ಅಣ್ಣಾ ಹಜಾರೆ ಬೆಂಬಲಕ್ಕೆ ನಿಂತ ಬಾಲಿವುಡ್

"ಪ್ರಧಾನ ಮಂತ್ರಿ ಕೂಡ ಲೋಕಪಾಲ ವ್ಯಾಪ್ತಿಗೆ ಬರಬೇಕು. ಭ್ರಷ್ಟಾಚಾರದ ವಿರುದ್ಧ ಈಗಾಗಲೇ ಕಾರ್ಯನಿತವಾಗಿರುವ CBI, ಲೋಕಪಾಲ ಸಂಸ್ಥೆಯ ಜೊತೆ ಕೈಜೋಡಿಸುವುದರ ಜೊತೆಗೆ ಕೆಳವರ್ಗದ ಸರ್ಕಾರಿ ಅಧಿಕಾರಿಗಳೂ ಕೂಡ ಇದರ ವ್ಯಾಪ್ತಿಗೆ ಒಳಪಡಬೇಕು" ಎಂದು ಹೇಳಿಕೆ ನೀಡಿದ್ದಾರೆ. ಲೋಕಪಾಲ ಸಂಸ್ಥೆ ಎಂಪಿಗಳ ವಿರುದ್ಧ ಕೂಡ ತನಿಖೆ ನಡೆಸಲು ಶಕ್ತವಾಗಿರಬೇಕು ಎಂದ ಅವರು ಈ ವಿಷಯದಲ್ಲಿ ಅಣ್ಣಾ ಹಜಾರೆಯ ಬೆಂಬಲಿಗರು ಹೇಗೆ ಮುಂದುವರಿಯಬೇಕೆಂಬ ಬಗ್ಗೆ ಕಿವಿಮಾತು ಕೂಡ ಹೇಳಿದ್ದಾರೆ.
ಬೃಹತ್ ಪ್ರಮಾಣದ ಈ ಜನಬೆಂಬಲ ಹಾಗೂ ಬಾಲಿವುಡ್ ಬೆಂಬಲ ಪ್ರವಾಹದಲ್ಲಿ ನಟ ಸಲ್ಮಾನ್ ಖಾನ್ ಕೂಡ ಸೇರಿಕೊಳ್ಳವ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ ಎನಿಸಿದೆ. ಆದರೆ ಹೊಸ ಸಿನಿಮಾ ಬಿಡುಗಡೆಯಲ್ಲಿ ಬ್ಯುಸಿ ಆಗಿರುವ ಸಲ್ಮಾನ್ ಖಾನ್ ಬೆಂಬಲ ಸಿಗುವುದು ಖಾತ್ರಿಯಲ್ಲ ಎಂಬುದು ಬಹಳಷ್ಟು ಜನರ ಅನಿಸಿಕೆ.
ಸಾಕಷ್ಟು ಬಾಲಿವುಡ್ ಸೆಲಿಬ್ರಿಟಿಗಳ ಬೆಂಬಲದ ಜೊತೆ ಅಂತರಾಷ್ಟ್ರೀಯ ವ್ರೆಸ್ಟಲರ್ ಮತ್ತು ನಟ ಖಾಲಿ ಕೂಡ ಅಣ್ಣಾ ಹಜಾರೆ ತಂಡಕ್ಕೆ ಬೆಂಬಲ ಸೂಚಿಸಿರುವುದು ಮಿಂಚಿನ ಸಂಚಾರಕ್ಕೆ ಕಾರಣವಾಗಿದೆ.


Click it and Unblock the Notifications











