ರಾಷ್ಟ್ರಪ್ರಶಸ್ತಿ ರೇಸಿನಲ್ಲಿ ಜಾನ್ 'ಮದ್ರಾಸ್ ಕೆಫೆ'
ಜಾನ್ ಬಾಲಿವುಡ್ ನಟ ಜಾನ್ ಅಹ್ರಾಂ ಹಾಗೂ ನರ್ಗೀಸ್ ಫಕ್ರಿ ಅಭಿನಯದ 'ಮದ್ರಾಸ್ ಕೆಫೆ' ಚಿತ್ರ ರಾಷ್ಟ್ರಪ್ರಶಸ್ತಿಗೆ ನಾಮಾಂಕಿತಗೊಂಡಿದೆ.ಚಿತ್ರದಲ್ಲಿ ತಮಿಳರನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿದ್ದ ತಮಿಳು ಸಂಘಟನೆಗಳು, ಚಿತ್ರ ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದು ಒಂದು ಕಡೆಯಾದರೆ, ಚಿತ್ರದ ಪ್ರಿವ್ಯೂ ನೋಡಿದ ಬಾಲಿವುಡ್ ಮಂದಿ ಬಹುಪರಾಕ್ ಎಂದಿದ್ದರು. ಪ್ರೇಕ್ಷಕರು ಹಾಗೂ ವಿಮರ್ಶಕರ ಮೆಚ್ಚುಗೆ ಗಳಿಸಿದ ಚಿತ್ರ ಈಗ ರಾಷ್ಟ್ರಪ್ರಶಸ್ತಿ ರೇಸಿನಲ್ಲಿದೆ.
ಶೂಜಿತ್ ಸರ್ಕಾರ್ ಅವರ ಮದ್ರಾಸ್ ಕೆಫೆ ಚಿತ್ರದಲ್ಲಿ ಎಲ್ಲವೂ ಇದೆ ನೋವು, ನಲಿವು, ಹತಾಶೆ, ಸಂಚು, ದ್ರೋಹ, ದೇಶ, ಭಾಷೆ, ಗಡಿ, ಹೀರೋಯಿಸಂ ಜತೆಗೆ ಚಿತ್ರಕ್ಕೆ ಕಥೆ, ನಟನೆ, ನಿರ್ದೇಶನ ಪೂರಕವಾಗಿದೆ. ಶ್ರೀಲಂಕಾದ ನಾಗರಿಕ ಸಮರ, ರಾಜಕೀಯ ಸ್ಥಿತ್ಯಂತರ, 80 ಹಾಗೂ 90 ರ ದಶಕದಲ್ಲಿ ಶ್ರೀಲಂಕಾ ತಮಿಳರ ಅಮಾನವೀಯ ಹತ್ಯೆ ಎಲ್ಲವೂ ಸೂಕ್ತವಾಗಿ ಚಿತ್ರಿತವಾಗಿದೆ. [ವಿವಾದಗಳ ಬಗ್ಗೆ ಓದಿ]

ಬಾಲಿವುಡ್ ಸಿದ್ದಸೂತ್ರಗಳನ್ನು ಧಿಕ್ಕರಿಸಿ ನಿಲ್ಲುವ ಇಂಥ ಚಿತ್ರಗಳಿಗೆ ಪ್ರೋತ್ಸಾಹ ನೀಡಲೇಬೇಕು. ರಾಜಕೀಯ, ಯುದ್ಧ, ಮಾನವೀಯತೆ, ಯುದ್ಧ, ನೋವು ಹಿಂಸೆ ಎಲ್ಲವೂ ಸಹ್ಯವಾಗಿ ಒಂದು ಪ್ಯಾಕೇಜ್ ನಲ್ಲಿದೆ ಉತ್ತಮ ನಟನೆ, ಚಿತ್ರಕಥೆ, ಬೋರ್ ಹೊಡೆಸದ ಡೈಲಾಗ್ಸ್ ಗಾಗಿ ಚಿತ್ರವನ್ನು ನೋಡಿ ಎಂದು ಬಾಯಿ ಮಾತಿನ ಪ್ರಚಾರದಿಂದ ಚಿತ್ರ ಏಳಿಗೆ ಕಂಡಿತ್ತು. ಬಾಕ್ಸಾಫೀಸ್ ನಲ್ಲಿ ಹೆಚ್ಚು ಸದ್ದು ಮಾಡದಿದ್ದರೂ, ವಿವಾದಗಳ ಹೊರತಾಗಿ ಚಿತ್ರ ಜನ ಮೆಚ್ಚುಗೆ ಗಳಿಸಿತ್ತು.


Click it and Unblock the Notifications











