Just In
- 6 hrs ago
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- 6 hrs ago
Bigg Boss Tamil 4: ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿಯೇ ವಿಜೇತ!
- 7 hrs ago
ಫೋಟೋಗಳು: ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಸಿನಿ ತಾರೆಯರು; ಯಶ್, ಸುದೀಪ್ ಸಖತ್ ಡ್ಯಾನ್ಸ್
- 9 hrs ago
ಶಿವಮೊಗ್ಗದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್: 'ಬೆಸ್ಟ್ ವೀಕೆಂಡ್ ಎವರ್' ಎಂದ ನಟಿ
Don't Miss!
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Automobiles
ಅನಾವರಣವಾಯ್ತು 2021ರ ಎಪ್ರಿಲಿಯಾ ಆರ್ಎಸ್ವಿ4 ಬೈಕುಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಉದಯ ಟಿವಿಯಲ್ಲಿ ಆರಂಭ ಆಗಲಿದೆ ಹೊಸ ಶೋ 'ತುತ್ತಾ ಮುತ್ತಾ'
ಕರ್ನಾಟಕದ ಹೆಮ್ಮೆಯ ವಾಹಿನಿಯಾದ ಉದಯ ಟಿವಿಯು ಹೊಸದೊಂದು ಕಾರ್ಯಕ್ರಮವನ್ನು ಜನತೆಗೆ ಪರಿಚಯಿಸಲು ಸಜ್ಜಾಗಿದೆ. ಉದಯ ವಾಹಿನಿಯ ಹತ್ತಾರು ಕ್ರಿಯಾಶೀಲ ರಿಯಾಲಿಟಿ ಶೋಗಳ ಪಟ್ಟಿಗೆ 'ತುತ್ತಾ ಮುತ್ತಾ' ಕಾರ್ಯಕ್ರಮ ಸೇರ್ಪಡೆಯಾಗಲಿದೆ.
ತನ್ನ ಮಾತಿನಿಂದಲೇ ನಗುವಿನ ಹೊಳೆ ಹರಿಸುವ ನಿರಂಜನ್ ದೇಶಪಾಂಡೆ ನಿರೂಪಕನಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಮನರಂಜನೆಯೇ ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಸವಾಲು ಜವಾಬುಗಳ ಜುಗಲ್ಬಂದಿಯಾಗಿ ತೆರೆಯ ಮೇಲೆ ಇದೊಂದು ಹೊಸ ರೀತಿಯ, ವಿನೂತನ ರಿಯಾಲಿಟಿ ಶೋ ಆಗಿ ಮೂಡಿಬರಲಿದೆ.
ಕಾರ್ಯಕ್ರಮದಲ್ಲಿ ಹಿರಿತೆರೆ ಮತ್ತು ಕಿರುತೆರೆಯ ತಾರೆಯರ ದಂಡು ಭಾಗವಹಿಸಲಿದ್ದಾರೆ. ತಾರೆಯರ ಮಡದಿ ಮತ್ತು ತಾಯಂದಿರ ನಡುವೆ ನಡೆಯುವ ಜಟಾಪಟಿಯೇ 'ತುತ್ತಾ ಮುತ್ತಾ'. ಮುಂದೆ ಓದಿರಿ...

ಐದು ಲಕ್ಷ ಗೆಲ್ಲುವ ಅವಕಾಶ
ಆಟದಲ್ಲಿ ತಾರೆಯರ ತಾಯಿ ಒಂದು ಕಡೆ, ಹೆಂಡತಿ ಒಂದು ಕಡೆ ನಿಂತು ನಿರಂಜನ್ ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾರೆ. ಹನ್ನೆರಡು ಪ್ರಶ್ನೆಗಳಿಂದ ಐದು ಲಕ್ಷ ಗೆಲ್ಲುವ ಅವಕಾಶ ಇವರಿಗೆ ಇರುತ್ತದೆ. ಇದರಲ್ಲಿ ಸರಿಯಾಗಿ ಉತ್ತರ ಕೊಡುವವರು ಯಾರು ಎಂಬ ಆಯ್ಕೆ ಮಾತ್ರ ಬಂದ ತಾರೆಯರದ್ದು.
ಮತ್ತೊಂದು ಪೌರಾಣಿಕ ಧಾರಾವಾಹಿ ಶುರು: ಉದಯ ಟಿವಿಯಲ್ಲಿ 'ಜೈ ಹನುಮಾನ್'

ಸಂಬಂಧಗಳ ಮುಕ್ತ ಚರ್ಚೆ
ಉತ್ತರ ತಪ್ಪಾದಲ್ಲಿ ಬರೀ ಒಂದು ಕಡೆಯಿಂದ ಮಾತ್ರವಲ್ಲದೆ, ಆರೋಹಣ ಮತ್ತು ಅವರೋಹಣದ ಕ್ರಮದಲ್ಲಿ ಹಣ ಕಡಿತವಾಗುತ್ತಾ ಬರುತ್ತದೆ. ತಾಯಿ, ಮಗ, ಸೊಸೆಯ ನಡುವಿನ ಬಾಂಧವ್ಯ, ಸಂಬಂಧಗಳ ಮುಕ್ತ ಚರ್ಚೆ ಹಾಗು ಪ್ರಶ್ನೆಗಳಿಗೆ ಉತ್ತರ ಕೊಡುವ ರೋಚಕತೆಯೇ ಈ 'ತುತ್ತಾ ಮುತ್ತಾ'
'ಸೀರಿಯಲ್ ಹಬ್ಬ': 'ಮಾನಸ ಸರೋವರ' ಮತ್ತು 'ಅವಳು' ತಂಡದಿಂದ ಮಸ್ತ್ ಮನರಂಜನೆ

ಮನರಂಜನೆ ಅನಿಯಮಿತ
ವಾರಾಂತ್ಯದಲ್ಲಿ ಪ್ರಸಾರವಾಗುವ ಈ ಶೋನಲ್ಲಿ ಜನಕ್ಕೆ ತಮ್ಮ ನೆಚ್ಚಿನ ತಾರೆಯರ ಪರಿಚಯ ಮತ್ತಷ್ಟು ಹತ್ತಿರದಿಂದ ಆಗುವುದರಲ್ಲಿ ಅನುಮಾನವೇ ಇಲ್ಲ. ಹಾಗೆ ಮಸ್ತಿ ಮತ್ತು ಮನರಂಜನೆ ಅನಿಯಮಿತವಾಗಿ ದೊರೆಯಲಿದೆ.
350ನೇ ಸಂಚಿಕೆ ಸಂಭ್ರಮ: ಹೊಸ ರೂಪದಲ್ಲಿ 'ಅವಳು'

ಕುರಿ ಪ್ರತಾಪ್ ಕುಟುಂಬ
ಈ ಶೋನಲ್ಲಿ ವಿಧವಿಧವಾದ ಸವಾಲುಗಳನ್ನು ಹಾಕಲಾಗುತ್ತದೆ. ಇದನ್ನೆಲ್ಲಾ ಉತ್ತರಿಸಲು ಸಿನಿಮಾ ಮತ್ತು ಸಣ್ಣಪರದೆಯ ತಾರೆಯರು ಬರುತ್ತಾರೆ. ಸಂಗೀತ ನಿರ್ದೇಶಕ ಗುರುಕಿರಣ್, ಹಾಸ್ಯ ನಟ ಕುರಿ ಪ್ರತಾಪ್ ಈಗಾಗಲೇ ಈ ಆಟದಲ್ಲಿ ಭಾಗವಹಿಸಿರುವ ತಾರೆಯರು.
ಉದಯ ಟಿವಿಯಲ್ಲಿ ಪಕ್ಕಾ ಮನರಂಜನೆಯ ಶೋ 'ಸವಾಲ್ ಗೆ ಸೈ'

ಹಾಸ್ಯ ಸಾಗರ
ಗುರುಕಿರಣ್ ಅವರ ತಾಯಿಯ ಮುಗ್ಧತೆ, ಮಡದಿಯ ಮುದ್ದು ಮಾತುಗಳು, ಗುರುಕಿರಣ್ ರ ಹಾಡುಗಳು ಆ ಕಂತಿನ ವಿಶೇಷತೆಯಾದರೆ, ಕುರಿ ಪ್ರತಾಪ್ ರ ಸಂಚಿಕೆ, ಹಾಸ್ಯ ಸಾಗರವನ್ನೇ ಸುರಿಸುವುದರಲ್ಲಿ ಅನುಮಾನವೇ ಇಲ್ಲ. 'ತುತ್ತಾ ಮುತ್ತಾ' ಇದೇ ಶನಿವಾರದಿಂದ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.