Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಿಗ್ ಬಾಸ್' ಶೋ ಕಲರ್ಸ್ ಸೂಪರ್ ಗೆ ಶಿಫ್ಟ್ ಆಗಲು 2 ಬಲವಾದ ಕಾರಣ
Recommended Video
'ಬಿಗ್ ಬಾಸ್ ಕನ್ನಡ 5' ಕಾರ್ಯಕ್ರಮ ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಬಾಕಿಯಿದೆ. ನಿರೀಕ್ಷೆಯಂತೆ ಈ ಬಾರಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಆರಂಭವಾಗಬೇಕಿತ್ತು. ಆದ್ರೆ, 5ನೇ ಆವೃತ್ತಿಯನ್ನ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಮಾಡಲು ನಿರ್ಧರಿಸಲಾಗಿದೆ.
ಕಲರ್ಸ್ ಕನ್ನಡ ವಾಹಿನಿಗೆ ಹೋಲಿಸಿಕೊಂಡ್ರೆ, ಸೂಪರ್ ಚಾನೆಲ್ ಹೊಸದು. ಟಿ.ಆರ್.ಪಿಯಲ್ಲೂ ಬೇರೆ ವಾಹಿನಿಗಳಿಗಿಂತ ಹಿಂದೆ ಇದೆ. ಹೀಗಿರುವಾಗ, 'ಬಿಗ್ ಬಾಸ್' ಎಂಬ ಟಾಪ್ ರೇಟಿಂಗ್ ಶೋ ಈ ವಾಹಿನಿಯಲ್ಲಿ ಪ್ರಸಾರ ಮಾಡುತ್ತಿದ್ದಾರೆ.
'ಬಿಗ್ ಬಾಸ್' ಅಯೋಜಕರ ಈ ನಿರ್ಧಾರದ ಹಿಂದೆ 2 ಬಲವಾದ ಕಾರಣವಿದೆ. ಅದನ್ನ ಸ್ವತಃ 'ಬಿಗ್ ಬಾಸ್' ಡೈರೆಕ್ಟರ್ ಪರಮೇಶ್ವರ ಗುಂಡ್ಕಲ್ ಅವರು 'ಫಿಲ್ಮಿಬೀಟ್ ಕನ್ನಡ' ಜೊತೆ ಹಂಚಿಕೊಂಡಿದ್ದಾರೆ. ಮುಂದೆ ಓದಿ.....
ಇದೊಂದು ಚಾಲೆಂಜಿಂಗ್ ನಿರ್ಧಾರ
''ವಾರದ ದಿನಗಳಲ್ಲಿ ಕಲರ್ಸ್ ಕನ್ನಡ ನಂ.1 ಸ್ಥಾನದಲ್ಲಿದೆ. ವಾರಾಂತ್ಯದಲ್ಲಿ ಕೆಲವೊಮ್ಮೆ ನಂ.1 ಇರುತ್ತೆ, ಮತ್ತೆ ಕೆಲವೊಮ್ಮ ನಂ.2 ಇರುತ್ತೆ. ವೀಕೆಂಡ್ ನಲ್ಲಿ ಇನ್ನು ಫೈಟ್ ಮಾಡ್ತಿದ್ದೀವಿ. ಹೀಗಿರಬೇಕಾದ್ರೆ, ಕಲರ್ಸ್ ಸೂಪರ್ ಚಾನೆಲ್ ಅಂತಹ ಹೊಸ ವಾಹಿನಿಗೆ ಬಿಗ್ ಬಾಸ್ ಶಿಫ್ಟ್ ಮಾಡುತ್ತಿರುವುದು ನಿಜಕ್ಕೂ ಚಾಲೆಂಜ್. ಆದ್ರೆ, ಬಿಗ್ ಬಾಸ್ ಅಂತಹ ಕಾರ್ಯಕ್ರಮ ಹೊಸ ಚಾನೆಲ್ ಗೆ ಬೇಕಾಗುತ್ತೆ'' - ಪರಮೇಶ್ವರ ಗುಂಡ್ಕಲ್, ಬಿಗ್ ಬಾಸ್ ನಿರ್ದೇಶಕ
'ಬಿಗ್ ಬಾಸ್ ಕನ್ನಡ 5'ಗೆ ಪ್ರಥಮ್ ಪ್ರಕಾರ ಇವರು ಹೋಗ್ಬೇಕಂತೆ.!
ಮೊದಲ ಕಾರಣ
'ಬಿಗ್ ಬಾಸ್' ಮೂಲಕ ಸುಮಾರು ಒಂದು ವರ್ಷದ ಅನುಭವ ಹೊಂದಿರುವ ಕಲರ್ಸ್ ಸೂಪರ್ ವಾಹಿನಿಯನ್ನ ಮತ್ತಷ್ಟು ಜನರ ಹತ್ತಿರ ತೆಗೆದುಕೊಂಡು ಹೋಗುವ ಪ್ರಯತ್ನ. ಇದು ಬಿಸಿನೆಸ್ ದೃಷ್ಟಿಯಿಂದ ಹೊರತಾದ ನಿರ್ಧಾರ'' - ಪರಮೇಶ್ವರ ಗುಂಡ್ಕಲ್, ಬಿಗ್ ಬಾಸ್ ನಿರ್ದೇಶಕ
'ಬಿಗ್ ಬಾಸ್'ನಲ್ಲಿ ಈ ಬಾರಿ ಜನಸಾಮಾನ್ಯರಿಗೆ ಹೆಚ್ಚಿನ ಪ್ರಾಮುಖ್ಯತೆ.?
ಮುಖ್ಯವಾಹಿನಿಗೆ ತರಬೇಕು ಎನ್ನುವ ಗುರಿ
''ಬಿಗ್ ಬಾಸ್' ಕಾರ್ಯಕ್ರಮಕ್ಕೆ ದೊಡ್ಡ ವೀಕ್ಷಕರ ಬಳಗ ಇದೆ. ಅಂತಹ ದೊಡ್ಡ ಶೋ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವುದರಿಂದ ಈ ವಾಹಿನಿ ಮುಖ್ಯವಾಹಿನಿಗೆ ತರಬಹುದು ಎಂದು ಬಯಕೆ'' - ಪರಮೇಶ್ವರ ಗುಂಡ್ಕಲ್, ಬಿಗ್ ಬಾಸ್ ನಿರ್ದೇಶಕ
ಎರಡನೇ ಕಾರಣ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳು ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. 8 ಗಂಟೆಗೆ 'ಅಗ್ನಿಸಾಕ್ಷಿ' ಬರ್ತಿದೆ, 9 ಗಂಟೆಗೆ 'ರಾಧಾರಮಣ', ನಂತರ 'ಪದ್ಮಾವತಿ' ಎಲ್ಲವೂ ಸ್ಟ್ರಾಂಗ್ ಆಗಿದೆ. 10 ಗಂಟೆಗೆ ಮೇಲೆ 'ಬಿಗ್ ಬಾಸ್' ಲೇಟ್ ಆಗುತ್ತೆ. ಅದಕ್ಕೆ ಬೇಗನೇ ಕೊಡ್ಬೇಕು ಎನ್ನುವ ತೀರ್ಮಾನ ಮಾಡಿದ್ವಿ'' - ಪರಮೇಶ್ವರ ಗುಂಡ್ಕಲ್, ಬಿಗ್ ಬಾಸ್ ನಿರ್ದೇಶಕ
'ಬಿಗ್ ಬಾಸ್ ಕನ್ನಡ-5': ಸ್ಪರ್ಧಿಗಳ ಪಟ್ಟಿಯಲ್ಲಿ 'ಇವರುಗಳ' ಹೆಸರು ಇದ್ಯಂತೆ.!
ಧಾರಾವಾಹಿಗಳಿಗೆ ಸಮಸ್ಯೆ ಆಗಬಾರದು
ಪ್ರೈಮ್ ಟೈಮ್ ನಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಧಾರಾವಾಹಿಗಳು ಚೆನ್ನಾಗಿ ಪ್ರದರ್ಶನವಾಗುತ್ತಿದೆ. ಬಿಗ್ ಬಾಸ್ ಕಲರ್ಸ್ ಕನ್ನಡದಲ್ಲಿ ಪ್ರಸಾರ ಮಾಡುವುದರಿಂದ ಆ ಧಾರಾವಾಹಿಗಳಿಗೆ ಸಮಸ್ಯೆಯಾಗಬಹುದು ಎಂಬ ಯೋಚನೆಯೂ ಸಹ ಇದೆ. ಹಾಗಾಗಿ, ಧಾರಾವಾಹಿಗಳಿಗೂ ತೊಂದರೆಯಾಗಬಾರದು, ಸೂಪರ್ ಚಾನೆಲ್ ಗೂ ಸಹಕಾರಿಯಾಗಬೇಕು ಎನ್ನುವುದು ಇದರ ಹಿಂದಿನ ಸತ್ಯವಾಗಿದೆ.