Don't Miss!
- News
ಆರ್ಥಿಕ ಸಂಕಷ್ಟದ ನಡುವೆಯೇ ಪಾಕಿಸ್ತಾನದಲ್ಲಿ ಮತ್ತೊಂದು ದುರಂತ: ಮಸೀದಿಯಲ್ಲಿ ಆತ್ಮಹುತಿ ದಾಳಿ- 46 ಸಾವು, 150 ಮಂದಿಗೆ ಗಾಯ
- Sports
IND W vs WI W: ಭಾರತದ ಉತ್ತಮ ಆಲ್ರೌಂಡ್ ಪ್ರದರ್ಶನ: ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ
- Lifestyle
ಜನವರಿ 30ಕ್ಕೆ ಶನಿ ಅಸ್ತ: 35 ದಿನದವರೆಗೆ ಈ 6 ರಾಶಿಯವರು ಹೆಚ್ಚು ಜಾಗ್ರತೆವಹಿಸಬೇಕು
- Finance
ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
- Technology
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಗಂಡನ ಜತೆ ವಾಗ್ವಾದ; ಗುಟ್ಟು ಬಿಚ್ಚಿಟ್ಟ ಕಿರಣ್ ರಾವ್
ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಜೊತೆ ನಡೆದ ಜಗಳದ ಸಂಗತಿಯನ್ನು ಪತ್ನಿ ಕಿರಣ್ ರಾವ್ ಕೊನೆಗೂ ಬಾಯ್ಬಿಟಿದ್ದಾರೆ. ಗಂಡ-ಹೆಂಡತಿ ಎಂದ ಮೇಲೆ ಜಗಳ ಇದ್ದದ್ದೇ ಎಂಬುದು ನಿನ್ನ ಅಭಿಪ್ರಾಯ ಇರಬಹುದು. ಇಲ್ಲ, ಜಗಳವಾಡಲೆಂದೇ ಮದುವೆಯಾಗುವವರೂ ಇರಬಹುದು. ಆದರೆ, ಕಿರಣ್ ರಾವ್ ಹೇಳಿದ್ದು ಅದಲ್ಲ, ಬೇರೆ ವಿಷಯಕ್ಕೆ ಸಂಬಂಧಿಸಿದ್ದು.
12ನೇ ಓಸಿಯನ್ಸ್ ಸಿನಿಫ್ಯಾನ್ ಫಿಲಂ ಫೆಸ್ಟಿವಲ್ಸ್ ನಲ್ಲಿ ಭಾಗವಹಿಸಿದ್ದ ಕಿರಣ್ ರಾವ್, ತಮಗೆ ಆರ್ಟ್ ಫಿಲಂ ಬಗ್ಗೆ ಇರುವ ಭಾರಿ ಆಸಕ್ತಿ ಹಾಗೂ ಅದಕ್ಕೆ ಅಮೀರ್ ಖಾನ್ ಅವರಿಂದ ಬಂದ ವಿರೋಧ, ಎರಡನ್ನೂ ಹೇಳಿಕೊಂಡಿದ್ದಾರೆ, ಕಮರ್ಷಿಯಲ್ ಸಿನಿಮಾ ಬಗ್ಗೆ ಆಸಕ್ತಿಯಿರದ ತಾವು, ತಮ್ಮ ಮೊದಲ ನಿರ್ದೇಶನದ 'ಧೋಬಿ ಘಾಟ್' ಕಲಾ ಪ್ರಕಾರದ ಸಿನಿಮಾಕ್ಕೆ ಅಮೀರ್ ಅವರಿಂದ ವ್ಯಕ್ತವಾದ ವಿರೋಧಗಳ ನಡುವೆಯೂ ಯಶಸ್ವಿಯಾದ ತಮ್ಮ ಕಥೆ ಹೇಳಿಕೊಂಡಿದ್ದಾರೆ.
ಈ ವಿಷಯವಾಗಿ ನಮ್ಮಿಬ್ಬರಲ್ಲಿ ಅತಿಯಾದ ಚರ್ಚೆಗಳಾದವು. ಅವು ಅನಗತ್ಯ ಹಂತಕ್ಕೆ ತಲುಪುತ್ತಿದ್ದಂತೆ ಎಚ್ಚೆತ್ತುಕೊಂಡ ನಾನು, ಈ ಬಗ್ಗೆ ಮಾತನಾಡುವುದನ್ನೇ ನಿಲ್ಲಿಸಿಬಿಟ್ಟೆ. ನಂತರ ವಿಷಯ ತಿಳಿಯಾಗುತ್ತಾ ಬಂತು. ಸಮಯ ನೋಡಿ ಈ ಚಿತ್ರದಲ್ಲಿ ಅವರಿಗೊಂದು ಪಾತ್ರ ನೀಡಿದೆ. ಕಲಾವಿದರಿಗೆ ಪಾತ್ರ ನೀಡಿದಾಗ ವಿರೋಧ ನಿಂತುಹೋಯ್ತು" ಎಂದು ಹೇಳಿ ತಮ್ಮ ನಡುವಿನ ಮನಸ್ತಾಪ ಹಾಗೂ ಅದಕ್ಕೆ ಜಾಣತನದಿಂದ ತಾವು ತೆರೆ ಎಳೆದ ಬಗ್ಗೆ ಹೇಳಿಕೊಂಡಿದ್ದಾರೆ.
ಆದರೆ ಈಗಲೂ ಕಲಾ ಪ್ರಕಾರದ ಸಿನಿಮಾ ಮಾಡುವುದರಲ್ಲಿರುವ ರಿಸ್ಕ್ ಬಗ್ಗೆ ಕಿರಣ್ ರಾವ್ ಅವರಿಗೆ ಗೊತ್ತಿದೆ. "ಈ ಚಿತ್ರಗಳಿಗೆ ಬಂಡವಾಳ ತೊಡಗಿಸಲು ಯಾರೂ ಮುಂದೆ ಬರುವುದಿಲ್ಲ. ಅದನ್ನು ಬಿಡುಗಡೆ ಮಾಡುವುದೇ ದೊಡ್ಡ ಸಾಹಸ. ಮಾಡಿದರೂ ಕೂಡ ಅದರಿಂದ ಲಾಭ ಬಂದೇ ಬರುತ್ತದೆ ಎಂಬ ಖಾತ್ರಿಯಲ್ಲ. ಆದರೆ ನಮ್ಮ ಮನಸ್ಸಿಗೆ ಅದು ಕೊಡುವ ಸಂತೋಷ ಅಪಾರ" ಎಂದಿದ್ದಾರೆ.
ಧೋಬಿ ಘಾಟ್ ಸಿನಿಮಾ ತಮ್ಮಿಷ್ಟದ ಸಿನಿಮಾ ಎಂದಿರುವ ಅಮೀರ್ ಪತ್ನಿ ಕಿರಣ್ ರಾವ್, ಈಗಲೂ ತಮಗೆ ಅವಕಾಶ ಸಿಕ್ಕರೆ ತಾವು ಆ ರೀತಿಯ ಚಿತ್ರವನ್ನೇ ಮಾಡಲು ಇಷ್ಟಪಡುವುದಾಗಿ ಹೇಳಿಕೊಂಡಿದ್ದಾರೆ. ಆ ಬಗ್ಗೆ ತಾವು ನಿರಂತರವಾಗಿ ಯೋಚಿಸುತ್ತಿದ್ದು ಧೋಬಿ ಘಾಟ್ ಚಿತ್ರ ಮಾಡುವ ವೇಳೆ ತಮ್ಮಿಬ್ಬರಲ್ಲಿ ನಡೆದ ವಾಗ್ವಾದವಾಗಲೀ ಅಥವಾ ಅದರಿಂದ ತಾವು ಕಲಿತ ಪಾಠವಾಗಲೀ ಎಂದೂ ಮರೆಯುವಂತದ್ದಲ್ಲ" ಎಂದಿದ್ದಾರೆ. (ಏಜೆನ್ಸೀಸ್)