Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲಕ್ಷ್ಮೀ ಬಾರಮ್ಮ ಧಾರಾವಾಹಿ ಗೊಂಬೆ ಕಿಡ್ನಪ್ ನ ಅಸಲಿ ಕಥೆ
Recommended Video
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ನಿತ್ಯ ಪ್ರಸಾರ ಆಗುವ ಲಕ್ಷ್ಮೀ ಬಾರಮ್ಮ ಧಾರಾವಾಹಿ ಸಾಕಷ್ಟು ಮಹಿಳಾಮಣಿಯರ ಮನಸ್ಸು ಗೆದ್ದಿರುವ ಸೀರಿಯಲ್ ಗಳಲ್ಲಿ ಟಾಪ್ ಲಿಸ್ಟ್ ನಲ್ಲಿದೆ. ಈ ಧಾರಾವಾಹಿ ಆರಂಭ ಆಯ್ತು ಅಂದರೆ ಸಾಕು ಹೆಣ್ಣು ಮಕ್ಕಳು ಇರೋ ಕೆಲಸನ್ನ ಬಿಟ್ಟು ಟಿವಿ ಮುಂದೆ ಹಾಜರ್ ಹಾಕುತ್ತಾರೆ. ಆದರೆ ಕೆಲವು ದಿನಗಳ ಹಿಂದಿನಿಂದ ಲಕ್ಷ್ಮೀ ಬಾರಮ್ಮ ಧಾರಾಹಿಯಲ್ಲಿ ಗೊಂಬೆ ಪಾತ್ರ ನಿರ್ವಹಿಸುತ್ತಿದ್ದ ನಟ ನೇಹಾ ಗೌಡ ಕಿಡ್ನಪ್ ಆಗಿದ್ದಾರೆ.
ಧಾರಾವಾಹಿ ಪ್ರಿಯರಿಗಂತು ಅಯ್ಯೋ ಗೊಂಬೆ ಕಿಡ್ನಾಪ್ ಮಾಡಿದವರು ಯಾರು ಎನ್ನುವುದೇ ಆತಂಕ? ಯಾರು ಮಾಡಿರುತ್ತಾರೆ ? ಗೊಂಬೆ ಚಿಕ್ಕಮ್ಮ ಕುಮುದಾ ಮಾಡಿಸಿರುತ್ತಾರಾ? ಅಥವಾ ಹೊಸ ವಿಲನ್ ಎಂಟ್ರಿ ಆಗುತ್ತಾ ಅಂತೆಲ್ಲಾ ಯೋಚನೆ ಮಾಡಿದ್ದೇ ಮಾಡಿದ್ದು. ಆದರೆ ಧಾರಾವಾಹಿಯಲ್ಲಿ ಮಾತ್ರ ಗೊಂಬೆ ಇನ್ನು ಸಿಕ್ಕಿಲ್ಲ. ವಾರಗಟ್ಟಲೆಯಿಂದ ಗೊಂಬೆ ಹುಡುಕಾಟ ನಡೆಯುತ್ತಲೇ ಇದೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲಕ್ಷ್ಮೀ ಬಾರಮ್ಮ ನಟಿ ನೇಹಾ ಗೌಡ
ಆದರೆ ಗೊಂಬೆ ಕಿಡ್ನಪ್ ನ ಅಸಲಿ ಕಥೆಯೇ ಬೇರೆ ಇದೆ. ಕಳೆದ ತಿಂಗಳಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗೊಂಬೆ ಕೆಲಸದಿಂದ ಸಣ್ಣದೊಂದು ಬ್ರೇಕ್ ತೆಗೆದುಕೊಂಡಿದ್ದಾರೆ. ಹಾಗಂತ ಧಾರಾವಾಹಿಯಲ್ಲಿ ಅಭಿನಯಿಸುವುದನ್ನು ಬಿಟ್ಟಿಲ್ಲ. ತನ್ನ ಪತಿ ಚಂದನ್ ಜೊತೆ ಹನಿಮೂನ್ ಹೋಗಿದ್ದಾರೆ.
ಹಾಂಗ್ ಕಾಂಗ್ ಪ್ರವಾಸಿ ಸ್ಥಳಗಳಿಗೆ ನೇಹಾ ಗೌಡ ಹಾಗೂ ಚಂದನ್ ಭೇಟಿ ನೀಡಿದ್ದು ನವದಂಪತಿಗಳು ಜೊತೆಯಲ್ಲಿ ತೆಗೆಸಿಕೊಂಡು ಫೋಟೋಗಳನ್ನ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಆದರೆ ಟಿವಿ ಮುಂದೆ ಕುಳಿತ ಹೆಣ್ಣು ಮಕ್ಕಳು ಮಾತ್ರ ಅಯ್ಯೋ ಗೊಂಬೆ ಸಿಗಲಿಲ್ಲ ಅಂತ ತಲೆ ಕೆಡಿಸಿಕೊಳ್ಳುತ್ತಿದ್ದಾರೆ.
ಕಿರುತೆರೆ ಗೊಂಬೆಯ ಕಲರ್ ಫುಲ್ ಫೋಟೋ ಶೂಟ್