Don't Miss!
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Lifestyle ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಮ್ಮನ್ನೆಲ್ಲ ನಕ್ಕು ನಲಿಸಲು ಬರ್ತಿದ್ದಾರೆ 'ಪ್ರಚಂಡ ಕಿಲಾಡಿಗಳು'
ಕಳೆದ ಏಳು ವರ್ಷಗಳಿಂದ ಜನರನ್ನು ನಕ್ಕು ನಲಿಸಿ ರಂಜಿಸುತ್ತಿರುವ ರಾಜ್ಯದ ಏಕೈಕ ಕಾಮಿಡಿ ವಾಹಿನಿ 'ಉದಯ ಕಾಮಿಡಿ' ಇದೀಗ ಹೊಸ ಹುರುಪಿನೊಂದಿಗೆ ಹೊಸ ಕಾರ್ಯಕ್ರಮಗಳ ಮೂಲಕ ಜನರನ್ನು ರಂಜಿಸಲು ಮುಂದಾಗಿದೆ.
ಜನ ಎಷ್ಟೇ ಟೆನ್ಷನ್ ಹಾಗೂ ಗಡಿಬಿಡಿಯಲ್ಲಿ ಮನೆಗೆ ಬಂದರೂ, ಅವರಿಗೆ ನಿರಾಸೆ ಮೂಡಿಸದೆ, ಮೊಗದಲ್ಲಿ ಮಂದಹಾಸ ಮೂಡಿಸುವ ಉದ್ದೇಶ 'ಉದಯ ಕಾಮಿಡಿ' ವಾಹಿನಿಯದ್ದು.
ಕಾಮಿಡಿ ಕಮಾಲ್ ಮೂಲಕ ಅತಿ ಹೆಚ್ಚು ಪ್ರೇಕ್ಷಕರನ್ನು ಹೊಂದಿರುವ 'ಉದಯ ಕಾಮಿಡಿ' ಟಿವಿಯಲ್ಲಿ ಇದೀಗ 'ಪ್ರಚಂಡ ಕಿಲಾಡಿಗಳು' ಎಂಬ ಹೊಸ ಶೋ ಆರಂಭ ಆಗುತ್ತಿದೆ. ಮುಂದೆ ಓದಿರಿ....
'ಉದಯ ಕಾಮಿಡಿ'ಯಲ್ಲಿ 'ಪ್ರಚಂಡ ಕಿಲಾಡಿಗಳು'
'ಉದಯ ಟಿವಿ'ಯ ಜನಪ್ರಿಯ 'ಚಿಣ್ಣರ ಚಿಲಿಪಿಲಿ' ಕಾರ್ಯಕ್ರಮವನ್ನ ನೀವೆಲ್ಲ ನೋಡಿದ್ದೀರಾ.? ಆಲ್ಮೋಸ್ಟ್ ಅದೇ ಶೈಲಿಯಲ್ಲಿ ಹಾಸ್ಯದ ಲೇಪನದೊಂದಿಗೆ 'ಪ್ರಚಂಡ ಕಿಲಾಡಿಗಳು' ಪ್ರಸಾರ ಆಗಲಿದೆ.
'ಪ್ರಚಂಡ ಕಿಲಾಡಿಗಳು' ಕಾರ್ಯಕ್ರಮದ ವಿಶೇಷತೆ ಏನು.?
ಪ್ರತಿಯೊಬ್ಬರಿಗೂ ತಮ್ಮ ಬಾಲ್ಯದ ದಿನಗಳು ಮತ್ತೆ ಮರುಕಳಿಸಬೇಕು ಎಂಬ ಹಂಬಲವಿರುತ್ತದೆ. ಅಂತಹ ಅಂಶಗಳನ್ನು ಇಟ್ಟುಕೊಂಡು 'ಪ್ರಚಂಡ ಕಿಲಾಡಿಗಳು' ಶೋ ರೂಪಿಸಲಾಗಿದೆ.
'ಪ್ರಚಂಡ ಕಿಲಾಡಿಗಳು' ಯಾರ್ಯಾರು.?
ಉದಯ ಕಾಮಿಡಿ ತಂಡದ ನಟರು ಮಕ್ಕಳಂತೆ ನಟಿಸಿ ನಗುವಿನ ಕಚಗುಳಿ ಇಡಲಿದ್ದಾರೆ. ಶ್ರೀಕಂಠ, ಕೆಂಪೇಗೌಡ, ಕೃಷ್ಣ, ಶಶಿಕುಮಾರ, ದೀಪಾ, ದಿವ್ಯ, ರಾಜೇಶ್ವರಿ ಮತ್ತು ಕೃತಿಕಾ 'ಪ್ರಚಂಡ ಕಿಲಾಡಿಗಳು' ಆಗಿದ್ದು, ಶೋ ಸಾರಥ್ಯವನ್ನು ಸುನೇತ್ರ ಪಂಡಿತ್ ವಹಿಸಿಕೊಂಡಿದ್ದಾರೆ. ಇವರೆಲ್ಲರ ಜೊತೆಗೆ ಕಿರುತೆರೆ ಹಾಗೂ ಬೆಳ್ಳಿತೆರೆಯ ಕಲಾವಿದರೂ ಕೂಡ ಈ ಶೋನಲ್ಲಿ ಭಾಗವಹಿಸಲಿದ್ದಾರೆ.
ಪ್ರಸಾರ ಯಾವಾಗ.?
ಪ್ರತಿ ಶನಿವಾರ ಹಾಗೂ ಭಾನುವಾರ ಬೆಳಗ್ಗೆ 8 ಗಂಟೆಗೆ 'ಪ್ರಚಂಡ ಕಿಲಾಡಿಗಳು' ಕಾರ್ಯಕ್ರಮ 'ಉದಯ ಕಾಮಿಡಿ' ವಾಹಿನಿಯಲ್ಲಿ ಪ್ರಸಾರ ಆಗಲಿದೆ.