Don't Miss!
- News ಮನೆ ಬಾಗಿಲಿಗೆ ಹೋದರೂ ಸಿಗಲಿಲ್ಲ ಬಿಜೆಪಿ ಶಾಸಕರು, ಸಂಸದರು: ಉ.ಕನ್ನಡ ಬಿಜೆಪಿ ಅಭ್ಯರ್ಥಿ ಕಾಗೇರಿಗಿಲ್ಲ ಅಸಮಾಧಾನಿತರ ಬೆಂಬಲ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Automobiles ಯುಎಸ್ಎ, ಕೆನಡಾಗೂ ಕಾಲಿಟ್ಟ ಭಾರತೀಯ ಬೈಕ್: ಮುಂದುವರೆದ ವಿಶ್ವಗುರು ಭಾರತದ ನಾಗಾಲೋಟ
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಹುಚ್ಚ ವೆಂಕಟ್ ಗೆಲ್ಲುವ ಸಾಧ್ಯತೆ ಇತ್ತು': ಸುದೀಪ್ ಹೀಗೆ ಹೇಳಿದ್ಯಾಕೆ?
ಬಿಗ್ ಬಾಸ್ ಕನ್ನಡ ಏಂಟನೇ ಆವೃತ್ತಿ ಆರಂಭವಾಗುತ್ತಿದೆ. ಈ ಸಲ ಯಾರ್ ಯಾರು ಮನೆಯೊಳಗೆ ಎಂಟ್ರಿ ಪಡೆದುಕೊಳ್ಳುತ್ತಾರೆ ಎಂಬ ಲೆಕ್ಕಾಚಾರ, ಚರ್ಚೆ ಜೋರಾಗಿ ನಡೆಯುತ್ತಿದೆ. ಬಿಗ್ ಬಾಸ್ ಹೊಸ ಸೀಸನ್ ಆರಂಭ ಹಿನ್ನೆಲೆ ಬೆಂಗಳೂರಿನಲ್ಲಿ ಸುದೀಪ್ ಮತ್ತು ಪರಮೇಶ್ವರ್ ಗುಂಡ್ಕಲ್ ಸುದ್ದಿಗೋಷ್ಠಿ ನಡೆಸಿದರು.
ಬಿಗ್ ಬಾಸ್ ಕಾರ್ಯಕ್ರಮದ ಅನುಭವದ ಬಗ್ಗೆ ಮಾತನಾಡಿದ ಸುದೀಪ್ ''ಮೂರನೇ ಆವೃತ್ತಿಯಲ್ಲಿ ಹುಚ್ಚ ವೆಂಕಟ್ ಗೆಲ್ಲುವ ಸಾಧ್ಯತೆ ಇತ್ತು'' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿಗ್ ಸುದ್ದಿ: ಬಿಗ್ ಬಾಸ್ ಮನೆಗೆ ಮೊಟ್ಟ ಮೊದಲ ಸಲ ರಾಜಕಾರಣಿ ಎಂಟ್ರಿ?
ಒಬ್ಬ ನಿರೂಪಕನಾಗಿ ಒಂದೆರಡು ವಾರ ನೋಡಿದ್ಮೇಲೆ ಸ್ಪರ್ಧಿಗಳ ಮನಸ್ಥಿತಿ ಬಗ್ಗೆ ನಿರ್ಧರಿಸಬಹುದಾ ಎಂಬ ಪ್ರಶ್ನೆಗೆ ಉತ್ತರಿಸಿದ ಸುದೀಪ್, ''ಸಾಧ್ಯವಿಲ್ಲ, ಬಹಳ ಒಳ್ಳೆಯ ಹೆಸರು ಇರೋರು ಹಾಳಾಗಿರುವುದನ್ನು ನೋಡಿದ್ದೇನೆ, ಒಳ್ಳೆ ಅಭಿಪ್ರಾಯ ಇಲ್ಲದವರ ಮೇಲೆ ಸಿಕ್ಕಾಪಟ್ಟೆ ಪಾಸಿಟಿವ್ ರೆಸ್ಪಾನ್ಸ್ ಪಡೆದುಕೊಂಡಿದ್ದು ನೋಡಿದ್ದೇನೆ'' ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹುಚ್ಚ ವೆಂಕಟ್ ಅವರನ್ನು ಉದಾಹರಣೆಯನ್ನಾಗಿ ನೀಡಿದ ಸುದೀಪ್ ''ಅಂದು ವೆಂಕಟ್, ಹಲ್ಲೆ ಮಾಡಿರಲಿಲ್ಲ ಅಂದಿದ್ದರೆ ಗೆಲ್ಲುವ ಸಾಧ್ಯತೆ ಇತ್ತು. ಅವರಿಗೆ ಬಹಳ ಚೆನ್ನಾಗಿ ವೋಟಿಂಗ್ ಬರ್ತಿತ್ತು. ಜನರಿಗೆ ಅವರು ಇಷ್ಟ ಆಗಿದ್ದರು. ಆದರೆ, ಪ್ರಚೋದನಕಾರಿಯಾಗಿ ನಡೆದ ಸನ್ನಿವೇಶಗಳಲ್ಲಿ ಆ ಘಟನೆ ಆಯಿತು. ಆ ಬಗ್ಗೆ ಬೇಸರ ಇದೆ'' ಎಂದು ಹೇಳಿದ್ದಾರೆ.
ಕಾಕತಾಳೀಯ ಅಂದ್ರೆ ಹುಚ್ಚ ವೆಂಕಟ್ ಅವರು ಹಲ್ಲೆ ಮಾಡಿದ ಎಪಿಸೋಡ್ಗೂ ಮುಂಚೆ ಬೆಳಗ್ಗೆ ಸುದೀಪ್ ಅವರು ಗುಂಡ್ಕಲ್ ಬಳಿ ''ಪರಂ, ನನಗೆ ಯಾಕೋ ಈ ವ್ಯಕ್ತಿ ಗೆಲ್ಲಬಹುದು ಅಂತ ಹೇಳಿದ್ದರಂತೆ. ದುರಾದೃಷ್ಟವಶಾತ್ ಅದೇ ದಿನ ಆ ಘಟನೆ ನಡೆಯಿತು'' ಎಂದು ಸುದೀಪ್ ಹೇಳಿಕೊಂಡಿದ್ದಾರೆ.