'ಡ್ರಾಮಾ ಜೂನಿಯರ್ಸ್'ಗೆ ಬಂದ ಹೊಸ ತೀರ್ಪುಗಾರರು ಇವರೇ ನೋಡಿ!
Recommended Video

'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದಿಂದ ನಿರ್ದೇಶಕ ಟಿ.ಎನ್.ಸೀತಾರಾಮ್ ಹೊರಬಂದ ವಿಷಯವನ್ನು ನಿಮ್ಮ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಓದಿದ್ದೀರಿ. ಇದೀಗ ಈ ಕಾರ್ಯಕ್ರಮಕ್ಕೆ ಒಬ್ಬ ಹೊಸ ತೀರ್ಪುಗಾರರ ಆಗಮನ ಕೂಡ ಆಗಿದೆ.
ಇನ್ನು ಮುಂದೆ ಹಿರಿಯ ನಟಿ ಲಕ್ಷ್ಮಿ ಮತ್ತು ವಿಜಯ ರಾಘವೇಂದ್ರ ಜೊತೆ 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದಲ್ಲಿ ಯಾರಿರುತ್ತಾರೆ ಎಂಬ ದೊಡ್ಡ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. 'ಜೀ ಕನ್ನಡ' ವಾಹಿನಿ ತಮ್ಮ ವೀಕ್ಷಕರಿಗೆ ಈ ವಾರ ಒಂದು ದೊಡ್ಡ ಸರ್ಪ್ರೈಸ್ ನೀಡುವುದಕ್ಕೆ ರೆಡಿ ಆಗಿದೆ.
ರಂಗಭೂಮಿ ಹಾಗೂ ಸಿನಿಮಾ ರಂಗದಲ್ಲಿ ದಶಕಗಳ ಕಾಲ ಕೆಲಸ ಮಾಡಿರುವ ನಟರೊಬ್ಬರನ್ನು ವಾಹಿನಿ 'ಡ್ರಾಮಾ ಜೂನಿಯರ್ಸ್' ತೀರ್ಪುಗಾರರ ಖುರ್ಚಿಯಲ್ಲಿ ಕೂರಿಸಿದೆ. ಮುಂದೆ ಓದಿ...

ಮುಖ್ಯಮಂತ್ರಿ ಚಂದ್ರು
ಕನ್ನಡ ಚಿತ್ರರಂಗ ಕಂಡ ಅದ್ಭುತ ಹಾಸ್ಯ ನಟ ಹಾಗೂ ಪೋಷಕ ಕಲಾವಿದ ಮುಖ್ಯಮಂತ್ರಿ ಚಂದ್ರು ಅವರು 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದ ಹೊಸ ತೀರ್ಪುಗಾರರಾಗಿದ್ದಾರೆ.

ಒಳ್ಳೆಯ ಆಯ್ಕೆ
ರಂಗಭೂಮಿ ಮತ್ತು ಸಿನಿಮಾ... ಎರಡರಲ್ಲಿಯೂ ದೊಡ್ಡ ಹೆಸರು ಮಾಡಿರುವ ಮುಖ್ಯಮಂತ್ರಿ ಚಂದ್ರು ಅವರನ್ನು 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದ ತೀರ್ಪುಗಾರರಾಗಿ ಆಯ್ಕೆ ಮಾಡಿದ್ದು, ಬಹಳ ಒಳ್ಳೆಯ ನಿರ್ಧಾರ ಅಂತ ಹೇಳಬಹುದು.

ಪ್ರೋಮೋ ನೋಡಿ
ಮುಖ್ಯಮಂತ್ರಿ ಚಂದ್ರು 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಪ್ರೋಮೋ ಈಗಾಗಲೇ ಬಿಡುಗಡೆಯಾಗಿದೆ.

ಸೀತಾರಾಮ್ ಶುಭ ಹಾರೈಕೆ
ನಿರ್ದೇಶಕ ಸೀತಾರಾಮ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ''ನನ್ನ ಜಾಗಕ್ಕೆ ಬರಲಿರುವ ಚಂದ್ರು ನನಗಿಂತ ಸೂಕ್ಷ್ಮಜ್ಞ ಮತ್ತು ನನಗಿಂತ ವಿನೋದ ಪ್ರೇಮಿ. ನಿಮಗೆಲ್ಲಾ ಇಷ್ಟವಾಗುತ್ತಾರೆ'' ಎಂದು ಶುಭ ಕೋರಿದ್ದಾರೆ.


Click it and Unblock the Notifications











