Don't Miss!
- Sports KKR vs RR IPL 2024: ಜೋಸ್ ದಿ ಬಾಸ್ ಬಟ್ಲರ್ ಆರ್ಭಟಕ್ಕೆ ಕೆಕೆಆರ್ ಹೈರಾಣ; ರಾಯಲ್ ಆಗಿ ಗೆದ್ದ ರಾಜಸ್ಥಾನ
- Lifestyle ಬೇಸಿಗೆಯಲ್ಲಿ ಇಡ್ಲಿ, ದೋಸೆಯ ಹಿಟ್ಟು ಹುಳಿ ಬಂದರೆ ಹುಳಿ ಕಡಿಮೆಯಾಗಲು ಏನು ಮಾಡಬೇಕು?
- News Dwarakish: ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ದ್ವಾರಕೀಶ್ ಪಡೆದಿದ್ದ ಮತಗಳೆಷ್ಟು?
- Automobiles ಪೆಟ್ರೋಲ್ ಎಂಜಿನ್ಗಳಲ್ಲಿ ಮಾತ್ರ ಬರಲಿದೆ ರೆನಾಲ್ಟ್ನ ಬ್ರಹ್ಮಾಸ್ತ್ರ ಡಸ್ಟರ್
- Finance ಇಸ್ರೇಲ್-ಇರಾನ್ ಯುದ್ಧದ ಪರಿಣಾಮ ಷೇರು ಪೇಟೆಯಲ್ಲಿ ಭಾರಿ ನಷ್ಟ
- Technology YouTube: ಯೂಟ್ಯೂಬ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್! ಆಡ್ ಬ್ಲಾಕರ್ ವಿರುದ್ಧ ಸಮರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರೀಕರಣ ವೇಳೆ ರಣವೀರ್ ತಲೆಗೆ ಗಾಯ, ನೋವಿನಲ್ಲೂ ಅಭಿನಯಿಸಿದ ನಟ
'ಪದ್ಮಾವತಿ' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ವೇಳೆ ಬಾಲಿವುಡ್ ನಟ ರಣವೀರ್ ಸಿಂಗ್ ತಲೆಗೆ ಪೆಟ್ಟಾಗಿದೆ. ಆದರೂ ಸಹ ನಟ ತಲೆಗೆ ಗಾಯವಾದ ನೋವಿನಲ್ಲಿಯೂ ಚಿತ್ರೀಕರಣದಲ್ಲಿ ಭಾಗವಹಿಸಿ, ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ.[ರಣವೀರ್ ಮತ್ತು ದೀಪಿಕಾ ದೂರವಾಗಲು ಬನ್ಸಾಲಿ'ಯೇ ಕಾರಣ..]
ನಿನ್ನೆ (ಮೇ 26) ರಾತ್ರಿ ಮುಂಬೈನಲ್ಲಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತಿ' ಸಿನಿಮಾ ಶೂಟಿಂಗ್ ವೇಳೆ ರಣವೀರ್ ಸಿಂಗ್ ತಲೆಗೆ ಗಾಯವಾದ ಘಟನೆ ನಡೆದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.
ಸ್ವತಃ ತಲೆಗೆ ಪೆಟ್ಟು ಮಾಡಿಕೊಂಡ ರಣವೀರ್ ಸಿಂಗ್
ರಣವೀರ್ ಸಿಂಗ್ 'ಪದ್ಮಾವತಿ' ಚಿತ್ರದ ನಿರ್ದಿಷ್ಟ ದೃಶ್ಯದ ಶೂಟಿಂಗ್ ವೇಳೆ ಸ್ವತಃ ತಾವೇ ತಮ್ಮ ತಲೆಗೆ ಪೆಟ್ಟುಮಾಡಿಕೊಂಡಿದ್ದಾರೆ. ಆದರೆ ಅವರು ಅಭಿನಯದಲ್ಲಿ ಮುಳುಗಿಹೋಗಿದ್ದ ಕಾರಣ ಮೊದಲು ಅವರ ಗಮನಕ್ಕೆ ಬಂದಿರಲಿಲ್ಲ.
ಗಾಬರಿಗೊಂಡ ಚಿತ್ರತಂಡ
"ಸ್ವತಃ ರಣವೀರ್ ಸಿಂಗ್ ಗೆ ತಲೆಗೆ ಪೆಟ್ಟಾಗಿರುವುದು ತಿಳಿದಿರಲಿಲ್ಲ. ಆದರೆ ದೃಶ್ಯವೊಂದಕ್ಕೆ ಕಟ್ ಹೇಳಿದ ಸಂದರ್ಭದಲ್ಲಿ ರಣವೀರ್ ತಲೆಯಿಂದ ರಕ್ತ ಸುರಿಯಲು ಆರಂಭವಾದ ನಂತರ ಅವರಿಗೆ ತಿಳಿಯಿತು. ಇದನ್ನು ನೋಡಿದ ಚಿತ್ರತಂಡದವರು ಗಾಬರಿಗೊಂಡು ತಕ್ಷಣ ಚಿತ್ರ ಸೆಟ್ ನಲ್ಲೇ ಚಿಕಿತ್ಸೆ ನೀಡಿದರು' ಎಂದು ಮೂಲಗಳಿಂದ ತಿಳಿದಿದೆ.
ಲೀಲಾವತಿ ಆಸ್ಪತ್ರೆಯಲ್ಲಿ ರಣವೀರ್ ಗೆ ಚಿಕಿತ್ಸೆ
ರಣವೀರ್ ಸಿಂಗ್ ಗೆ ಚಿತ್ರ ಸೆಟ್ ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಹತ್ತಿರದ ಲೀಲಾವತಿ ಆಸ್ತತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ತಲೆಗೆ ಪೆಟ್ಟಾದರು ಶೂಟಿಂಗ್ ಮುಗಿಸಿದ ರಣವೀರ್
ತಲೆಗೆ ಪೆಟ್ಟಾದರೂ ರಣವೀರ್ ಸಿಂಗ್ ಚಿಕಿತ್ಸೆ ಪಡೆದ ನಂತರ ಶೀಘ್ರವಾಗಿ ಪುನಃ ಚಿತ್ರಸೆಟ್ ಗೆ ಭೇಟಿ ನೀಡಿ ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ ಪಾಲ್ಗೊಂಡರಂತೆ. ಅಲ್ಲದೇ ಅಂದಿನ ಕಂಪ್ಲೀಟ್ ಕೆಲಸ ಮುಗಿಸಿಕೊಟ್ಟರು. ಅವರ ತಲೆಯ ಪೆಟ್ಟಾದ ಭಾಗಕ್ಕೆ ಹೊಲಿಕೆ ಹಾಕಿಸುವ ಅಗತ್ಯವಿದೆ ಎಂದು ಚಿತ್ರತಂಡ ಮಾಧ್ಯಮಗಳಿಗೆ ಮಾಹಿತಿ ನೀಡಿದೆ.
ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣವೀರ್
ರಣವೀರ್ ಸಿಂಗ್ ರವರು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತಿ' ಚಿತ್ರದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ರಾಣಿ ಪದ್ಮಾವತಿಯಾಗಿ ನಟಿಸಿದ್ದಾರೆ.