ರಸ್ತೆ ಅಪಘಾತದಲ್ಲಿ ಮೊನ್ನೆ ಸಿರೀಯಲ್ ನಟಿ, ನಿನ್ನೆ ಬಾಲ ನಟ ಸಾವು
ಇತ್ತೀಚಿಗಷ್ಟೆ ಕನ್ನಡ ಧಾರಾವಾಹಿ ನಟಿ ಶೋಭ ಅವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಚಿತ್ರದುರ್ಗದ ಹೊರವಲಯ ರಾಷ್ಟ್ರೀಯ ಹೆದ್ದಾರಿ-4ರ ಕುಂಚಿಗನಾಳು ಗ್ರಾಮದಲ್ಲಿ ಸಂಭವಿಸಿದ ಈ ಅಪಘಾತದಲ್ಲಿ ಶೋಭ ಸೇರಿದಂತೆ ಐವರು ಮೃತಪಟ್ಟಿದ್ದರು.
ಈ ಘಟನೆ ನಡೆದ ಒಂದು ದಿನದ ಅಂತರದಲ್ಲಿ ಮತ್ತೊಂದು ರಸ್ತೆ ಅಪಘಾತ ನಡೆದಿದ್ದು, ಹಿಂದಿ ಚಿತ್ರರಂಗದ ಬಾಲನಟ ಶಿವಲೇಖ್ ಸಿಂಗ್ ನಿಧನ ಹೊಂದಿದ್ದಾರೆ.
ಗುರುವಾರ ಛತ್ತೀಸ್ಘಡ್ ದಲ್ಲಿ ನಡೆದ ರಸ್ತೆ ಅಪಘಾತದಲ್ಲಿ 14 ವರ್ಷದ ಬಾಲನಟ ಶಿವಲೇಖ್ ಸಿಂಗ್ ದುರ್ಮಣ ಹೊಂದಿದ್ದಾರೆ. ರಾಯ್ಪುರದಿಂದ ಬಿಲಾಸ್ಪುರಕ್ಕೆ ಪ್ರಯಾಣ ಮಾಡುತ್ತಿದ್ದ ವೇಳೆ ತಾವು ಚಲಿಸುತ್ತಿದ್ದ ಕಾರಿಗೆ ಎದುರುಗಡೆಯಿಂದ ಬಂದ ಟ್ರಕ್ ಡಿಕ್ಕಿ ಹೊಡೆದಿದೆ.

ಈ ಘಟನೆಯಲ್ಲಿ ಬಾಲನಟ ಮೃತಪಟ್ಟಿದ್ದರೆ, ಆತನ ತಾಯಿ ಮತ್ತು ತಂದೆ ಸೇರಿದಂತೆ ಮೂವರಿಗೆ ಗಂಭೀರ ಗಾಯವಾಗಿದೆ. ಸದ್ಯ ಶಿವಲೇಖ್ ಸಿಂಗ್ ಅವರ ತಾಯಿ ಸ್ಥಿತಿ ಬಹಳ ಗಂಭೀರವಾಗಿದೆ ಎನ್ನಲಾಗಿದೆ.
ಶಿವಲೇಖ್ ತಂದೆ-ತಾಯಿ ಬಹಳ ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದಾರೆ. ಸಂಕಟಮೋಚಕ ಹನುಮಾನ್, ಬಾಲ್ ವೀರ್, ಸಸುರಾಲ್ ಸಿಮರ್ ಕಾ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಕೆಲವು ರಿಯಾಲಟಿ ಶೋಗಳಲ್ಲೂ ಈ ಬಾಲನಟ ಅಭಿನಯಿಸಿದ್ದರು.


Click it and Unblock the Notifications











