Don't Miss!
- Lifestyle ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದೇಕೆ.? ಹಿರಿಯರ ವಾದವೇನು..?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- News Namma Metro Purple Line: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಕಾರಣಗಳೇನು?
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ನಾವೆಲ್ಲ ನಿಮ್ಮ ಕಣ್ಣಿಗೆ ಕಾಣಲ್ವಾ?': ಅನೂಪ್ ಭಂಡಾರಿಗೆ ಶಿವಣ್ಣ ಪ್ರಶ್ನೆ!
Recommended Video
ಪ್ರತಿಭಾವಂತ ನಿರ್ದೇಶಕ ಅನೂಪ್ ಭಂಡಾರಿ ಇಲ್ಲಿಯವರೆಗೂ ಆಕ್ಷನ್ ಕಟ್ ಹೇಳಿರುವುದು ಎರಡೇ ಚಿತ್ರಗಳಿಗೆ - ಒಂದು 'ರಂಗಿತರಂಗ', ಇನ್ನೊಂದು 'ರಾಜರಥ'. ಈ ಎರಡೂ ಚಿತ್ರಗಳಲ್ಲೂ ನಾಯಕನಾಗಿ ಅಭಿನಯಿಸಿರುವುದು ಅನೂಪ್ ಭಂಡಾರಿ ಸಹೋದರ ನಿರೂಪ್ ಭಂಡಾರಿ.
ಎರಡು ಸಿನಿಮಾಗಳಲ್ಲಿ ಸಹೋದರನಿಗೆ ಆಕ್ಷನ್ ಕಟ್ ಹೇಳಿರುವ ಅನೂಪ್ ಭಂಡಾರಿಗೆ ಕನ್ನಡ ಚಿತ್ರರಂಗದಲ್ಲಿ ಬೇರೆ ಯಾರೂ ಕಣಲಿಲ್ವಾ.? ಈ ಪ್ರಶ್ನೆಯನ್ನ ನಾವು ಕೇಳ್ತಿದ್ದೀವಿ ಅಂತ ಅಂದುಕೊಳ್ಳಬೇಡಿ. ''ನಾವೆಲ್ಲ ನಿಮ್ಮ ಕಣ್ಣಿಗೆ ಕಾಣಲಿಲ್ವಾ.?'' ಎಂದು ಅನೂಪ್ ಭಂಡಾರಿಗೆ ಪ್ರಶ್ನೆ ಮಾಡಿದ್ದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್!
ಶಿವರಾಜ್ ಕುಮಾರ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಸಹೋದರರಾದ ಅನೂಪ್ ಹಾಗೂ ನಿರೂಪ್ ಭಾಗವಹಿಸಿದ್ದರು. 'ರಂಗಿತರಂಗ' ಚಿತ್ರವನ್ನ ನೋಡಿ ಮೆಚ್ಚಿಕೊಂಡಿದ್ದ ಶಿವಣ್ಣನಿಗೆ, ಅನೂಪ್ ಭಂಡಾರಿ ನಿರ್ದೇಶನದ ಚಿತ್ರದಲ್ಲಿ ನಟಿಸುವ ಮನಸ್ಸಾಗಿದೆ. ಅದಕ್ಕೆ ನೋಡಿ, ಅನೂಪ್ ಗೆ ಶಿವಣ್ಣ ಹೀಗೆ ಪ್ರಶ್ನೆ ಮಾಡಿದ್ದು....
ಶಿವ ಮೆಚ್ಚಿದ 'ರಂಗಿತರಂಗ'
''ರಂಗಿತರಂಗ' ಬಹಳ ಒಳ್ಳೆಯ ಸಿನಿಮಾ. ಬಹಳ ದಿನಗಳ ನಂತರ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ ಸಿನಿಮಾ. ನನಗಂತೂ ಸಿನಿಮಾ ನೋಡಿ ತುಂಬಾ ಖುಷಿ ಆಯ್ತು'' ಎಂದು 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಹೇಳಿದರು.
'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮ ದಿಢೀರ್ ಮುಕ್ತಾಯ: ಕಾರಣವೇನು.?
ನಾವೆಲ್ಲ ಕಾಣಲಿಲ್ವಾ ನಿಮಗೆ.?
''ಮೊದಲ ಚಿತ್ರ ನಿರೂಪ್ ಜೊತೆಗೆ ಮಾಡಿದ್ರಿ. ಎರಡನೇ ಚಿತ್ರವೂ ನಿರೂಪ್ ಜೊತೆಯಲ್ಲೇ ಮಾಡಿದ್ರಿ. ಬೇರೆ ಯಾರೂ ಇಲ್ವಾ.? ನಾವೆಲ್ಲ ಕಾಣಲಿಲ್ವಾ ನಿಮಗೆ.?'' ಎಂದು ಅನೂಪ್ ಭಂಡಾರಿಗೆ ಶಿವಣ್ಣ ಪ್ರಶ್ನೆ ಮಾಡಿದರು.
ನನಗೊಂದು ಸಿನಿಮಾ ಮಾಡಬಾರದಾ.?
''ನಾವು ಒಂದು ಸಿನಿಮಾ ಮಾಡೋಣ ಅಂತ ನಿಮ್ಮನ್ನ ಕೇಳಿಕೊಂಡೆ. ನನಗೊಂದು ಫಿಲ್ಮ್ ಮಾಡಬಾರದಾ.?'' ಎಂದು ಇದೇ ಶೋನಲ್ಲಿ ಅನೂಪ್ ಭಂಡಾರಿ ರವರನ್ನ ಶಿವಣ್ಣ ಕೇಳಿಕೊಂಡರು.
ಅನೂಪ್ ಹೇಳಿದ್ದೇನು.?
''ನಿಮಗೋಸ್ಕರ ನಾನು ಒಂದು ಸ್ಪೆಷಲ್ ರೋಲ್ ಬರೆಯುತ್ತಿದ್ದೇನೆ. ಅದು ಎಷ್ಟು ಟೈಮ್ ಆಗುತ್ತೋ ಗೊತ್ತಿಲ್ಲ. ಆದ್ರೆ, ಹಂಡ್ರೆಡ್ ಪರ್ಸೆಂಟ್ ಅದು ರೆಡಿ ಆದಾಗ ನಾನು ನಿಮ್ಮ ಹತ್ತಿರ ಬರುತ್ತೇನೆ'' ಎಂದರು ನಿರ್ದೇಶಕ ಅನೂಪ್ ಭಂಡಾರಿ.
ಡೇಟ್ಸ್ ಗ್ಯಾರೆಂಟಿ ಕೊಡುವೆ ಎಂದ ಶಿವಣ್ಣ
''ಯಾವತ್ತು ಸ್ಟೋರಿ ರೆಡಿ ಆಗುತ್ತೋ, ಅದರ ಮುಂದಿನ ತಿಂಗಳಲ್ಲೇ ನಿಮಗೆ ಡೇಟ್ಸ್ ಕೊಡುತ್ತೇನೆ ಅಂತ ಜನರ ಮುಂದೆ ಇವತ್ತು ನಾನು ಹೇಳುತ್ತಿದ್ದೇನೆ. ಇದು ನನ್ನ ಪ್ರಾಮಿಸ್'' ಎಂದು ಕಮಿಟ್ ಆದರು ಶಿವರಾಜ್ ಕುಮಾರ್.