Don't Miss!
- News ಡಿ ಕೆ ಶಿವಕುಮಾರ್ 9 ವರ್ಷದ ಬಾಲಕಿಯನ್ನು ಕೂಡಿ ಹಾಕಿ ಆಸ್ತಿ ಬರೆಸಿಕೊಂಡವ್ರೆ ; ಹಿಂದಿನ ಸತ್ಯ ಬಿಚ್ಚಿಟ್ಟ ದೇವೇಗೌಡ್ರು
- Finance Lok Sabha Election 2024: ಡಿಜಿಲಾಕರ್ಗಾಗಿ ಡಿಜಿಟಲ್ ವೋಟರ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ
- Technology Infinix: ಭಾರತದಲ್ಲಿಂದು ಇನ್ಫಿನಿಕ್ಸ್ ನೋಟ್ 40 ಪ್ರೊ 5G ಮೊದಲ ಸೇಲ್: ಬೆಲೆ, ಫೀಚರ್ಸ್ ಪರಿಶೀಲಿಸಿ
- Lifestyle ಎಳ ನೀರು ಹಾಕಿ ಮಾಡುವ 2 ದೋಸೆ ರೆಸಿಪಿ: ರುಚಿ ಸೂಪರ್, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಡೆಲ್ಲಿ ವಿರುದ್ಧದ ಹೀನಾಯ ಸೋಲಿಗೆ ಇವರೇ ಕಾರಣ; ಶುಭ್ಮನ್ ಗಿಲ್ ಗರಂ
- Automobiles Kia: ಬಹುನಿರೀಕ್ಷಿತ ಕಿಯಾ ಕ್ಲಾವಿಸ್ ಮೈಕ್ರೋ ಎಸ್ಯುವಿ ಶೀಘ್ರದಲ್ಲೇ ಬಿಡಗಡೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಾತುಕತೆ ವಿನಯ್ ಜೊತೆ' ಹೊಸ ಟಾಕ್ ಶೋ
ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳ ಬಣ್ಣದ ಬದುಕು, ಅವರ ವೈಯಕ್ತಿಕ ಜೀವನ, ದಿನಚರಿ, ಸಿನಿಮಾ ವೃತ್ತಿಯಲ್ಲಿ ಅವರು ಎದುರಿಸಿದ ಸಮಸ್ಯೆಗಳು ಸೇರಿದಂತೆ ಅವರ ಜೀವನದ ಅನೇಕ ಅಂಶಗಳ ಮೇಲೆ ಬೆಳಕು ಚೆಲ್ಲುವ ಹಲವು ಶೋ ಗಳನ್ನು ಕನ್ನಡ ವಾಹಿನಿಗಳು ಈಗಾಗಲೇ ತಂದಿವೆ. ಉದಾಹರಣೆಗೆ ಜೀ ಕನ್ನಡ ವಾಹಿನಿ ಯಲ್ಲಿ ಪ್ರಸಾರ ವಾದ ಜನಪ್ರಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ. ಈಗ ಇಂತಹ ಸಾಲಿಗೆ ಹೊಸ ಟಾಕ್ ಶೋ ಒಂದು ಸೇರ್ಪಡೆ ಆಗಿದೆ.[ಸ್ಟಾರ್ ಸುವರ್ಣ 'ಸೂಪರ್ ಜೋಡಿ-2: ಈ ಬಾರಿ ಯಾರೆಲ್ಲ ಇದ್ದಾರೆ?]
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಟಾಕ್ ಶೋ ಒಂದು ಆರಂಭವಾಗಿದ್ದು, ಅದರ ಹೆಸರು 'ಮಾತುಕತೆ ವಿನಯ್ ಜೊತೆ'. ಈ ಕಾರ್ಯಕ್ರಮ ನಡೆಸಿಕೊಡುವ ಆ ವಿನಯ್ ಯಾರು, ಕಾರ್ಯಕ್ರಮ ಯಾವಾಗ ಪ್ರಸಾರವಾಗುತ್ತದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಮಾತುಕತೆ ವಿನಯ್ ಜೊತೆ
ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಮಾತುಕತೆ ವಿನಯ್ ಜೊತೆ' ಕಾರ್ಯಕ್ರಮವನ್ನು ವಿನಯ್ ಎಂಬುವವರು ನಡೆಸಿಕೊಡುತ್ತಿದ್ದಾರೆ. ಯಾರು ಈ ವಿನಯ್? ತಿಳಿಯಲು ಮುಂದೆ ಓದಿ..
ಮಾತುಕತೆಯ ವಿನಯ್
ವಿನಯ್ ಅವರು ಸಿನಿಮಾ ರಂಗದವರು ಅಲ್ಲ. ಹಾಗೆ ಯಾವುದೇ ಮನರಂಜನಾ ಕ್ಷೇತ್ರಕ್ಕೂ ಸೇರಿದವರಲ್ಲ. ಸಿಂಗಾಪುರ್ ನಲ್ಲಿ ಬ್ಯಾಂಕ್ ಉದ್ಯೋಗಿ ಆಗಿದ್ದ ವಿನಯ್ ಅವರು ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಬೇಕೆಂದು ಈ ಶೋ ಮಾಡಲು ನಿರ್ಧರಿಸಿದರಂತೆ. ಮೊದಲಿಗೆ ಯೂಟ್ಯೂಬ್ ನಲ್ಲಿ ಈ ಟಾಕ್ ಶೋ ಆರಂಭಿಸಿದ್ದರಂತೆ. ಪ್ರಸ್ತುತ ಸುವರ್ಣ ವಾಹಿನಿಗೆ ಈ ಶೋ ನಡೆಸಿಕೊಡುತ್ತಿದ್ದಾರೆ.
ಟಾಕ್ ಶೋ ನಲ್ಲಿ ಹೆಲ್ತ್ ಟಿಪ್ಸ್
ಸ್ಟಾರ್ ಸುವರ್ಣ ವಾಹಿನಿಯಲ್ಲಿನ 'ಮಾತುಕತೆ ವಿನಯ್ ಜೊತೆ' ಶೋ ಸ್ವಲ್ಪ ಡಿಫರೆಂಟ್ ಆಗಿದೆ. ಯಾಕಂದ್ರೆ ಇದೊಂದು ಟಾಕ್ ಆದರೂ ಸಹ ಸೆಲೆಬ್ರಿಟಿಗಳ ಜೊತೆ ಮಾತನಾಡುತ್ತ ಅವರಿಂದ ಹೆಲ್ತ್ ಟಿಪ್ಸ್ ಕೊಡಿಸಲಾಗುತ್ತಿದೆಯಂತೆ. ಸೆಲೆಬ್ರಿಟಿಗಳು ಕೊಡುವ ಹೆಲ್ತ್ ಟಿಪ್ಸ್ ಜನರಿಗೆ ಬಹುಬೇಗ ತಲುಪುತ್ತದೆ ಎಂಬ ಕಾರಣಕ್ಕಾಗಿ ವಿನಯ್ ಈ ಶೋ ಆರಂಭಿಸಿದರಂತೆ.
ಮಾತುಕತೆಯಲ್ಲಿ ಶಿವಣ್ಣ ಮತ್ತು ರಕ್ಷಿತ್ ಶೆಟ್ಟಿ
ಈಗಾಗಲೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ನಟ ರಕ್ಷಿತ್ ಶೆಟ್ಟಿ ಸೇರಿದಂತೆ ಇತರೆ 24 ಕ್ಕೂ ಹೆಚ್ಚು ಸೆಲೆಬ್ರಿಟಿಗಳು 'ಮಾತುಕತೆ ವಿನಯ್ ಜೊತೆ' ಟಾಕ್ ಶೋ ನಲ್ಲಿ ಭಾಗಿಯಾಗಿದ್ದಾರೆ. ಪ್ರತಿ ಭಾನುವಾರ ಬೆಳಗ್ಗೆ 11 ಗಂಟೆಗೆ ಟಾಕ್ ಶೋ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತದೆ.[ಫೋಟೋಗಳು:ಮಾತುಕತೆ ವಿನಯ್ ಜೊತೆ]