Don't Miss!
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- News BJP Big Campaign: ಏಪ್ರಿಲ್ 20 ರಿಂದ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರ ದಂಡು! ಯಾರ್ಯಾರು ಬರಲಿದ್ದಾರೆ?
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಆಪ್ ಸ್ಟೋರ್ನಿಂದ ವಾಟ್ಸಾಪ್, ಥ್ರೆಡ್ ತೆಗೆದುಹಾಕಿದ ಆಪಲ್!
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Technology Google Maps: ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಸೌಲಭ್ಯ! ಹತ್ತಿರದ EV ಚಾರ್ಜಿಂಗ್ ಸ್ಟೇಷನ್ ಸರ್ಚ್ ಬಲು ಸುಲಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶ್ರುತಿ ಅವರಿಂದ ಕೆಂಡವಾಗಿದ್ದ ವೀಕ್ಷಕರು, ಕಣ್ಣನ್ ಅವರಿಂದ ಕೂಲ್ ಆದರು
'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಈ ವಾರ ಇಬ್ಬರು ಅತಿಥಿಗಳು ಆಗಮಿಸಲಿದ್ದಾರೆ. ಶನಿವಾರ ನಟಿ ಶ್ರುತಿ ಮತ್ತು ಭಾನುವಾರ 'ಹರಟೆ' ಖ್ಯಾತಿಯ ಹಿರೇಮಗಳೂರು ಕಣ್ಣನ್ ಸಾಧಕರ ಸೀಟ್ ಮೇಲೆ ಕುಳಿತುಕೊಳ್ಳಲಿದ್ದಾರೆ.
ಸಾಧಕರ ಸೀಟ್ ಮೇಲೆ ಕೂತ ನಟಿ ಶ್ರುತಿ: ಮತ್ತೆ ಭುಗಿಲೆದ್ದ ವೀಕ್ಷಕರ ಆಕ್ರೋಶ.!
ಶೃತಿ ಅವರನ್ನು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಕರೆಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಆದರೆ ಈಗ ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಅವರ ಬರುವಿಕೆಯಿಂದ ವೀಕ್ಷಕರು ಫುಲ್ ಖುಷಿಯಾಗಿದ್ದಾರೆ. ಮುಂದೆ ಓದಿ....
ಕಣ್ಣನ್ ಉತ್ತಮ ಆಯ್ಕೆ
ಹಿರೇಮಗಳೂರು ಕಣ್ಣನ್ ಅವರು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಉತ್ತಮ ಆಯ್ಕೆ ಎಂಬುದು ಅನೇಕರ ಅಭಿಪ್ರಾಯ.
ಖುಷಿಯಾದ ಪ್ರೇಕ್ಷಕರು
''ಸಾಧಕರ ಸೀಟಿನಲ್ಲಿ ಯಾರೂ ಊಹೆ ಮಾಡಿರದ ಸಾಧಕರು ಇವರು. ಕನ್ನಡ ಪೂಜಾರಿಗೆ ಜೈ, ಇವರನ್ನು ಕರೆಸಿ ಜೀ ಕನ್ನಡಕ್ಕೆ ಮೆರುಗು ಬಂತು'' ಎಂದು ವೀಕ್ಷಕರು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ಮಿಸ್ ಮಾಡದೇ ನೋಡುತ್ತೇವೆ
''ಕಣ್ಣನ್ ಅವರ ಅಕ್ಷರ ಸಾಹಿತ್ಯಕ್ಕಾಗಿ ಕಾತರರಾಗಿದ್ದೇವೆ. ಆ ದಿನ ಮಿಸ್ ಮಾಡದೇ ನೋಡುತ್ತೇವೆ'' ಎಂದು ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇಂತಹ ವ್ಯಕ್ತಿ ಲಕ್ಷಕ್ಕೊಬ್ಬರು
''ನಿಜಕ್ಕೂ ಇದು ಹೆಮ್ಮೆಯ ವಿಷಯ. ಇವರೆಲ್ಲ ಸಾವಿರಕ್ಕೊಬ್ಬರು ಅಲ್ಲ.. ಲಕ್ಷಕ್ಕೊಬ್ಬರು. ಬಹಳ ಖುಷಿ ಆಯ್ತು ಇವರನ್ನು ನೋಡಿ'' ಎಂದು ವೀಕ್ಷಕ ಪ್ರಭುಗಳು ಮನತುಂಬಿ ಬರೆದುಕೊಂಡಿದ್ದಾರೆ.
ಕನ್ನಡಿಗರು ನೋಡಬೇಕು
''ಪ್ರತಿಯೊಬ್ಬ ಕನ್ನಡಿಗರು ನೋಡಬೇಕಾದ ಸಂಚಿಕೆ ಇದು. ನಿಜವಾದ ಕನ್ನಡಿಗರು ಕಣ್ಣನ್ ಅವರ ಕನ್ನಡ ಜ್ಞಾನಕ್ಕೆ ಸೆಲ್ಯೂಟ್ ಹೊಡೆಯಬೇಕು'' ಎಂದು ಕೆಲ ವೀಕ್ಷಕರು ಹೇಳಿದ್ದಾರೆ.
ನಿಟ್ಟುಸಿರು ಬಿಟ್ಟ ವೀಕ್ಷಕರು
ನಟಿ ಶೃತಿ ಅವರ 'ವೀಕೆಂಡ್ ವಿತ್ ರಮೇಶ್' ಸಂಚಿಕೆ ಬಗ್ಗೆ ಭುಗಿಲೆದ್ದಿದ್ದ ವೀಕ್ಷಕರ ಆಕ್ರೋಶವನ್ನು ಕಣ್ಣನ್ ಅವರ ಸಂಚಿಕೆ ಒಂದು ಮಟ್ಟಕ್ಕೆ ತಣ್ಣಗೆ ಮಾಡಿದೆ ಎನ್ನಬಹುದು.