Don't Miss!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- News ‘ಮೋದಿಯನ್ನು ಬಾಯಿಗೆ ಬಂದ ಹಾಗೆ ಬೈದ ದೇವೇಗೌಡ್ರು ಈಗ ಅಪ್ಪಿಕೊಳ್ಳುವುದು ಎಂದರೆ ಏನರ್ಥ?’
- Lifestyle ಹೌಸ್ವೈಫ್ ಆಗಿರುವ ಈ ಮಹಿಳೆ ದಿನದಲ್ಲಿ 2 ಗಂಟೆ ಕೆಲಸ ಮಾಡಿ ಲಕ್ಷ ಗಳಿಸುತ್ತಿದ್ದಾರಂತೆ!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Automobiles ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ದೊಡ್ಮನೆ'ಯೊಳಗಿರುವವರ ಕಣ್ಣಿಗೆ ಈ ಮೂವರು ಮಾತ್ರ ಘಟಾನುಘಟಿಗಳು.!
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಆರಂಭ ಆಗಿ ಒಂದು ವಾರ ಕಳೆದಿದೆ. ಈ ಬಾರಿ ಜನಸಾಮಾನ್ಯರಿಗೆ ಅವಕಾಶ ಕಲ್ಪಿಸಿದರೂ, 'ಬಿಗ್ ಬಾಸ್' ಮನೆಯೊಳಗೆ ಉಪ್ಪು, ಹುಳಿ, ಖಾರ ಸ್ವಲ್ಪ ಕಮ್ಮಿ ಆಗಿದೆ ಅನ್ನೋದು ಅನೇಕರ ಅಭಿಪ್ರಾಯ.
'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ದಯಾಳ್ ಪದ್ಮನಾಭನ್ ಕಿರು ಪರಿಚಯ
ಅದೇನೇಯಿದ್ದರೂ, 'ದೊಡ್ಮನೆ'ಯೊಳಗೆ ಇರುವವರ ಕಣ್ಣಿಗೆ 'ಮೂವರು' ಮಾತ್ರ 'ಘಟಾನುಘಟಿ' ಸ್ಪರ್ಧಿಗಳಂತೆ ಕಾಣುತ್ತಿದ್ದಾರೆ. ''ಇವರು ನನಗೆ ಕಠಿಣ ಸ್ಪರ್ಧಿ'' ಎಂದು 'ಬಿಗ್ ಬಾಸ್' ಸ್ಪರ್ಧಿಗಳೇ ಮೂವರನ್ನು ಹೆಸರಿಸಿದ್ದಾರೆ. ಅವರೇ... ಸಿಹಿ ಕಹಿ ಚಂದ್ರು, ದಯಾಳ್ ಪದ್ಮನಾಭನ್ ಹಾಗೂ ಜೆ.ಕೆ.! ಮುಂದೆ ಓದಿರಿ...
ಸಿಹಿ ಕಹಿ ಚಂದ್ರುಗೆ ಹೆಚ್ಚಿನ ವೋಟ್ಸ್.!
ಶ್ರುತಿ ಪ್ರಕಾಶ್, ತೇಜಸ್ವಿನಿ, ಜಗನ್, ನಿವೇದಿತಾ, ಜಯಶ್ರೀನಿವಾಸನ್ ಸೇರಿದಂತೆ 'ಬಿಗ್ ಬಾಸ್' ಮನೆಯ ಬಹುತೇಕ ಸ್ಪರ್ಧಿಗಳು ''ಸಿಹಿ ಕಹಿ ಚಂದ್ರು ಉತ್ತಮ ಸ್ಪರ್ಧೆ ನೀಡಬಲ್ಲರು'' ಎಂದು ಹೇಳಿದ್ದಾರೆ.
'ಬಿಗ್ ಬಾಸ್' ವೇದಿಕೆ ಮೇಲೆ ಚಮಕ್ ಕೊಟ್ಟ ಚಂದ್ರು ಸಿಹಿಯೋ.? ಕಹಿಯೋ.?
ದಯಾಳ್ ಹಾಗೂ ಜೆ.ಕೆ ಕೂಡ ಕಾಂಪಿಟೇಷನ್.!
'ಬಿಗ್ ಬಾಸ್' ಮನೆ ಸದಸ್ಯರಿಗೆ ದಯಾಳ್ ಪದ್ಮನಾಭನ್ ಹಾಗೂ ಜೆ.ಕೆ ಕೂಡ ''ಕಠಿಣ ಸ್ಪರ್ಧಿ'' ಎಂಬ ಭಾವನೆ ಮೂಡಿದೆ.
'ಬಿಗ್ ಬಾಸ್' ಮನೆ ಸೇರಿದ 'ಜೆ.ಕೆ'ಯ ಜರ್ನಿಯಲ್ಲಿ ಖುಷಿಗಿಂತ ನೋವು ಹೆಚ್ಚಿದೆ.!
ಇವರೆಲ್ಲ ಲೆಕ್ಕಕ್ಕೆ ಇಲ್ಲ.!
'ಜನಸಾಮಾನ್ಯ' ಸ್ಪರ್ಧಿಗಳಾದ ಸುಮಾ ರಾಜ್ ಕುಮಾರ್, ಮೇಘ ಹಾಗೂ ದಿವಾಕರ್ ''ಕಾಂಪಿಟೇಷನ್ ಅಲ್ಲವೇ ಅಲ್ಲ'' ಅನ್ನೋದು 'ಬಿಗ್ ಬಾಸ್' ಮನೆ ಸದಸ್ಯರ ಅಭಿಪ್ರಾಯ.
'ಪ್ರಥಮ್ ತಂಗಿ' ಎಂದು ಟ್ರೋಲ್ ಆಗುತ್ತಿರುವ 'ಮಾಸ್' ಮೇಘ ಯಾರು.?
ಲೆಕ್ಕಾಚಾರ ಉಲ್ಟಾ ಆದ್ರೆ.?
ಜನಸಾಮಾನ್ಯ ಸ್ಪರ್ಧಿಗಳ ಪೈಕಿ ಈಗಾಗಲೇ ಸುಮಾ ರಾಜ್ ಕುಮಾರ್ ಔಟ್ ಆಗಿದ್ದಾರೆ. ಸೆಲೆಬ್ರಿಟಿ ಸ್ಪರ್ಧಿಗಳ ಮುಂದೆ ತೊಡೆ ತಟ್ಟಿ ನಿಲ್ಲುವ ಹಾಗೆ ಮೇಘ ಹಾಗೂ ದಿವಾಕರ್ ಸ್ಪರ್ಧೆ ನೀಡುತ್ತಾರಾ ಅಂತ ಕಾದು ನೋಡಬೇಕು.