ್ದಿ ಮೂಲಗಳು. ಪರಮೇಶ್ವರ ಗುಂಡ್ಕಲ್ ಅವರ ನಿರ್ಗಮನದ ನಂತರ ಜೀ ಕನ್ನಡ ವಾಹಿನಿ ಅವರ ಜಾಗಕ್ಕೆ ಯಾರನ್ನೂ ನೇಮಿಸಿಲ್ಲ. ಬದಲಾಗಿ ಧಾರಾವಾಹಿಗಳ ವಿಭಾಗ ನೋಡಿಕೊಳ್ಳುವುದಕ್ಕೆ ಧಾರಾವಾಹಿಗಳಲ್ಲಿ ನಟಿಸಿ ಅನುಭವ ಇರುವ ಕಿಶೋರ್ ಆಚಾರ್ಯ ಅವರನ್ನು ಅದು ನೇಮಕ ಮಾಡಿದೆ. ಪ್ರೋಗ್ರಾಮಿಂಗ್ ಹೆಡ್ ನಿರ್ಗಮನದ ನಂತರ ಕೊಂಚ ಗೊಂದಲಗೊಂಡಂತೆ ಕಾಣಿಸುತ್ತಿರುವ ಜೀ ಕನ್ನಡದ ಧಾರಾವಾಹಿಗಳನ್ನು ಸರಿ ಮಾಡುವ ಜವಾಬ್ದಾರಿ ಈಗ ಬಂದಿರುವ ಕಿಶೋರ್ ಆಚಾರ್ಯ ಮೇಲಿದೆ. ಮುಂದಿನ ಪುಟ ನೋಡಿ...

<ul id="pagination-digg"><li class="next"><a href="/tv/parameshwar-gundkal-raghavendra-hunsur-etv-kannada-069045.html">Next »</a></li></ul>

More from Filmibeat

English summary
Kannada Entertainment Channels are in Heavy Competition now. This Started When Parameshwar Gudkal appointed as the Programming Head in Etv Kannada and Raghavendra Hunsur as Non-Fiction Head who are working earlier in Zee Kannada and Suvarna respectively. Have to wait and see the result in future. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X