Just In
Don't Miss!
- News
ಮಮತಾ ಭಾಷಣದ ಮಧ್ಯೆ ಜೈ ಶ್ರೀರಾಮ ಘೋಷಣೆ; ಕೋಪದಲ್ಲೇ ಭಾಷಣ ಆರಂಭಿಸಿದ ದೀದಿ
- Automobiles
2021ರ ಕ್ರೆಟಾ ಕಂಪ್ಯಾಕ್ಟ್ ಎಸ್ಯುವಿ ಕಾರಿನ ಬೆಲೆ ಹೆಚ್ಚಳ ಮಾಡಿದ ಹ್ಯುಂಡೈ
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Sports
ಟೀಮ್ ಇಂಡಿಯಾದ 6 ಆಟಗಾರರಿಗೆ ಆನಂದ್ ಮಹೀಂದ್ರರಿಂದ ಭರ್ಜರಿ ಗಿಫ್ಟ್!
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವೀಕೆಂಡ್ ಸಾಧಕರ ಸೀಟಿನಲ್ಲಿ ಈ ವಾರ ಕನ್ನಡದ ಖ್ಯಾತ ನಟ
ಕಳೆದ ವಾರ ಮಂಡ್ಯ ನೂತನ ಸಂಸದೆ ನಟಿ ಸುಮಲತಾ ಮತ್ತು ಪ್ರಖ್ಯಾತ ನಿರ್ದೇಶಕ ಟಿ.ಎಸ್ ನಾಗಾಭರಣ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಾಧಕರಾಗಿ ಭಾಗವಹಿಸಿದ್ದರು. ಇವರಿಬ್ಬರ ನಂತರ ಮುಂದಿನ ವಾರ ಯಾರು ಬರಬಹುದು ಎಂಬ ನಿರೀಕ್ಷೆಗೆ ಜೀ ಕನ್ನಡ ಉತ್ತರ ಕೊಟ್ಟಿದೆ.
ಈ ವಾರದ ಸಾಧಕರ ಭಾವಚಿತ್ರವನ್ನ ಬಿಡುಗಡೆ ಮಾಡಿರುವ ಜೀ ಕನ್ನಡ ವಾಹಿನಿ, ಮುಖವನ್ನ ಬ್ಲರ್ ಮಾಡಿ 'ಈ ವಾರದ ಸಾಧಕ ಯಾರೆಂದು ಗುರುತಿಸಿ' ಎಂದು ಕೇಳಿದ್ದಾರೆ.
ಮಂಡ್ಯ ಜನರಿಗಾಗಿ ರಾಕ್ ಲೈನ್ ವೆಂಕಟೇಶ್ ಕೈಗೊಂಡ ಹೊಸ ನಿರ್ಧಾರ
ಸಿನಿಮಾ ಆಸಕ್ತಿಯಿರುವ ಬಹುತೇಕರಿಗೆ ಆ ಭಾವಚಿತ್ರ ಯಾರದ್ದು ಗೊತ್ತಾಗಿದೆ. ಹೌದು, ಕಾಮಿಡಿ ಕಿಂಗ್ ಶರಣ್ ಅವರು ಈ ವಾರ ಸಾಧಕರ ಸೀಟಿನಲ್ಲಿ ಕುಳಿತುಕೊಳ್ಳುತ್ತಿದ್ದಾರೆ.
ಈಗಾಗಲೇ ಶರಣ್ ಅವರ ಎಪಿಸೋಡ್ ರೆಕಾರ್ಡ್ ಮುಗಿದಿದೆ. ಶರಣ್ ಸಂಚಿಕೆಯ ರೆಕಾರ್ಡಿಂಗ್ ದಿನದ ಕೆಲವು ಫೋಟೋಗಳು ಕೂಡ ಬಹಿರಂಗವಾಗಿತ್ತು. ಶರಣ್ ಮಕ್ಕಳು, ಸಹೋದರಿ ಶ್ರುತಿ ಮಗಳು ಸೇರಿದಂತೆ ಹಲವರು ಈ ಶೋನಲ್ಲಿ ಭಾಗವಹಿಸಿದ್ದರು.
ಚೆನ್ನಮ್ಮ ಸರ್ಕಲ್ ನಲ್ಲಿ 'ಆಕಸ್ಮಿಕ' ಹಾಡನ್ನು ಶೂಟ್ ಮಾಡಿದ್ದೇ ರೋಚಕ ಕಥೆ!
ಸದ್ಯಕ್ಕೆ ಶರಣ್ ಅವರ ಸಂಚಿಕೆ ಶನಿವಾರ ಒಂದೇ ದಿನ ಇರುತ್ತಾ ಅಥವಾ ಭಾನುವಾರವೂ ಮುಂದುವರಿಯುತ್ತಾ ಎಂಬುದರ ಬಗ್ಗೆ ಸುಳಿವು ನೀಡಿಲ್ಲ. ಒಂದು ವೇಳೆ ಶನಿವಾರ ಮಾತ್ರ ಪ್ರಸಾರವಾಗುವುದಾದರೇ, ಭಾನುವಾರದ ಅತಿಥಿ ಯಾರು ಎಂಬುದು ಕುತೂಹಲ.