Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರವಿಚಂದ್ರನ್ ಎದುರಲ್ಲಿ ಅವರದ್ದೇ ಹಾಡು ಹೇಳಿದ ಸುದೀಪ್
Recommended Video
ಕಿಚ್ಚ ಸುದೀಪ್ ಅವರನ್ನ ಅಭಿನಯ ಚಕ್ರವರ್ತಿ ಎನ್ನುತ್ತಾರೆ. ಈ ಟೈಟಲ್ ಗೆ ತಕ್ಕ ಅಭಿನಯ ನೋಡಿದ್ದೀವಿ. ಹಾಗೆ, ನಟನೆ ಜೊತೆ ಸುದೀಪ್ ಗಾಯಕರೂ ಹೌದು. ಹಲವು ಹಾಡುಗಳು ಅವರ ಕಂಠದಲ್ಲಿ ಮೂಡಿಬಂದಿದೆ.
ಅಲ್ಲೊಂದು ಇಲ್ಲೊಂದು ವೇದಿಕೆಯಲ್ಲಿ ಲೈವ್ ಹಾಡು ಕೂಡ ಕೇಳಿರಬಹುದು. ಇದೀಗ, ಸುದೀಪ್ ಅವರ ಲೈವ್ ಹಾಡು ಕೇಳುವ ಅವಕಾಶ ಮತ್ತೆ ಸಿಕ್ಕಿದೆ. ಯುಗಾದಿ ಹಬ್ಬದ ಪ್ರಯುಕ್ತ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಪಡ್ಡೆಹುಲಿ' ಚಿತ್ರದ ವಿಶೇಷ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಈ ಶೋನಲ್ಲಿ ಸುದೀಪ್ ಹಾಡು ಹೇಳಿದ್ದಾರೆ.
ಯುಗಾದಿ ಹಬ್ಬಕ್ಕೆ ಸುದೀಪ್ ಪತ್ನಿ ಕೊಡ್ತಾರಂತೆ ಸ್ಪೆಷಲ್ ಗಿಫ್ಟ್
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹಾಡನ್ನ, ಅವರ ಎದುರಲ್ಲೇ ಹಾಡಿರುವುದು ವಿಶೇಷ. ರವಿಚಂದ್ರನ್ ಅಭಿನಯದ ಕಲಾವಿದ ಸಿನಿಮಾದ 'ಪ್ರೇಮಾ.....ಪ್ರೇಮಾ.....' ಹಾಡಿನ ಎರಡು ಸಾಲನ್ನ ಸುದೀಪ್ ಹೇಳಿದ್ರು. ಇದನ್ನ ವೇದಿಕೆಯಲ್ಲಿ ನಿಂತು ಕೇಳಿ ಕ್ರೇಜಿಸ್ಟಾರ್ ಖುಷಿಯಾದರು.
ಈ ಹಿಂದೆ 'ಜಿಮ್ಮಿಗಲ್ಲು' ಚಿತ್ರದ 'ತುತ್ತಾ ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ' ಹಾಡನ್ನ ಹಲವು ವೇದಿಕೆಯಲ್ಲಿ, ಹಲವು ಬಾರಿ ಹಾಡಿದ್ದಾರೆ. ಇದು ಸುದೀಪ್ ಅವರ ನೆಚ್ಚಿನ ಗೀತೆ ಕೂಡ ಹೌದು.
ದರ್ಶನ್ ಚಿತ್ರದ ವಿಲನ್ ಈಗ ಸುದೀಪ್ ಗೂ ವಿಲನ್.! ಯಾರದು?
ಕೆ ಮಂಜು ಅವರ ಮಗ ಶ್ರೇಯಸ್ ಅಭಿನಯದ ಪಡ್ಡೆಹುಲಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಯುಗಾದಿ ಹಬ್ಬದ ವಿಶೇಷವಾಗಿ ಸ್ಪೆಷಲ್ ಸಂಚಿಕೆ ಪ್ರಸಾರ ಮಾಡಲಾಗಿದೆ. ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.