Don't Miss!
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Automobiles 20 ವರ್ಷದ ಬಳಿಕ ಲ್ಯಾಂಬೋರ್ಗಿನಿ ಲೋಗೋಗೆ ಹೊಸ ಟಚ್: ಈ ಕಂಪನಿಯ ಕಾರುಗಳು ಯಾಕೆ ಫೇಮಸ್?
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಡ್ರಾಮಾ ಜೂನಿಯರ್ಸ್'ಗೆ ಬಂದ ಹೊಸ ತೀರ್ಪುಗಾರರು ಇವರೇ ನೋಡಿ!
Recommended Video
'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದಿಂದ ನಿರ್ದೇಶಕ ಟಿ.ಎನ್.ಸೀತಾರಾಮ್ ಹೊರಬಂದ ವಿಷಯವನ್ನು ನಿಮ್ಮ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಓದಿದ್ದೀರಿ. ಇದೀಗ ಈ ಕಾರ್ಯಕ್ರಮಕ್ಕೆ ಒಬ್ಬ ಹೊಸ ತೀರ್ಪುಗಾರರ ಆಗಮನ ಕೂಡ ಆಗಿದೆ.
ಇನ್ನು ಮುಂದೆ ಹಿರಿಯ ನಟಿ ಲಕ್ಷ್ಮಿ ಮತ್ತು ವಿಜಯ ರಾಘವೇಂದ್ರ ಜೊತೆ 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದಲ್ಲಿ ಯಾರಿರುತ್ತಾರೆ ಎಂಬ ದೊಡ್ಡ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. 'ಜೀ ಕನ್ನಡ' ವಾಹಿನಿ ತಮ್ಮ ವೀಕ್ಷಕರಿಗೆ ಈ ವಾರ ಒಂದು ದೊಡ್ಡ ಸರ್ಪ್ರೈಸ್ ನೀಡುವುದಕ್ಕೆ ರೆಡಿ ಆಗಿದೆ.
ರಂಗಭೂಮಿ ಹಾಗೂ ಸಿನಿಮಾ ರಂಗದಲ್ಲಿ ದಶಕಗಳ ಕಾಲ ಕೆಲಸ ಮಾಡಿರುವ ನಟರೊಬ್ಬರನ್ನು ವಾಹಿನಿ 'ಡ್ರಾಮಾ ಜೂನಿಯರ್ಸ್' ತೀರ್ಪುಗಾರರ ಖುರ್ಚಿಯಲ್ಲಿ ಕೂರಿಸಿದೆ. ಮುಂದೆ ಓದಿ...
ಮುಖ್ಯಮಂತ್ರಿ ಚಂದ್ರು
ಕನ್ನಡ ಚಿತ್ರರಂಗ ಕಂಡ ಅದ್ಭುತ ಹಾಸ್ಯ ನಟ ಹಾಗೂ ಪೋಷಕ ಕಲಾವಿದ ಮುಖ್ಯಮಂತ್ರಿ ಚಂದ್ರು ಅವರು 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದ ಹೊಸ ತೀರ್ಪುಗಾರರಾಗಿದ್ದಾರೆ.
ಒಳ್ಳೆಯ ಆಯ್ಕೆ
ರಂಗಭೂಮಿ ಮತ್ತು ಸಿನಿಮಾ... ಎರಡರಲ್ಲಿಯೂ ದೊಡ್ಡ ಹೆಸರು ಮಾಡಿರುವ ಮುಖ್ಯಮಂತ್ರಿ ಚಂದ್ರು ಅವರನ್ನು 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದ ತೀರ್ಪುಗಾರರಾಗಿ ಆಯ್ಕೆ ಮಾಡಿದ್ದು, ಬಹಳ ಒಳ್ಳೆಯ ನಿರ್ಧಾರ ಅಂತ ಹೇಳಬಹುದು.
ಪ್ರೋಮೋ ನೋಡಿ
ಮುಖ್ಯಮಂತ್ರಿ ಚಂದ್ರು 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಪ್ರೋಮೋ ಈಗಾಗಲೇ ಬಿಡುಗಡೆಯಾಗಿದೆ.
'ಡ್ರಾಮಾ ಜೂನಿಯರ್ಸ್'ನಿಂದ ಹೊರ ಬಂದ ಟಿ.ಎನ್.ಸೀತಾರಾಮ್.! ಯಾಕೆ.?
ಸೀತಾರಾಮ್ ಶುಭ ಹಾರೈಕೆ
ನಿರ್ದೇಶಕ ಸೀತಾರಾಮ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ''ನನ್ನ ಜಾಗಕ್ಕೆ ಬರಲಿರುವ ಚಂದ್ರು ನನಗಿಂತ ಸೂಕ್ಷ್ಮಜ್ಞ ಮತ್ತು ನನಗಿಂತ ವಿನೋದ ಪ್ರೇಮಿ. ನಿಮಗೆಲ್ಲಾ ಇಷ್ಟವಾಗುತ್ತಾರೆ'' ಎಂದು ಶುಭ ಕೋರಿದ್ದಾರೆ.