Don't Miss!
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- News ಬೆಂಗಳೂರಿನಲ್ಲಿ ಮೋದಿ ಮತಬೇಟೆ; ರಾಜ್ಯಕ್ಕೆ ಪ್ರಧಾನಿ ಮೋದಿಯ ಕೊಡುಗೆ ಏನಿದೆ?: ಡಾ.ಜಿ ಪರಮೇಶ್ವರ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊಹ್ಲಿ-ಅನುಷ್ಕಾ ಸಂಬಂಧದಲ್ಲಿ ಹುಳಿ ಹಿಂಡಿದ ರಾಖಿ
ಈ ರೀತಿಯ ಟೈಮ್ ಬಾಂಬ್ ಗಳನ್ನು ಸಿಡಿಸುವುದರಲ್ಲಿ ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಸಖತ್ ಎಕ್ಸ್ ಪರ್ಟ್. ಇದೀಗ ಅವರು ಸಿಡಿಸಿರುವ ಬಾಂಬ್ ಇಬ್ಬರು ಪ್ರೇಮಿಗಳಿಗೆ ಮುಳ್ಳಾಗಿದೆ. ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪ್ರೇಮ ಬಾಂಧವ್ಯಕ್ಕೆ ರಾಖಿ ಹುಳಿ ಹಿಂಡಿವ ಪ್ರಯತ್ನ ಮಾಡಿದ್ದಾರೆ.
ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ತಾನು ಮನಸಾರೆ ಪ್ರೀತಿಸುತ್ತಿದ್ದೇನೆ ಎಂದು ಹೇಳುವ ಮೂಲಕ ಬಾಲಿವುಡ್ ನಲ್ಲಿ ಹೊಸ ಬಾಂಬ್ ಸಿಡಿಸಿದಿದ್ದಾರೆ ರಾಖಿ. ಇದು ಅನುಷ್ಕಾ ಶರ್ಮಾ ಅವರ ಮೇಲೂ ಗಂಭೀರ ಪರಿಣಾಮಕ್ಕೆ ಎಡೆಮಾಡಿಕೊಡುವ ಸಾಧ್ಯತೆಗಳಿವೆ. [ಅನುಷ್ಕಾ ಶರ್ಮಾ ಹಾಟ್ ಬಿಕಿನಿ 'ವಿರಾಟ್' ರೂಪ]
ಇತ್ತೀಚೆಗೆ ಮಾಧ್ಯಮಗಳ ಜೊತೆ ಮಾತನಾಡಿದ ರಾಖಿ, "ಅನುಷ್ಕಾ ಅವರು ಎಂದೂ ಕೊಹ್ಲಿಯನ್ನು ಇಷ್ಟಪಡ್ತೀನಿ ಎಂದು ಬಹಿರಂಗವಾಗಿ ಹೇಳಿಲ್ಲ. ಆದರೆ ತಾನಂತೂ ಕೊಹ್ಲಿಯನ್ನು ತುಂಬಾನೇ ಇಷ್ಟಪಡ್ತೀನಿ. ಅನುಷ್ಕಾ ಅವರು ಇದುವರೆಗೂ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿಲ್ಲ. ಹಾಗಾಗಿ ತಾನು ಮನಸಾರೆ ಕೊಹ್ಲಿಯನ್ನು ಪ್ರೀತಿಸುತ್ತಿದ್ದೇನೆ" ಎಂದಿದ್ದಾರೆ.
ಈ ಮಾತನ್ನು ರಾಖಿ ಹೇಳಿರುವುದು ಮುಂಬೈನ ಸ್ಪಾ ಒಂದರ ಉದ್ಘಾಟನೆ ವೇಳೆ ಎಂಬುದು ವಿಶೇಷ. ಆದರೆ ರಾಖಿ ಸಾವಂತ್ ಅವರ ಮಾತಿಗೆ ಅತ್ತ ಅನುಷ್ಕಾ ಆಗಲಿ, ಇತ್ತ ವಿರಾಟ್ ಕೊಹ್ಲಿ ಆಗಲಿ ಕ್ಯಾರೆ ಎಂದಿಲ್ಲ.
ಸಾಕಷ್ಟು ಹಿಂದೆಯೇ ವಿರಾಟ್ ಕೊಹ್ಲಿ ತಮ್ಮ ಮತ್ತು ಅನುಷ್ಕಾ ನಡುವಿನ ಸಂಬಂಧದ ಬಗ್ಗೆ ಹೇಳಿಕೊಂಡಿದ್ದರು. ತನ್ನ ಹಾಗೂ ಅನುಷ್ಕಾ ನಡುವಿನ ಸಂಬಂಧ ಎಲ್ಲರಿಗೂ ಗೊತ್ತಾಗಿದೆ. ಈ ಬಗ್ಗೆ ಕುತೂಹಲ ತೋರಿಸುವ ಅವಶ್ಯಕತೆ ಇಲ್ಲ. ನಾವಿಬ್ಬರೂ ಜೊತೆಯಾಗಿ ಸಿಕ್ಕಿದರೆ ಈಗಲೂ ನಿಮ್ಮಬ್ಬರ ಸಂಬಂಧದ ಬಗ್ಗೆ ಕೇಳುತ್ತಿದ್ದಾರೆ. ಇವರೆಲ್ಲಾ ಒಂಚೂರು ಕಾಮನ್ ಸೆನ್ಸ್ ಬಳಸಿದರೆ ಉತ್ತಮ. ಗೊತ್ತಿದ್ದೂ ಮತ್ತೆ ಮತ್ತೆ ಅದೇ ಪ್ರಶ್ನೆಯನ್ನು ಕೇಳುತ್ತಿರುವುದೇಕೆ? ಎಂದಿದ್ದರು.