Don't Miss!
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೀ ಕನ್ನಡ ನಾಮಿನೇಶನ್ ಪಾರ್ಟಿಯಲ್ಲಿ ಮಿಂಚಿದ ನಟ ನಟಿಯರು
'ಗಟ್ಟಿಮೇಳ' ಧಾರಾವಾಹಿಯಲ್ಲಿ ವೇದಾಂತ್ ತನ್ನ ತಾಯಿ ವೈದೇಹಿಯನ್ನೂ ಎಷ್ಟು ಪ್ರೀತಿ ಮಾಡುತ್ತಾರೆಯೋ ಹಾಗೆಯೇ ರಿಯಲ್ ಲೈಪ್ ನಲ್ಲೂ ವೇದಾಂತ್ ತಾಯಿಯಾಗಿ ಅಭಿನಯ ಮಾಡುತ್ತಿರುವ ನಗು ಮುಖದ ಚೆಲುವೆ ಸ್ವಾತಿಯನ್ನು ಕಂಡಾಗಲೆಲ್ಲ ರಕ್ಷ್ ಗೆ ತನ್ನ ತಾಯಿಯ ನೆನಪಾಗಿ ಬಿಡುತ್ತಂತೆ. ಏನೇ ನೋವಾದರೂ.. ಏನೇ ತೊಂದರೆಗಳು ಇದ್ದರೆ ಕೂಡ ಅವರ ಮೊಗದಲ್ಲಿ ನಗು ಮಾಯವಾಗುವುದು ಇಲ್ಲವಂತೆ.
ನಟ ರಕ್ಷ್, ಈ ವಿಚಾರವನ್ನು ಜೀ ಕನ್ನಡ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಅಮ್ಮಂದಿರಿಗೆ ಮೆಡಲ್ ಹಾಕಿ ಗೌರವಿಸುವ ಕಾರ್ಯಕ್ರಮದಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಆ ವೇಳೆ ನಟಿಯರ ಸ್ವಂತ ಮಕ್ಕಳೇ ಅವರಿಗೆ ಮೆಡಲ್ ತೊಡಿಸಿದ್ದು ವಿಶೇಷ.
ಹಿಂದೆ ಚಿಂಟೂ ಟಿವಿ ನಿರೂಪಕಿ..ಈಗ ಗಟ್ಟಿಮೇಳ ಆರತಿ: ಗಗನಾ ಕಿರುತೆರೆ ಜರ್ನಿ ಹೇಗಿತ್ತು..?
ಅಮ್ಮಂದಿರು ಕೂಡ ಸಖತ್ ಖುಷಿ ಪಟ್ಟರು. ಈ ವೇಳೆ ಮಾತನಾಡಿದ ನಟ ರಕ್ಷ್, ಸೆಟ್ ಅಲ್ಲಿ ಪ್ರತಿ ದಿನ ಬೆಳಗ್ಗೆ ಬಂದು ಒಂದು ಮುಖ ನಗು ನಗುತ್ತಾ ಇರುತ್ತದೆ ಅದು ನಮ್ಮ ಸ್ವಾತಿ ಮೇಡಂ ಬಿಟ್ಟರೆ ಬೇರೆ ಯಾರೂ ಅಲ್ಲ. ಏನೇ ಕಷ್ಟ ಇರಲಿ ಏನೇ ಟೆನ್ಶನ್ ಇರಲಿ ಈ ತಾಯಿ ಮುಖ ನೋಡಿದರೆ ಅದೆಲ್ಲ ಮರೆತು ಹೋಗುತ್ತದೆ. ನಾನು ಇವರನ್ನು ತುಂಬಾ ಪ್ರೀತಿ ಮಾಡುತ್ತೇನೆ ಎಂದಿದ್ದಾರೆ.
ಜೀ ಕನ್ನಡ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ನಟ ನಟಿಯರು ಸಖತ್ ಆಗಿ ಮಿಂಚಿದ್ದಾರೆ. ವರ್ಷಕ್ಕೆ ಒಂದು ಬಾರಿ ಜನರನ್ನು ಮನರಂಜಿಸವ ನಟ ನಟಿಯರಿಗೆ ಅವಾರ್ಡ್ ಕೊಟ್ಟು ಅವರ ಕಲೆಯನ್ನು ಪ್ರೋತ್ಸಾಹಿಸಿದ ಹಾಗೆ ಎಂಬುವುದು ಎಲ್ಲರ ಭಾವನೆ ಕೂಡ. ಆದ ಕಾರಣ ಸಾಕಷ್ಟು ನಟ ನಟಿಯರು ಈ ಕಾರ್ಯಕ್ರಮದಲ್ಲಿ ಖುಷಿಯಿಂದ ಭಾಗವಹಿಸಿದ್ದಾರೆ ಹಾಗೆಯೇ ಡಾನ್ಸ್ ಮಾಡುವ ಮೂಲಕ ನೆರೆದವರ ಮನಸ್ಸಿಗೆ ಮುದ ನೀಡಿದ್ದಾರೆ.
ನಟಿಯರಿಗೆ ಅವಾರ್ಡ್ ನೀಡಿದ ಪ್ರೇಮ್
ಇನ್ನು ನಟಿಯರಿಗೆ ನಟ ಪ್ರೇಮ್ ಅವಾರ್ಡ್ ನೀಡಿ ಮಾತನಾಡುತ್ತಾರೆ. ಇಲ್ಲಿ ನಿಂತಿರುವ ಎಲ್ಲ ನಟಿಯರು ಕೂಡ ಅವರ ನಿಜ ಹೆಸರಿಗಿಂತ ಧಾರವಾಹಿಯಲ್ಲಿ ಪಾತ್ರಕ್ಕೆ ಇಡುವ ಹೆಸರು ಹೆಚ್ಚಾಗಿ ಫೇಮಸ್ ಆಗಿದೆ. ಇದು ನಿಮಗೆ ಜನರು ಕೊಟ್ಟ ಬಹುದೊಡ್ಡ ಗಿಫ್ಟ್ ಎಂದು ಹೇಳಿದರೆ ತಪ್ಪಾಗದು. ಪಾತ್ರ ದ ಹೆಸರಿನಲ್ಲಿ ಜನರ ಮನರಂಜಿಸುವುದು ಸುಲಭದ ಮಾತಲ್ಲ ಬಹಳ ಖುಷಿ ಆಗುತ್ತದೆ ಎಂದು ಹೇಳಿದ್ದಾರೆ.
ಅಂಗವೈಕಲ್ಯ ವಿದ್ದರು ಅಮೋಘ ಸಾಧನೆ ಮಾಡಿದ ಪ್ರವೀಣ್
ಇನ್ನು ಮೆಡಲ್ ಪಡೆದ ಕೀರ್ತಿ ಪ್ರವೀಣ್ ಅಂಗವಿಕಲ ಆಗಿದ್ದರು ಕೂಡ ತನ್ನ ಪರಿಶ್ರಮ ದಿಂದ ಇಲ್ಲಿ ತನಕ ಆಗಮಿಸಿದ್ದಾರೆ. ಇವರು ಮೂಲತಃ ಬಾದಾಮಿಯವರು. ಕೆಲಸ ಶುರು ಮಾಡಬೇಕು ಎನ್ನುವಾಗ ತನ್ನ ತಂದೆಯೇ ನನಗೆ ಪ್ರೋತ್ಸಾಹ ನೀಡಲಿಲ್ಲ ಇದನ್ನೇ ಬಹುದೊಡ್ಡ ಚಾಲೆಂಜ್ ಆಗಿ ತೆಗೆದುಕೊಂಡು ನಾನು ಸಾಧನೆ ಮಾಡಿದ್ದೇನೆ ಆದರೆ ನಾನು ಏನೇ ಮಾಡಿದರೂ ನನ್ನ ಸಂಸ್ಥೆ ಅದಕ್ಕೆ ಕಾರಣ. ನಾನು ಮಾಡಿದ ಮೆಡಲ್ ನೀವು ಹಾಕಿಕೊಳ್ಳುಟ್ಟಿರುವುದು ನನಗೆ ಖುಷಿ ತಂದಿದೆ ಎಂದು ಹೇಳಿದ್ದಾರೆ.
ಅವಾರ್ಡ್ ಕೊಟ್ಟು ಸನ್ಮಾನ ಮಾಡಿದ ಜೀ ಕುಟುಂಬ
ಬಳಿಕ ಪ್ರವೀಣ್ ಅವರಿಗೆ ಜೀ ಕನ್ನಡದ ನಟ ನಟಿಯರು ಆಗಮಿಸಿ ಅವಾರ್ಡ್ ನೀಡಿ ಗೌರವ ಸಲ್ಲಿಸಿದರು. ಈ ವೇಳೆ ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಅನು ಸಿರಿಮನೆ ತಾಯಿ ಪಾತ್ರ ಮಾಡುತ್ತಿರುವ ಪುಷ್ಪ ಅಲಿಯಾಸ್ ಅಪೂರ್ವ ಅವರ ಜೀವನದ ಚಿತ್ರಣವನ್ನು ಅನಾವರಣ ಮಾಡಿದರು. ಅವರ ಸ್ವಂತ ಮಗಳು.. ತನ್ನ ತಾಯಿಗೆ ಯಾರ ಬೆಂಬಲ ಕೂಡ ಇರಲಿಲ್ಲ. ಆಕೆಗೆ ಏನಾದರು ಸಾಧನೆ ಮಾಡಬೇಕು ಎಂಬುವುದು ಅವರ ಆಸೆ ಆದರೆ ಅವರಿಗೆ ಉತ್ತಮ ನಟನೆ ಮಾಡಲು ಅವಕಾಶ ಸಿಕ್ಕರೂ ಅವರಿಗೆ ಉತ್ತಮ ಸಂಭಾವನೆ ಸಿಗುತ್ತಿರಲಿಲ್ಲ.
ಅಪೂರ್ವ ಕಥೆ ಬಿಚ್ಚಿಟ್ಟ ಮಗಳು
ಚಿಕ್ಕ ವಯಸ್ಸಿನಿಂದಲೇ ನನ್ನ ಅಮ್ಮ ಬಹಳ ಕಷ್ಟಪಟ್ಟಿದ್ದಾರೆ. ಈಗ ಐದು ವರ್ಷ ಆರು ವರುಷಗಳಿಂದ ಆಕೆ ಕೊಂಚ ಖುಷಿ ಆಗಿರುವುದನ್ನು ನಾವು ನೋಡುತ್ತಿದ್ದೇವೆ. ಅವರು ಕಷ್ಟ ಪಡುತ್ತಿದ್ದಾರೆ ಅಲ್ವಾ ಅದು ಸಾರ್ಥಕ ಆಯಿತು. ಎನ್ನುವ ಭಾವನೆ ಇದು ನಮ್ಮ ಜೀವನದಲ್ಲಿ. ಹಾಗಾಗಿ ಬಹಳ ಖುಷಿ ಇದೆ. ಬಹಳ ಕಷ್ಟ ಪಡುತ್ತಾರೆ. ನೋಡಿದವರೆಲ್ಲ ಇವರು ಬಹಳ ಒಳ್ಳೆ ಕಲಾವಿದೆ ಎಂದು ಹೇಳುತ್ತಾರೆ ಅದಕ್ಕೆ ತಕ್ಕಂತೆ ರೆಮ್ಯುನರೇಶನ್ ಇವರಿಗೆ ಸಿಗದ ಕಾರಣ ಆಕೆಗೆ ಬಹಳ ಕಷ್ಟ ಆಗುತ್ತದೆ. ಆದರೆ ಈ ಜೊತೆ ಜೊತೆಯಲಿ ಧಾರವಾಹಿ ಶುರು ಆದಾಗಿನಿಂದ ನನ್ನ ಅಮ್ಮ ಬಹಳ ಖುಷಿ ಇದ್ದಾರೆ ಎಂದು ಮನದ ನೋವನ್ನು ಹಂಚಿಕೊಂಡರು.