Just In
Don't Miss!
- News
ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ಸಾಧ್ಯತೆ
- Sports
ಭಾರತ vs ಆಸ್ಟ್ರೇಲಿಯಾ: ವೃತ್ತಿ ಜೀವನದಲ್ಲಿ ಅತ್ಯಂತ ನಿಧಾನದ ಅರ್ಧ ಶತಕ ಸಿಡಿಸಿದ ಪೂಜಾರ
- Automobiles
ಡೀಲರ್ ಬಳಿ ತಲುಪಿದ ಬಹುನಿರೀಕ್ಷಿತ ಟೊಯೊಟಾ ಫಾರ್ಚೂನರ್ ಫೇಸ್ಲಿಫ್ಟ್
- Lifestyle
ಶುದ್ಧ ದೇಸಿ ತುಪ್ಪದಲ್ಲಿದೆ ಸೌಂದರ್ಯವರ್ಧಕ ಗುಣಗಳು...
- Finance
34,000 ರುಪಾಯಿ ತನಕ ಕಾರುಗಳ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸೆಲೆಬ್ರಿಟಿ ಕಾರ್ ಡಿಸೈನರ್ ವಿರುದ್ಧ 5.7ಕೋಟಿ ರೂ.ವಂಚನೆ ಆರೋಪ ಮಾಡಿದ ಕಪಿಲ್ ಶರ್ಮಾ
ಖ್ಯಾತ ಕಮಿಡಿಯನ್, ನಟ ಕಪಿಲ್ ಶರ್ಮಾ ಸೆಲೆಬ್ರಿಟಿ ಕಾರ್ ಡಿಸೈನರ್ ಮತ್ತು ತಯಾರಕ ದಿಲೀಪ್ ಛಾಬ್ರಿಯಾ ವಿರುದ್ಧ ವಂಚನೆ ಆರೋಪ ಮಾಡಿದ್ದಾರೆ. ಈ ಸಂಬಂಧ ನಿನ್ನೆ (ಜನವರಿ 07) ಮುಂಬೈ ಕ್ರೈಂ ಬ್ರ್ಯಾಂಚ್ ಮುಂದೆ ವಿಚಾರಣೆಗೆ ಹಾಜರಾಗಿದ್ದರು.
ವಿಚಾರಣೆ ಬಳಿಕ ದಿಲೀಪ್ ವಿರುದ್ಧ ಹೊಸ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಕಪಿಲ್ ಶರ್ಮಾ, ದಿಲೀಪ್ ಛಾಬ್ರಿಯಾ 5.7 ಕೋಟಿ ರೂ. ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಕಸ್ಟಮೈಸ್ ಮಾಡಿದ ಹೊಸ ವ್ಯಾನಿಟಿ ವ್ಯಾನ್ ನೀಡುವುದಾಗಿ ಹೇಳಿದ್ದ ದಿಲೀಪ್ ಗೆ 5.7ಕೋಟಿ ರೂ. ಕೊಟ್ಟಿರುವುದಾಗಿ ಕಪಿಲ್ ಶರ್ಮಾ ದೂರಿದ್ದಾರೆ.
ವಂಚನೆ ಪ್ರಕರಣ: ಕಪಿಲ್ ಶರ್ಮಾಗೆ ಮುಂಬೈ ಪೊಲೀಸರ ಸಮನ್ಸ್
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಪರಾದ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಮಿಲಿಂದ್, ' ಪ್ರಾಥಮಿಕ ವಿಚಾರಣೆಯಲ್ಲಿ ವಂಚನೆ ಮತ್ತು ಹಣವನ್ನು ದುರುಪಯೋಗ ಪಡಿಸಿಕೊಂಡಿರುವುದು ಗೊತ್ತಾಗುತ್ತಿದೆ. ನಾವು ಎಫ್ ಐ ಆರ್ ದಾಖಲಿಸುತ್ತೇವೆ' ಎಂದು ಹೇಳಿದ್ದಾರೆ.
2017ರಲ್ಲಿ ಹೊಸ ವ್ಯಾನಿಟಿ ವ್ಯಾನ್ ನೀಡುವುದಾಗಿ ಮಾತುಕತೆ ನಡೆದಿತ್ತು. ಆ ಸಮಯದಲ್ಲಿ 5.7 ಕೋಟಿ ರೂ. ಆದರೆ ಇದುವರೆಗೂ ವ್ಯಾನಿಟಿ ವ್ಯಾನ್ ಇನ್ನೂ ತಲುಪಿಸಿಲ್ಲ. ಅಲ್ಲದೇ ಪಾರ್ಕಿಂಗ್ ಶುಲ್ಕವಾಗಿ ಹೆಚ್ಚಿನ ಹಣವನ್ನು ಪಡೆದಿದ್ದಾರೆ ಎಂದು ದಿಲೀಪ್ ವಿರುದ್ಧ ಕಪಿಲ್ ಆರೋಪಿಸಿದ್ದಾರೆ.
2020ರಲ್ಲಿ ಸೆಲೆಬ್ರಿಟಿ ಡಿಸೈನರ್ ದಿಲೀಪ್ ಅವರನ್ನು ಖೋಟಾ ಮತ್ತು ವಂಚನೆ ಪ್ರಕರಣದಲ್ಲಿ ಬಂಧಸಲಾಗಿದೆ. ಬಂಧನಕ್ಕೊಳಗಾದ ದಿಲೀಪ್ ನಿಂದ ಮುಂಬೈ ಪೊಲೀಸರು ಕೆಲವು ಕಾರುಗಳನ್ನು ವಶಪಡಿಸಿಕೊಂಡಿದ್ದು, ಆತ ಕಾರುಗಳ ನೋಂದಾವಣಿಯಲ್ಲಿ ಸಹ ವಂಚನೆ ಎಸಗಿದ್ದಾನೆ ಎಂಬ ಅಂಶ ಬೆಳಕಿಗೆ ಬಂದಿದೆ.