Don't Miss!
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- News
ವಿಚ್ಛೇದನ ಪ್ರಕರಣ: ಪತ್ನಿಯ ಜೀವನಾಂಶ ₹40 ಲಕ್ಷಕ್ಕೆ ಹೆಚ್ಚಿಸಿದ ಹೈಕೋರ್ಟ್
- Technology
ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S23! ಫೀಚರ್ಸ್ ನಿರೀಕ್ಷೆ ಏನು?
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Finance
ಹಿಂಡನ್ಬರ್ಗ್ vs ಅದಾನಿ ನಡುವೆ ಎಲ್ಐಸಿ, ಎಸ್ಬಿಐ ಉಳಿತಾಯ ರಿಸ್ಕ್ನಲ್ಲಿದೆಯೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮನೆ-ಮನೆಗೆ 'ಯುವರತ್ನ': ಟಿವಿಯಲ್ಲಿ ಅಪ್ಪು ನಟನೆಯ ಸಿನಿಮಾ
ಪುನೀತ್ ರಾಜ್ಕುಮಾರ್ ನಮ್ಮನ್ನು ಅಗಲಿರಬಹುದು ಆದರೆ ಅವರ ಸಿನಿಮಾಗಳ ಮೂಲಕ ಅವರು ನಮ್ಮ ಜೊತೆಯೇ ಇರಲಿದ್ದಾರೆ. ನಮ್ಮನ್ನು ಸದಾ ಕಾಲ ರಂಜಿಸಲಿದ್ದಾರೆ. ನಮ್ಮ ಮುಂದಿನ ಪೀಳಿಗೆಯನ್ನೂ ರಂಜಿಸಲಿದ್ದಾರೆ.
Recommended Video
ಪುನೀತ್ ರಾಜ್ಕುಮಾರ್ ಅಭಿನಯದ ಪೂರ್ಣ ಪ್ರಮಾಣದ ಕೊನೆಯ ಸಿನಿಮಾ 'ಯುವರತ್ನ'. ಈ ಸಿನಿಮಾ 2021, ಏಪ್ರಿಲ್ 1 ರಂದು ಬಿಡುಗಡೆ ಆಗಿತ್ತು. ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆದರೂ ಆಗ ಹಠಾತ್ತನೆ ಹೇರಲಾದ ಲಾಕ್ಡೌನ್ನಿಂದಾಗಿ ಸಿನಿಮಾ ಹೆಚ್ಚು ಸಮಯ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿಲ್ಲ.
ನಂತರ ಕೆಲವೇ ದಿನಗಳಲ್ಲಿ ಸಿನಿಮಾವನ್ನು ಒಟಿಟಿಗೆ ಬಿಡುಗಡೆ ಮಾಡಲಾಯ್ತು. ಅಮೆಜಾನ್ ಪ್ರೈಂನಲ್ಲಿ ಸಿನಿಮಾ ದೊಡ್ಡ ಹಿಟ್ ಆಯಿತು. ಇದೀಗ ಮೊದಲ ಬಾರಿಗೆ 'ಯುವರತ್ನ' ಸಿನಿಮಾ ಟಿವಿಯಲ್ಲಿ ಪ್ರಸಾರ ಕಾಣುತ್ತಿದೆ.
'ಯುವರತ್ನ' ಸಿನಿಮಾವು ಸಂಕ್ರಾಂತಿ ಹಬ್ಬದ ವಿಶೇಷವಾಗಿ ಉದಯ ಟಿವಿಯಲ್ಲಿ ಜನವರಿ 15ರಂದು ಸಂಜೆ 6:30ಕ್ಕೆ ಪ್ರಸಾರವಾಗಲಿದೆ. ಆ ಮೂಲಕ ರಾಜ್ಯದ ಪ್ರತಿ ಮನೆ-ಮನೆಗೆ 'ಯುವರತ್ನ' ತಲುಪಲಿದ್ದಾನೆ.
ಪುನೀತ್ ನಿಧನದ ಬಳಿಕ ಅವರ ನಟನೆಯ ಹಲವು ಸಿನಿಮಾಗಳು ಟಿವಿಗಳಲ್ಲಿ ಪ್ರಸಾರವಾಗುತ್ತಲೇ ಇದ್ದಾವೆ. ಆದರೆ ಅವರ ಇತ್ತೀಚಿನ ನಟನೆಯ ಸಿನಿಮಾ 'ಯುವರತ್ನ' ಪ್ರಸಾರ ಆಗುತ್ತಿರುವುದು ವಿಶೇಷ. 'ಯುವರತ್ನ' ಸನಿಮಾ ಈ ಹಿಂದಿನ ಎಲ್ಲ ಟಿಆರ್ಪಿ ದಾಖಲೆಗಳನ್ನು ಮುರಿದು ಹಾಕಲಿದೆ ಎಂದು ಅಂದಾಜಿಸಲಾಗಿದೆ.
'ಯುವರತ್ನ' ಸಿನಿಮಾವು ಶಿಕ್ಷಣ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ಉಪನ್ಯಾಸಕನ ಪಾತ್ರದಲ್ಲಿ ಪುನೀತ್ ರಾಜ್ಕುಮಾರ್ ನಟಿಸಿದ್ದಾರೆ. ಸಿನಿಮಾದಲ್ಲಿ ನಾಯಕಿಯಾಗಿ ಸಾಯೆಷಾ, ಡಾಲಿ ಧನಂಜಯ್, ದಿಗಂತ್, ಸೋನು, ಪ್ರಕಾಶ್ ರೈ, ಕಾವ್ಯಾ ಶೆಟ್ಟಿ, ಸಾಯಿಕುಮಾರ್ ನಟಿಸಿದ್ದಾರೆ.
ಪುನೀತ್ ರಾಜ್ಕುಮಾರ್ ನಟನೆಯ 'ಜೇಮ್ಸ್' ಸಿನಿಮಾದ ಚಿತ್ರೀಕರಣ ಭಾಗಷಃ ಮುಗಿದಿದ್ದು, ಕೆಲವು ದೃಶ್ಯಗಳನ್ನು ಅಪ್ಪು ಇಲ್ಲದೆಯೇ ಚಿತ್ರೀಕರಣ ಮಾಡಲಾಗುತ್ತಿದೆ. ನಟ ಅವಿನಾಶ್ ಮಾತನಾಡಿ, 'ಅಪ್ಪು ಇಲ್ಲದೆ ಸಿನಿಮಾದ ಚಿತ್ರೀಕರಣ ಮಾಡುವುದಕ್ಕೆ ಬಹಳ ನೋವಾಗುತ್ತಿದೆ'' ಎಂದು ಹೇಳಿದ್ದಾರೆ.
ಅಪ್ಪು ಅವರ ಮಹಾತ್ವಾಕಾಂಕ್ಷೆಯ 'ಗಂಧದ ಗುಡಿ' ಪ್ರವಾಸ ಚಲನಚಿತ್ರ ಸಹ ಚಿತ್ರೀಕರಣ ಸಹ ಇನ್ನಷ್ಟು ಬಾಕಿ ಇದೆ. ಅಪ್ಪು ಇಲ್ಲದೆಯೇ ಅಮೋಘ ವರ್ಷ ಮತ್ತು ತಂಡ ಕರ್ನಾಟಕ-ಕೇರಳ ಗಡಿ ಭಾಗವಕ್ಕೆ ತೆರಳಿ ಚಿತ್ರೀಕರಣ ಮಾಡುತ್ತಿದ್ದಾರೆ. ಇದರ ಜೊತೆಗೆ 'ಲಕ್ಕಿ ಮ್ಯಾನ್' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟ ಪುನೀತ್ ನಟಿಸಿದ್ದು ಆ ಸಿನಿಮಾ ಬಿಡುಗಡೆಗೆ ತಯಾರಾಗಿದೆ.