Don't Miss!
- Sports Hardik Pandya: ಹಾರ್ದಿಕ್ ಪಾಂಡ್ಯರಲ್ಲಿನ ನಾಯಕತ್ವದ ಗುಣಗಳು ಕಾಣೆಯಾಗಿವೆಯಾ?
- Finance ಕಳೆದ 5 ವರ್ಷಗಳಲ್ಲಿ ಸಂಸದ ಡಿಕೆ ಸುರೇಶ್ ಅವರ ಆಸ್ತಿ 75% ರಷ್ಟು ಹೆಚ್ಚಳ, ವಿವರ
- Technology ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿಸುದ್ದಿ!..ಬಜೆಟ್ ದರದಲ್ಲಿ ಹೊಸ ಪ್ಲ್ಯಾನ್ ಲಾಂಚ್!
- News Gold Price: ಇಂದು ಮತ್ತಷ್ಟು ಹೆಚ್ಚಾದ ಬಂಗಾರದ ಬೆಲೆ: ಬೆಳ್ಳಿಯೂ ಬಲು ದುಬಾರಿ
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೆ.10ರಿಂದ ಉದಯ ಟಿವಿಯಲ್ಲಿ ಮಹಾಭಾರತ
ಈಗ ಈ ಸಂಸ್ಥೆ ನಿರ್ಮಿಸಿರುವ 'ಮಹಾಭಾರತ' ಧಾರಾವಾಹಿ ಇದೇ ಸೆಪ್ಟೆಂಬರ್ 10ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 6ರಿಂದ 6.30ರವರೆಗೂ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. ಈ ಧಾರಾವಾಹಿಯ ಶೀರ್ಷಿಕೆ ಗೀತೆಯನ್ನು ಜನಪ್ರಿಯ ಗಾಯಕ ಶಂಕರ್ ಮಹದೇವನ್ ಅವರು ಹಾಡಿದ್ದು ವೀರ್ ಸಮರ್ಥ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಸಿನಿವಿಸ್ತಾಸ್ ಸಂಸ್ಥೆಯ ಸುನಿಲ್ ಮೆಹ್ತಾ ಹಾಗೂ ಪ್ರೇಮ್ ಕಿಶನ್ ಈ ಧಾರಾವಾಹಿ ನಿರ್ಮಾಪಕರು. ನಿರ್ದೇಶನ ಕಿಶನ್ ಸೇಥಿ. ಸಾವಂತ್ ಹಾಗೂ ಶರವಣ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಜೆ.ಎಂ. ಪ್ರಹ್ಲಾದ್ ಚಿತ್ರಕತೆ ಹಾಗೂ ಸಂಭಾಷಣೆ ಬರೆದಿದ್ದು, ರುದ್ರಮೂರ್ತಿ ಶಾಸ್ತ್ರಿ ಅವರು ಸಂಭಾಷಣೆಗಳನ್ನು ರಚಿಸಿದ್ದಾರೆ.
ಅದ್ಭುತವಾದ ಅರಮನೆ, ಕೋಟೆ, ಯುದ್ಧ ಪ್ರಾಂಗಣ ಸೆಟ್ ಗಳನ್ನು ವಸಂತಕುಲಕರ್ಣಿ ಮಾಡಿಕೊಟ್ಟಿದ್ದಾರೆ. ಸಿನಿವಿಸ್ತಾಸ್ ಸಂಸ್ಥೆ ಹಲವಾರು ಮೆಗಾ ಧಾರಾವಾಹಿಗಳನ್ನು ನಿರ್ಮಿಸಿದ್ದು ಕಿರುತೆರೆ ಕ್ಷೇತ್ರದಲ್ಲಿ ತನ್ನದೇ ಆದಂತಹ ಛಾಪನ್ನು ಮೂಡಿಸಿದೆ. ಈಗ ಕನ್ನಡದಲ್ಲಿ ಇಂಥಹದ್ದೊಂದು ಪ್ರಯೋಗವನ್ನು ಮಾಡಿರುವುದು ನಿಜಕ್ಕೂ ಅಭಿನಂದನೀಯ.
ಕೃಷ್ಣನಾಗಿ ವಲ್ಲಭ ವೈಎಸ್, ಭೀಷ್ಮ ಅನಂತವೇಲು, ಧೃತರಾಷ್ಟ್ರ ಜಯಕುಮಾರ್, ವಿಧುರ ಎಚ್ಎಂಟಿ ನಂದ, ದ್ರೋಣ ಚೇತನ್ ರಾಜ್, ಕೃಪಾಚಾರ್ಯ ಎಂ ಗುರುರಾಜ್, ಅಶ್ವತ್ಥಾಮ ಇಪಿ ಅಕ್ಷಯ್, ಕುಂತಿ ಅರ್ಚನಾ ಅನಂತವೇಲು...
ಗಾಂಧಾರಿ ಸುಜಾತಾ ಕುರಹಟ್ಟಿ, ಯುಧಿಷ್ಟಿರ ರವಿ ಭಟ್, ಭೀಮ ಪ್ರವೀಣ್ ಕುಮಾರ್ ಡಿ, ಅರ್ಜುನ ಅಂಬರೀಶ್ ಸಾರಂಗ್, ನಕುಲ ಚಿರಾಗ್, ಸಹದೇವ ನಂದೀಶ್, ದುರ್ಯೋಧನ ಚೆಲುವರಾಜ್, ಕರ್ಣ ಪ್ರಕಾಶ್ ಕುಮಾರ್ ಸಿಎನ್, ದುಶ್ಯಾಸನ ರಾಜೇಶ್, ಶಕುನಿ ರಮೇಶ್ ಪಂಡಿತ್...
ದುಪ್ರದ ಗಣೇಶ್ ರಾವ್, ಶಂತನು ಅಮಿತ್ ಭಾರ್ಗವ್, ಯುವ ಭೀಷ್ಮ ಲೋಕೇಶ್, ಗಂಗಾ ರಶ್ಮಿ, ಸತ್ಯವತಿ ಮಾನ್ಸಿ, ಅಂಬೆ ನಿಶಿತಾ ಗೌಡ, ಅಂಬಿಕೆ ಅರ್ಚನಾ ಗಾಯಕ್ವಾಡ್, ಅಂಬಾಲಿಕೆ ಮಾಧವಿ. (ಒನ್ ಇಂಡಿಯಾ ಕನ್ನಡ)