TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
'ಮಜಾಭಾರತ'ಕ್ಕೆ ಬಂದ್ರು ಹೊಸ ಆಂಕರ್, ನಿಮಗೆಲ್ಲಾ ಪರಿಚಯದವರೇ.!
ಕಲರ್ಸ್ ಸೂಪರ್ ವಾಹಿನಿಯಲ್ಲಿ ಮೂಡಿ ಬರ್ತಿದ್ದ ಜನಪ್ರಿಯ ಕಾರ್ಯಕ್ರಮ 'ಮಜಾಭಾರತ' ಶೋ ಮತ್ತೆ ಬರ್ತಿದೆ. ಈಗಾಗಲೇ ಎರಡು ಆವೃತ್ತಿ ಮುಗಿಸಿರುವ ಕಾಮಿಡಿ ಕಾರ್ಯಕ್ರಮ ಈಗ ಮೂರನೇ ಆವೃತ್ತಿ ಆರಂಭಿಸಿದೆ.
ಹೊಸ ಆವೃತ್ತಿಯಲ್ಲಿ ಹೊಸ ಸರ್ಪ್ರೈಸ್ ಗಳನ್ನ ಹೊತ್ತು ತರುತ್ತಿದೆ ಮಜಾಭಾರತ. ಹೌದು, ಮೊದಲನೇ ಸರ್ಪ್ರೈಸ್ ಎಂಬಂತೆ ಕಾರ್ಯಕ್ರಮದ ನಿರೂಪಕರೇ ಬದಲಾಗಿದ್ದಾರೆ.
ಮೊದಲೆರಡು ಆವೃತ್ತಿಯನ್ನ ನಿರೂಪಣೆ ಮಾಡಿದ್ದ ನಿರಂಜನ್ ದೇಶಪಾಂಡೆ ಈ ಶೋನಿಂದ ಹೊರಗುಳಿದಿದ್ದಾರೆ. ಅವರ ಜಾಗಕ್ಕೆ ಬಿಗ್ ಬಾಸ್ ಖ್ಯಾತಿಯ ಅನುಪಮಾ ಗೌಡ ಎಂಟ್ರಿಯಾಗಿದ್ದಾರೆ. ಕನ್ನಡ ಕೋಗಿಲೆ ಶೋ ಮೂಲಕ ಸ್ಟಾರ್ ಅಂಕರ್ ಆದ ಅನುಪಮಾ ಗೌಡ ಈಗ ಮಜಾಭಾರತದ ಸಾರಥಿಯಾಗಿದ್ದಾರೆ.
ಹೊಸ ರಿಯಾಲಿಟಿ ಶೋಗೆ ಆಂಕರ್ ಆದ 'ಬಿಗ್ ಬಾಸ್' ಅನುಪಮಾ
ಇನ್ನು ಎರಡನೇ ಸೀಸನ್ ನಲ್ಲಿ ತೀರ್ಪುಗಾರರಾಗಿದ್ದ ರಚಿತಾ ರಾಮ್ ಮತ್ತು ಗುರುಕಿರಣ್ ಮೂರನೇ ಆವೃತ್ತಿಯಲ್ಲೂ ಮುಂದುವರಿದಿದ್ದಾರೆ.
ನಟಿ ಅನುಪಮಾ ಗೌಡ ಮದುವೆ ಆಗಲ್ವಂತೆ.! ಸಿಂಗಲ್ ಆಗಿ ಇರ್ತಾರಂತೆ.!
ಅದಕ್ಕೂ ಮೊದಲು, ಒಂದನೇ ಆವೃತ್ತಿಲ್ಲಿ ಶೀತಲ್ ಶೆಟ್ಟಿ ಮತ್ತು ನಿರಂಜನ್ ದೇಶಪಾಂಡೆ ಮಜಾಭಾರತ ನಿರೂಪಣೆ ಮಾಡಿದ್ದರು. ಹಿರಿಯ ನಟಿ ಶ್ರುತಿ, ನಿರ್ದೇಶಕ ಎಸ್ ನಾರಾಯಣ್ ತೀರ್ಪುಗಾರರಾಗಿದ್ದರು.
ಇನ್ನುಳಿದಂತೆ ವಾರದಲ್ಲಿ ಐದು ದಿನ ಮಜಾಭಾರತ ಪ್ರಸಾರವಾಗುತ್ತಿದ್ದು, ಹೊಸ ಹೊಸ ಸ್ಪರ್ಧಿಗಳೊಂದಿಗೆ ವಾಪಸ್ ಆಗಿದೆ. ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 8 ಗಂಟೆಗೆ ಮಜಾಭಾರತ ಟೆಲಿಕಾಸ್ಟ್ ಆಗಲಿದೆ.