Don't Miss!
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉಮಾಶ್ರೀ ಕೆನ್ನೆಗೆ ಹೊಡೆದಿದ್ದರು ಸಾಹಸಸಿಂಹ ವಿಷ್ಣು
ಕನ್ನಡ ಚಿತ್ರರಂಗದ ಸೃಜನಶೀಲ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಒಮ್ಮೆ ಉಮಾಶ್ರೀ ಅವರನ್ನು ಕುರಿತು ನೀವು ಸಿನಿಮಾಗೆ ಲಾಯಕ್ಕಿಲ್ಲ ಎಂದಿದ್ದರಂತೆ. ಒಮ್ಮೆ ಸಾಹಸಸಿಂಹ ವಿಷ್ಣುವರ್ಧನ್ ಅವರು ತೆರೆಯ ಮೇಲೆ ಅಲ್ಲ ರಿಯಲ್ ಆಗಿಯೇ ಕೆನ್ನೆಗೆ ಹೊಡೆದಿದ್ದರಂತೆ.
ಈ ಬಗ್ಗೆ ಉಮಾಶ್ರೀ ಅವರನ್ನು 'ಸ್ಟ್ರೈಟ್ ಹಿಟ್'ನಲ್ಲಿ ಕೇಳಿದಾಗ, ಹೌದು. ಆಗ ಭಾರತಿ ಅವರು ಹೇಳಿದ್ದೇನೆಂದರೆ ಅವರು ಕೆನ್ನೆಗೆ ಹೊಡೆದರೆ ಒಳ್ಳೆಯದಾಗುತ್ತದೆ ಹೋಗು ಎಂದಿದ್ದರು. ನನ್ನ ಜೀವನದಲ್ಲಿ ಹಾಗೆಯೇ ಆಯಿತು ಎಂದು ಉಮಾಶ್ರೀ ತಮ್ಮ ನೆನಪುಗಳನ್ನು ಹರವಿದ್ದಾರೆ.
ಸೆಡಕ್ಷನ್ ಪಾತ್ರಗಳನ್ನೇ ಹೆಚ್ಚಾಗಿ ಮಾಡುತ್ತಿದ್ದೀರಲ್ಲಾ ಎಂದು ಕೇಳಿದ್ದಕ್ಕೆ, ನನಗೆ ಯಾವುದೇ ಪಾತ್ರ ಕೊಟ್ಟರು ಅದನ್ನು ಜವಾಬ್ದಾರಿಯುತವಾಗಿ ಮಾಡ್ತೀನಿ ಎಂದಿದ್ದಾರೆ. ಅಂದಹಾಗೆ ಸ್ಟ್ರೈಟ್ ಹಿಟ್ ಕಾರ್ಯಕ್ರಮ ರಾಜ್ ಮ್ಯೂಸಿಕ್ ಚಾನಲ್ ನಲ್ಲಿ ಪ್ರತಿ ರಾತ್ರಿ 9 ಗಂಟೆಗೆ ಮೂಡಿಬರುತ್ತದೆ.
ಮಂಗಳವಾರ (ಜೂನ್.4) ರಾತ್ರಿ ಸ್ಟೈಟ್ ಹಿಟ್ ನಲ್ಲಿ ಬರುತ್ತಿರುವವರು ಸಾಫ್ಟ್ ಸೆಕ್ಸ್ ಚಿತ್ರಗಳ ರಾಣಿ, ಒಂದು ಕಾಲದ ಯುವಕರ ನಿದ್ದೆಗೆಡಿಸಿದ್ದ ಶಕೀಲಾ ಮೇಡಂ. ಅವರು ಸ್ವತಃ ತಂಗಿಯಿಂದಲೇ ಮೋಸ ಹೋಗಿದ್ದು, ಅವರ ಆತ್ಮಕಥೆ ಚಿತ್ರವಾಗುತ್ತಿರುವ ಬಗ್ಗೆ, ಸರಿಸುಮಾರು 20 ಕೆ.ಜಿ ತೂಕ ಇಳಿಸಿಕೊಂಡಿರುವ ಬಗ್ಗೆ, ಹೆಚ್ಚಾಗಿ ವಯಸ್ಕರ ಚಿತ್ರಗಳಲ್ಲೇ ಅಭಿನಯಿಸಿದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಇಂದು ರಾತ್ರಿ 9 ಗಂಟೆಗೆ ಡೋಂಟ್ ಮಿಸ್ ರಾಜ್ ಮ್ಯೂಸಿಕ್. (ಒನ್ಇಂಡಿಯಾ ಕನ್ನಡ)