Don't Miss!
- News karnataka Rain: ಕರ್ನಾಟಕದಲ್ಲಿ ಮುಂದಿನ ಮೂರು ದಿನ ದಾರಕಾರ ಮಳೆ: ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವರುಣನ ಅರ್ಭಟ!
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಿಗ್ ಬಾಸ್' ಶೋಗೆ ಖಳನಟ ರವಿಶಂಕರ್ ಎಂಟ್ರಿ
ಸುವರ್ಣ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಸೀಸನ್ 2 ಎರಡನೇ ವಾರಕ್ಕೆ ಅಡಿಯಿಟ್ಟಿದೆ. ಮೊದಲ ವಾರದ ವಿಶೇಷ ಅತಿಥಿಯಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಆಗಮಿಸಿದ್ದರು. ಅವರು ಸುದೀಪ್ ಜೊತೆ ತಮ್ಮ ಜೀವನದ ಅತ್ಯಮೂಲ್ಯ ಕ್ಷಣಗಳನ್ನು ಸ್ಮರಿಸಿಕೊಂಡಿದ್ದನ್ನು ಓದಿರುತ್ತೀರಾ, ನೋಡಿರುತ್ತೀರಾ.
ಈ
ವಾರ
'ಸಖತ್
ಸಂಡೇ
ವಿತ್
ಕಿಚ್ಚ
ಸುದೀಪ್'
ಜೊತೆ
ಯಾರಿರುತ್ತಾರೆ?
ಈ
ವಾರ
ಒಬ್ಬರಲ್ಲ
ಇಬ್ಬರು
ಸೆಲೆಬ್ರಿಟಿಗಳು
ಕಿಚ್ಚನ
ಜೊತೆಗಿರುತ್ತಾರೆ.
ಅವರು
ಬೇರಾರು
ಅಲ್ಲ
ಕನ್ನಡದ
ಖಳನಟ
ರವಿಶಂಕರ್
ಹಾಗೂ
ಗಾಯಕ,
ಸಂಗೀತ
ನಿರ್ದೇಶಕ
ವಿಜಯ
ಪ್ರಕಾಶ್.
[ಹೆಚ್ಚಾಗಿ
ನೋವನ್ನೇ
ಉಂಡ
'ನೀಲಕಂಠ'
ರವಿಚಂದ್ರನ್]
ಸುದೀಪ್ ಜೊತೆಗಿನ 'ಕೆಂಪೇಗೌಡ' ಚಿತ್ರದ 'ಆರ್ಮುಗಂ' ಪಾತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ರವಿಶಂಕರ್ ಬಳಿಕ 'ಕೋಟೆ' ಕಠಾರಿಯಾಗಿ, 'ದಂಡಂ ದಶಗುಣಂ'ನ ತಮಟೆ ಶಿವನಾಗಿ 'ಡಂಡುಪಾಳ್ಯ'ದ ಇನ್ಸ್ ಪೆಕ್ಟರ್ ಚಲಪತಿಯಾಗಿ ಹೀಗೆ ಹಲವಾರು ವಿಭಿನ್ನ ಪಾತ್ರಗಳನ್ನು ಪೋಷಿಸುತ್ತಾ ಕನ್ನಡಿಗರ ಹೃದಯ ಗೆದ್ದಿದ್ದಾರೆ.
ಇನ್ನು
ವಿಜಯ
ಪ್ರಕಾಶ್
ಅವರು
'ಸ್ಲಂಡಾಗ್
ಮಿಲಿಯನೇರ್'
ಚಿತ್ರದ
'ಜೈ
ಹೋ'
ಹಾಡಿನ
ಮೂಲಕ
ಕನ್ನಡಿಗರ
ಕೀರ್ತಿ
ಪತಾಕೆಯನ್ನು
ವಿಶ್ವಮಟ್ಟದಲ್ಲಿ
ಹಾರಿಸಿ
ಖ್ಯಾತರಾದವರು.
ಕನ್ನಡದಲ್ಲಿ
ತಮ್ಮದೇ
ಆದಂತಹ
ಕಂಠಸಿರಿಯನ್ನು
ಹೊಂದಿರುವ
ವಿಜಯ್,
"ಖಾಲಿ
ಕ್ವಾಟ್ರು
ಬಾಟ್ಲಿಯಂತೆ
ಲೈಫು"
ಹಾಡನ್ನು
ಮರೆತಿರಲ್ಲ.
ಕನ್ನಡ, ಹಿಂದಿ, ತೆಲುಗು, ತಮಿಳನಲ್ಲಿ ಅಸಂಖ್ಯಾತ ಹಾಡುಗಳು ವಿಜಯ್ ಪ್ರಕಾಶ್ ಅವರ ಕಂಠಸಿರಿಯಲ್ಲಿ ಹೊರಹೊಮ್ಮಿವೆ. ಇವರಿಬ್ಬರು ಈ ವಾರ 'ಸಖತ್ ಸಂಡೇ ವಿತ್ ಸುದೀಪ್' ಜೊತೆ ಏನೆಲ್ಲಾ ಹಂಚಿಕೊಳ್ಳುತ್ತಾರೆ ಎಂಬ ಕುತೂಹಲ ಇದ್ದೇ ಇದೆ. (ಒನ್ಇಂಡಿಯಾ ಕನ್ನಡ ಎಕ್ಸ್ ಕ್ಲೂಸೀವ್)