Don't Miss!
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Lifestyle ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅರ್ಜುನ್ ಜನ್ಯ ನೋವಿನಲ್ಲಿ ಹುಟ್ಟಿತ್ತಂತೆ 'ಅಪ್ಪಾ ಐ ಲವ್ ಯೂ' ಹಾಡು!
'ಅಪ್ಪಾ ಐ ಲವ್ ಯೂ'......'ಚೌಕ' ಚಿತ್ರದ ಈ ಸೂಪರ್ ಹಿಟ್ ಹಾಡನ್ನ ಯಾರು ತಾನೆ ಮರೆಯೋಕೆ ಆಗುತ್ತೆ. ಈ ಹಾಡು ಕೇಳಿದ ಪ್ರತಿಯೊಬ್ಬರು ತಮ್ಮ ತಂದೆಯನ್ನ ನೆನೆದು ಕಣ್ಣೀರಿಟ್ಟಿದ್ದಾರೆ. ಅದೇಷ್ಟೋ ಜನ ತಮ್ಮ ತಂದೆಯನ್ನ ನೋಡಲು ಊರುಗಳಿಗೆ ಹೋಗಿದ್ದಾರೆ. ಇಂತಹ ಮನಮುಟ್ಟುವಂತಹ ಹಾಡಿನ ಹಿಂದೆ ಒಂದು ಹೃದಯಸ್ವರ್ಶಿಸುವ ಕಥೆಯಿದೆ.[ಅರ್ಜುನ್ ಜನ್ಯ 'ಸಂಗೀತ ಲೋಕ'ಕ್ಕೆ ಬರಲು ಬಲವಾದ ಕಾರಣ ಏನು?]
ಹೌದು, ಈ ಹಾಡಿಗೂ ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೂ ಭಾವನಾತ್ಮಕ ಸಂಬಂಧ. ಈ ಹಾಡು ಹುಟ್ಟಿದ್ದು ಕೂಡ ಅಷ್ಟೇ ಭಾವನಾತ್ಮಕವಾಗಿಯೇ. ಅದು ಏನು ಎಂದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಅರ್ಜುನ್ ಜನ್ಯ ಹೇಳಿಕೊಂಡಿದ್ದಾರೆ.
ಈ ಹಾಡು ಚಿತ್ರದಲ್ಲಿ ಇರಲಿಲ್ಲ!
'ಅಪ್ಪ ಐ ಲವ್ ಯೂ'.....ಹಾಡು 'ಚೌಕ' ಚಿತ್ರದಲ್ಲಿ ಇರಲಿಲ್ಲ. ಇದನ್ನ ಒಂದು ಬಿಟ್ ರೀತಿಯಲ್ಲಿ ಬಳಸಬೇಕಿತ್ತು ಅಷ್ಟೇ. ಆದ್ರೆ, ಅರ್ಜುನ್ ಜನ್ಯ ಅವರ ಎಮೋಷನ್ ಈ ಹಾಡನ್ನ ಪೂರ್ತಿ ಬಳಸುವಂತೆ ಮಾಡಿತು. ['ಲೋಕೇಶ್ ಕುಮಾರ್'ಗೆ ಅರ್ಜುನ್ ಎಂದು ಹೆಸರಿಟ್ಟಿದ್ದು ಒಬ್ಬ ಸಾಹಿತಿ!]
ಅಪ್ಪ ಸಾಂಗ್ ಹುಟ್ಟಲು ಅರ್ಜುನ್ ಕಾರಣ
ಅಪ್ಪ ಐ ಲವ್ ಯೂ ಸಾಂಗ್ ಹುಟ್ಟಲು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕಾರಣ. ಕೇವಲ ಬಿಟ್ ರೀತಿಯಲ್ಲಿದ್ದ ಹಾಡನ್ನ, ಪೂರ್ತಿ ಮಾಡಿಬಿಟ್ಟರಂತೆ. ಆಮೇಲೆ ನಿರ್ದೇಶಕರಿಗೆ ಹೇಳಿದರಂತೆ. ಸರ್, ಇಂತಹ ಅವಕಾಶ ಮತ್ತೆ ಸಿಗಲ್ಲ. ಈ ಹಾಡನ್ನ ಪೂರ್ತಿ ಬಳಸಿಕೊಳ್ಳೋಣ ಎಂದು. ಆಮೇಲೆ ಈ ಹಾಡು ಪೂರ್ತಿ ಹಾಡಾಯಿತ್ತಂತೆ.[ಅನುಶ್ರೀ ಮೇಲೆ ಅರ್ಜುನ್ ಜನ್ಯಾ ಪತ್ನಿಗೆ ಕೋಪ ಇದ್ಯಾ?]
ಅಪ್ಪನಿಗಾಗಿ ಲೆಟರ್ ಬರೆದ ಅರ್ಜುನ್ ಜನ್ಯ
ಈ ಹಾಡು ಪೂರ್ತಿ ಬರೆದ ನಂತರ ಅರ್ಜುನ್ ಜನ್ಯ ಅವರು ಅವರ ತಂದೆಯ ನೆನಪಲ್ಲಿ ಒಂದು ಪತ್ರ ಬರೆದರಂತೆ. ''ಅಪ್ಪ ನಿನಗಾಗಿ ಹಾಡು ಬರೆದು. ನೀನು ಇಲ್ಲ. ಆದ್ರೂ ನಿನಗೆ ಕೇಳಿಸಬೇಕು. ನನಗೆ ಗೊತ್ತು ನಿನು ಎಲ್ಲೋ ನಿಂತ್ಕೊಂಡು ಈ ಹಾಡು ಕೇಳ್ತಿದ್ದಿಯಾ? ಎಂದು ಅಪ್ಪನನ್ನ ನೆನಸಿಕೊಂಡರಂತೆ.[ನೀರಿಲ್ಲದ ಬಾವಿಗೆ ಅರ್ಜುನ್ ಜನ್ಯ ಬಿದ್ದಿದ್ಯಾಕೆ?]
ಪ್ರೇಕ್ಷಕರ ಮನಗೆದ್ದ ಹಾಡು
ವಿ.ನಾಗೇಂದ್ರ ಪ್ರಸಾದ್ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಅದಕ್ಕೆ ಅರ್ಜುನ್ ಜನ್ಯ ಅವರು ಅದ್ಭುತವಾಗಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಾಶಿನಾಥ್ ಮತ್ತು ಮಾನ್ವಿತಾ ಹರೀಶ್ ಈ ಹಾಡಿನಲ್ಲಿ ಅಭಿನಯಿಸಿದ್ದರು. ಚೌಕ ಚಿತ್ರವನ್ನ ತರುಣ್ ಸುಧೀರ್ ನಿರ್ದೇಶನ ಮಾಡಿದ್ದು, ದ್ವಾರಕೀಶ್ ನಿರ್ಮಾಣ ಮಾಡಿದ್ದರು.