Don't Miss!
- News ನಾಲ್ಕು ಗೋಡೆಗಳ ಮಧ್ಯೆ ಆಗಿರುವ ಚರ್ಚೆ ಬಹಿರಂಗವಾಗಿ ಹೇಳೋದಕ್ಕೆ ಆಗಲ್ಲ: ಎಂ.ಪಿ.ರೇಣುಕಾಚಾರ್ಯ ಹೀಗೆ ಹೇಳಿದ್ಯಾಕೆ?
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Automobiles Hyundai Creta: ಜನಪ್ರಿಯ ಹ್ಯುಂಡೈ ಕ್ರೆಟಾ ಕಾರನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು? EMI ಏನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಉಗ್ರಂ' ವೀರ ಕಷ್ಟದಲ್ಲಿದ್ದಾಗ ಕೈಹಿಡಿದಿದ್ದರಂತೆ ದಾಸ ದರ್ಶನ್
Recommended Video
'ಉಗ್ರಂ', ಸ್ಯಾಂಡಲ್ ವುಡ್ ನ ಸೂಪರ್ ಹಿಟ್ ಸಿನಿಮಾ. ನಟ ಶ್ರೀಮುರಳಿ ಸಿನಿ ಜೀವನಕ್ಕೆ ಬ್ರೇಕ್ ಕೊಟ್ಟಂತ ಸಿನಿಮಾ. ಪ್ರಶಾಂತ್ ನೀಲ್ ಎನ್ನುವ ಅದ್ಭುತ ನಿರ್ದೇಶಕರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಸಿನಿಮಾ. ಸಾಕಷ್ಟು ಹೊಸತನದೊಂದಿಗೆ ಕನ್ನಡ ಪ್ರೇಕ್ಷಕರನ್ನ ಮನ ಗೆದ್ದಿದ್ದ 'ಉಗ್ರಂ' ಇಂದಿಗೂ ಚಿತ್ರಪ್ರಿಯರ ಫೇವರಿಟ್ ಸಿನಿಮಾಗಳಲ್ಲಿ ಒಂದು.
ಬ್ಯಾಕ್ ಟು ಬ್ಯಾಕ್ ಸೋಲು ಕಾಣುತ್ತಿದ್ದ ಶ್ರೀಮುರಳಿಗೆ ಲೈಫ್ ಕೊಟ್ಟ 'ಉಗ್ರಂ' ಸಿನಿಮಾದ ಸಮಯದಲ್ಲಿ ಅನುಭವಿಸಿದ ಕಷ್ಟವನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.
ಶ್ರೀ ಮುರಳಿ ಸಂಚಿಕೆಗೆ ಹೊಗಳಿಕೆಗಿಂತ ತೆಗಳಿಕೆಯೇ ಹೆಚ್ಚು!
ಕಷ್ಟಪಟ್ಟು ಇಷ್ಟಪಟ್ಟು ಮಾಡಿದ ಉಗ್ರಂ ಸಿನಿಮಾ ಚಿತ್ರೀಕರಣ ಮುಗಿಸಿ ಇನ್ನೇನು ರಿಲೀಸ್ ಆಗಬೇಕು ಎನ್ನುವಷ್ಟೊತ್ತಿಗೆ ವಿತರಣೆ ಹಕ್ಕು ಪಡೆಯಲು ಯಾರು ಮುಂದೆ ಬಂದಿರಲಿಲ್ಲವಂತೆ. ಆ ಸಮಯದಲ್ಲಿ 'ಉಗ್ರಂ' ನೆರವಿಗೆ ಬಂದಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಕಷ್ಟ ಎಂದವರಿಗೆ ಸದಾ ಸಹಾಯ ಹಸ್ತ ಚಾಚುವ ದಚ್ಚು ಶ್ರೀಮುರಳಿ 'ಉಗ್ರಂ' ಸಿನಿಮಾ ರಿಲೀಸ್ ಗೂ ಸಹಾಯ ಮಾಡಿದ್ದಾರೆ. ಮುಂದೆ ಓದಿ..
ದರ್ಶನ್ ಇಲ್ಲಾ ಅಂದ್ರೆ ಉಗ್ರಂ ಇಲ್ಲ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅದೆಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಕಷ್ಟ ಎಂದವರಿಗೆ ಯಾವತ್ತು ಇಲ್ಲ ಅಂತ ಹೇಳಿ ಕಳುಹಿಸಿದ್ದೆ ಇಲ್ಲ. ನಟ ಶ್ರೀ ಮುರಳಿಗೂ, ವಿಶಾಲಿ ಹೃದಯಿ ದರ್ಶನ್ ಸಹಾಯ ಮಾಡಿದ್ದಾರೆ. ಚಿತ್ರೀಕರಣ ಮುಗಿಸಿ 'ಉಗ್ರಂ' ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಆದ್ರೆ ಯಾರು ಸಿನಿಮಾವನ್ನು ವಿತರಣೆ ಮಾಡಲು ಮುಂದೆ ಬರುತ್ತಿರಲಿಲ್ಲವಂತೆ. ಹೇಳಿ ಕೇಳಿ ಶ್ರೀಮುರಳಿ ಅಂದು ಫ್ಲ್ಯಾಪ್ ಹೀರೋ ಅನ್ನೋ ಪಟ್ಟಬೇರೆ. ಆ ಸಮಯದಲ್ಲಿ ತೂಗುದೀಪ ಸಂಸ್ಥೆ ಚಿತ್ರದ ವಿತರಣೆ ಹಕ್ಕನ್ನು ಪಡೆದು ಚಿತ್ರ ರಿಲೀಸ್ ಮಾಡಿ ಕೊಟ್ಟಿದೆ.
ಶ್ರೀ ಮುರಳಿ ಸಂಚಿಕೆಗೆ ಹೊಗಳಿಕೆಗಿಂತ ತೆಗಳಿಕೆಯೇ ಹೆಚ್ಚು!
ನಿನಗ್ಯಾಕೆ ನಾನು ಇದೀನಿ
ಚೆನ್ನೈನಲ್ಲಿ ದರ್ಶನ್ ಅವರನ್ನು ಆಕಸ್ಮಿಕವಾಗಿ ಭೇಟಿಯಾದ ಮುರಳಿ 'ಉಗ್ರಂ' ಸಿನಿಮಾ ರಿಲೀಸ್ ಮಾಡಿ ಕೊಡುವುದಾಗಿ ಕೇಳಿ ಕೊಂಡಿದ್ದಾರೆ. ಮುರಳಿ ಮಾತಿಗೆ ಒಂದು ಕ್ಷಣವು ಹಿಂದೆಮುಂದೆ ಯೋಚಿಸದೆ ಸಿನಿಮಾ ರಿಲೀಸ್ ಮಾಡಿ ಕೊಡುವುದಾಗಿ ಒಪ್ಪಿಕೊಂಡಿದ್ದಾರೆ. 'ನಿನಗ್ಯಾಕೆ ನಾನು ಇದೀನಿ. ತಲೆ ಕೆಡಿಸಿಕೊಳ್ಳಬೇಡ, ನಾನು ಸಿನಿಮಾ ರಿಲೀಸ್ ಮಾಡಿಸಿ'ಕೊಡುತ್ತೇನೆ' ಎಂದು ದರ್ಶನ್ ಹೇಳಿದ್ದರಂತೆ.
ಟ್ರೈಲರ್ ನೋಡಿ ಇಷ್ಟಪಟ್ಟಿದ್ದ ಉಪೇಂದ್ರ
ಚಿತ್ರದ ಟ್ರೈಲೆರ್ ನೋಡಿ ದಚ್ಚು ಬ್ರದರ್ಸ್ ಸಿಕ್ಕಾಪಟ್ಟೆ ಇಷ್ಟ ಪಟ್ಟಿದ್ರಂತೆ. ಷ್ಟೆಯಲ್ಲ ಅನೇಕ ಜನ ಚಿತ್ರದ ಟ್ರೈಲರ್ ಗೆ ಫಿದಾ ಆಗಿದ್ರಂತೆ. ರಿಯಲ್ ಸ್ಟಾರ್ ಉಪೇಂದ್ರ ಕೂಡ ಚಿತ್ರದ ಟ್ರೈಲರ್ ನೋಡಿ, 'ಈ ರೀತಿಯ ಸೌಂಡಿಂಗ್ ಮತ್ತು ಕ್ಲಾಲಿಟಿ ಕನ್ನಡ ಚಿತ್ರರಂಗದಲ್ಲಿ ನೋಡಿಯೆ ಇಲ್ಲ. ಹೊಸತನದೊಂದಿಗೆ ಬರ್ತಿದ್ದೀರಾ ಒಳ್ಳೆಯದಾಗಲಿ ಎಂದು ಶ್ರೀಮುರಳಿ' ಎಂದು ಹಾರೈಸಿದ್ರಂತೆ.
'ಚಂದ್ರ ಚಕೋರಿ' ಸಿನಿಮಾಗೆ ಮುರಳಿ ಆಯ್ಕೆಯ ಹಿಂದಿದೆ ರೋಚಕ ಸಂಗತಿ
ಶ್ರೀಮುರಳಿಗೆ ಪ್ರಶಾಂತ್ ಕೊಟ್ಟ ವರದಕ್ಷಿಣೆ
ಉಗ್ರಂ ಸಿನಿಮಾ ನಟ ಶ್ರೀಮುರಳಿಗೆ ನಿರ್ದೇಶಕ ಪ್ರಶಾಂತ್ ನೀಲ್ ಕೊಟ್ಟ ವರದಕ್ಷಿಣೆ ಅಂತೆ. ಹೀಗಂತ ಸ್ವತಹ ನಿರ್ದೇಶಕ ಪ್ರಶಾಂತ್ ನೀಲ್ ಹೇಳಿಕೊಂಡಿದ್ದಾರೆ. ಶ್ರೀಮುರಳಿ ಪತ್ನಿ ವಿದ್ಯಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಮದುವೆ ಸಮದಯದಲ್ಲಿ ಪ್ರಾರಂಭವಾದ 'ಉಗ್ರಂ' ಸಿನಿಮಾ ಶ್ರೀಮುರಳಿಯನ್ನು ಮತ್ತೆ ಸ್ಟಾರ್ ನಟನನ್ನಾಗಿ ಮಾಡಿದೆ. ಅಷ್ಟು ದೊಡ್ಡ ಹಿಟ್ ನೀಡಿದ ನಿರ್ದೇಶಕ ಪ್ರಶಾಂತ್ ನೀಲ್ ವಿದ್ಯಾ ಅವರ ಸಹೋದರ. ಹಾಗಾಗಿ ವರದಕ್ಷಿಣೆಯಾಗಿ ನೀಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.