Don't Miss!
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿನಿಮಾ ಪ್ರಚಾರಕ್ಕೆ ಅಭಿಮಾನಿಗಳ ನಡುವೆ ಜಗಳ ಹಚ್ಚಿದ ನಟ-ನಿರ್ದೇಶಕ
ಸಿನಿಮಾ ಪ್ರಚಾರಕ್ಕಾಗಿ ಏನೆನೆಲ್ಲಾ ಮಾಡುತ್ತಾರೆ ನಟ-ನಟಿಯರ, ನಿರ್ದೇಶಕ-ನಿರ್ಮಾಪಕರು. ಸಿನಿಮಾಕ್ಕೆ ಪ್ರಚಾರ ಸಿಗಲೆಂದು ಬೇಕೆಂದೇ ವಿವಾದ ಎಬ್ಬಿಸುವುದು, ಸುಳ್ಳು ಮಾಹಿತಿ ಹರಡುವುದು, ಹಣ ಕೊಟ್ಟು ಲೈಕ್ಸ್ ಹೆಚ್ಚಿಸಿಕೊಳ್ಳುವುದು ಇನ್ನೂ ಹಲವು ಸ್ಟಂಟ್ಸ್ ಮಾಡುತ್ತಾರೆ.
ಬಾಲಿವುಡ್ನಲ್ಲಿ ಬಹುಕಾಲದಿಂದ ಇರುವ ನಟ-ನಿರ್ದೇಶಕರೆ ಈ ರೀತಿ ಅಡ್ಡದಾರಿಗಳು ತುಳಿದಾಗ ಬೇಸರ ಎನಿಸುತ್ತದೆ. ದುರಾದೃಷ್ಟವಶಾತ್ ಹೀಗೆಯೇ ಆಗಿದೆ.
ಹಿರಿಯ ನಟ ಹಾಗೂ ನಿರ್ದೇಶಕರುಗಳು ತಮ್ಮ ಸಿನಿಮಾದ ಪ್ರಚಾರಕ್ಕಾ ಇಬ್ಬರ ಅಭಿಮಾನಿಗಳ ನಡುವೆ ಜಗಳ ತಂದಿಟ್ಟಿದ್ದಾರೆ.
ಅನುರಾಗ್ ಕಶ್ಯಪ್ ಹಾಗೂ ನಟ ಅನಿಲ್ ಕಪೂರ್ ನಿನ್ನೆ ಇದ್ದಕ್ಕಿದ್ದಂತೆ ಟ್ವಿಟ್ಟರ್ನಲ್ಲಿ ಜಗಳವಾಡಿಕೊಂಡಿದ್ದಾರೆ. ಇಬ್ಬರು ಪರಸ್ಪರರನ್ನು ವ್ಯಂಗ್ಯಮಾಡಿಕೊಂಡು, ಬೈದಾಡಿಕೊಂಡಿದ್ದಾರೆ. ಇದರಿಂದ ಈ ಇಬ್ಬರ ಅಭಿಮಾನಿಗಳು ಸಹ ಟ್ವಿಟ್ಟರ್ನಲ್ಲಿ ಜಗಳ ಪ್ರಾರಂಭಿಸಿದ್ದಾರೆ.
ಆದರೆ ಕೊನೆಗೆ ನೋಡಿದರೆ, ಈ ಇಬ್ಬರ ಜೋಡಿಯಲ್ಲಿ ಸಿದ್ಧವಾಗುತ್ತಿರುವ 'ಎಕೆ v/s ಎಕೆ' ಸಿನಿಮಾದ ಪ್ರಚಾರಕ್ಕಾಗಿ ಈ ನಟರಿಬ್ಬರೂ ಟ್ವಿಟ್ಟರ್ನಲ್ಲಿ ಕಿತ್ತಾಡಿದ್ದಾರಂತೆ. ಈ ಇಬ್ಬರ ಕಿತ್ತಾಟ ನಿಜವೆಂದುಕೊಂಡು ಹಲವಾರು ಮಂದಿ ತಮ್ಮ ಮೆಚ್ಚಿನ ವ್ಯಕ್ತಿಯ ಪರವಾಗಿ ಟ್ವೀಟ್ ಮಾಡುತ್ತಿದ್ದರು. ಕೊನೆಗೆ ಎಲ್ಲರೂ ಫೂಲ್ ಆದರು.
Recommended Video
'ನಿಮಗೆ ಆಸ್ಕರ್ ಸಿಗಲಿಲ್ಲವಲ್ಲ?' ಎಂದು ಅನುರಾಗ್ ಕಶ್ಯಪ್ ಅನಿಲ್ ಕಪೂರ್ ಅನ್ನು ಕಾಲೆಳೆದರೆ, 'ನೀನು ಆಸ್ಕರ್ ಸನಿಹಕ್ಕೆ ಬಂದಾಗ, ಸ್ಲಂ ಡಾಗ್ ಮಿಲೇನಿಯರ್ ಸಿನಿಮಾಕ್ಕೆ ಆಸ್ಕರ್ ಬಂದಿದ್ದನ್ನು ಟಿವಿಯಲ್ಲಿ ನೋಡಿದಾಗ ಮಾತ್ರ. ನಿನ್ನಿಂದ ಆಸ್ಕರ್ ಗೆಲ್ಲಲು ಸಾಧ್ಯವೇ ಇಲ್ಲ ಎಂದಿದ್ದಾರೆ.