ಅನುಪಮಾ ಬಳಿಯಿದ್ದ 'ಸೂಪರ್ ಅಧಿಕಾರ'ದಿಂದ ಕೃಷಿಗೆ ಅದೃಷ್ಟ
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ 8ನೇ ವಾರ ಯಶಸ್ವಿಯಾಗಿ ಮುಗಿದು, 9ನೇ ವಾರಕ್ಕೆ ಪ್ರವೇಶ ಮಾಡಿದೆ. ಕಳೆದ ಜಗನ್ ಬಿಗ್ ಮನೆಯ ಕ್ಯಾಪ್ಟನ್ ಆಗಿದ್ದರು. ಈ ವಾರ ಜಗನ್ ಕ್ಯಾಪ್ಟನ್ ಕೋಣೆಯನ್ನ ಸ್ನೇಹಿತೆಗಾಗಿ ಬಿಟ್ಟುಕೊಟ್ಟಿದ್ದಾರೆ.
ಹೌದು, ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಆಟವಾಡಿದ್ದು ಕೇವಲ ಮೂವರು ಮಾತ್ರ. ಉಳಿದವರು ಯಾರು ಕ್ಯಾಪ್ಟನ್ ರೇಸ್ ನಲ್ಲಿ ಪಾಲ್ಗೊಳ್ಳಲಿಲ್ಲ. ಅದಕ್ಕೆ ಕಾರಣ ಅನುಪಮ ಗೌಡ.
ಅನುಪಮಾ ಅವರ ಕೃಪಾ ಕಟಾಕ್ಷದಿಂದ ಜಯ ಶ್ರೀನಿವಾಸನ್, ಕೃಷಿ ತಾಪಂಡ ಹಾಗೂ ದಿವಾಕರ್ ಮಾತ್ರ ಕ್ಯಾಪ್ಟನ್ ಆಟವಾಡಿದರು. ಕೊನೆಗೆ ಈ ಆಟದಲ್ಲಿ ಗೆದ್ದು ಈ ವಾರದ ನಾಯಕತ್ವ ವಹಿಸಿದ್ದು ಕೃಷಿ ತಾಪಂಡ. ಹಾಗಿದ್ರೆ, ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ ಹೇಗಿತ್ತು? ಮುಂದೆ ಓದಿ.....

ಕ್ಯಾಪ್ಟನ್ ಆಯ್ಕೆಗಾಗಿ ಬಿಗ್ ಬಾಸ್ ಕೊಟ್ಟ ಟಾಸ್ಕ್
ತಮ್ಮ ಸೊಂಟಕ್ಕೆ ಪಟ್ಟಿಕೊಂಡು, ದೇಹವನ್ನ ಚಾಚಿ ಎದುರಗಡೆ ನೀಡಲಾಗಿದ್ದು 'ಬಸರ್' (buzzer) ಅನ್ನ ಒತ್ತಿ ಹಿಡಿಬೇಕು. ಮೂವರಲ್ಲಿ ಯಾರೂ ಹೆಚ್ಚು ಕಾಲ ಒತ್ತಿ ಹಿಡಿಯುತ್ತಾರೋ ಅವರು ನಾಯಕರಾಗಿ ಆಯ್ಕೆ ಆಗುತ್ತಾರೆ.

ಅನುಪಮ ಗೌಡ ಸೂಪರ್ ಅಧಿಕಾರ
ಕಳೆದ ವಾರ ಸಿಹಿ ಕಹಿ ಚಂದ್ರು ಅವರು ನೀಡಿದ್ದ ಸೂಪರ್ ಅಧಿಕಾರದ ಅನ್ವಯ ಮೂರು ಜನ ಮಾತ್ರ ಕ್ಯಾಪ್ಟನ್ ಆಯ್ಕೆಯಾಗಿ ಆಟವಾಡಬಹುದು ಎಂದು ಬಿಗ್ ಬಾಸ್ ಸೂಚಿಸಿದರು. ಇದರ ಅನುಸಾರ ಅನುಪಮಾ, ಜಯ ಶ್ರೀನಿವಾಸನ್, ಕೃಷಿ ತಾಪಂಡ ಹಾಗೂ ದಿವಾಕರ್ ಅವರ ಹೆಸರು ಸೂಚಿಸಿದರು.

ಕೃಷಿ ಜಯಶಾಲಿ
ಬಿಗ್ ಬಾಸ್ ನೀಡಿದ್ದ ಚಟುವಟಿಕೆಯಲ್ಲಿ ಮೊದಲು ಜಯಶ್ರೀನಿವಾಸನ್ ಸೋತರು. ನಂತರ ದಿವಾಕರ್ ಕೂಡ ಸೋತರು. ಹೆಚ್ಚು ಕಾಲ (buzzer) ಒತ್ತಿ ಹಿಡಿದಿದ್ದ ಕೃಷಿ ಕ್ಯಾಪ್ಟನ್ ಆಗಿ ಆಯ್ಕೆ ಆದರು.

ಕೃಷಿ ತಾಪಂಡಗೆ ಒಲಿದ ಅದೃಷ್ಟ
ಈಗಾಗಲೇ ಮನೆಯಿಂದ ಎಲಿಮಿನೇಟ್ ಆಗಿದ್ದ ಕೃಷಿ ತಾಪಂಡ, ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೆ ಮನೆ ಪ್ರವೇಶ ಮಾಡಿದ್ದರು. ಈಗ ಕ್ಯಾಪ್ಟನ್ ಆಗುವ ಮೂಲಕ ಈ ವಾರದ ನಾಮಿನೇಷನ್ ನಿಂದ ಹೊರಗುಳಿಯಲಿದ್ದಾರೆ.


Click it and Unblock the Notifications











