twitter
    For Quick Alerts
    ALLOW NOTIFICATIONS  
    For Daily Alerts

    ಇರ್ಫಾನ್ ಖಾನ್, ಶ್ರೀದೇವಿ ಸಾವಿನ ಬಗ್ಗೆ ಕುಹಕವಾಡಿದ ಪಾಕಿಸ್ತಾನಿ ನಿರೂಪಕ

    |

    ಶ್ರೀದೇವಿ ಮತ್ತು ಇರ್ಫಾನ್ ಖಾನ್ ಅವರ ಸಾವಿನ ವಿಚಾರದ ಕುರಿತು ಪಾಕಿಸ್ತಾನದ ಟಿವಿ ನಿರೂಪಕನೊಬ್ಬ ಅವಹೇಳನಾಕಾರಿ ಮಾತುಗಳನ್ನಾಡಿರುವುದು ವಿವಾದಕ್ಕೆ ಕಾರಣವಾಗಿದೆ.

    ಟೆಲಿವಿಷನ್ ನಿರೂಪಕ ಆಮೀರ್ ಲಿಯಾಖತ್ ಹುಸೇನ್ 'ಜೀವೇ ಪಾಕಿಸ್ತಾನ್' ಕಾರ್ಯಕ್ರಮದಲ್ಲಿ ಶ್ರೀದೇವಿ ಮತ್ತು ಇರ್ಫಾನ್ ಇಬ್ಬರೊಂದಿಗೂ ಸಿನಿಮಾದಲ್ಲಿ ನಟಿಸಿರುವ ನಟ ಅದ್ನಾನ್ ಸಿದ್ದಿಕಿ ಜತೆ ಮಾತನಾಡುವಾಗ ಈ ಆಘಾತಕಾರಿ ಹೇಳಿಕೆ ನೀಡಿದ್ದಾರೆ.

    ಕಣ್ಣೀರು ತರಿಸದೇ ಇರದು ಇರ್ಫಾನ್ ಖಾನ್ ಪತ್ನಿ ಬರೆದ ಭಾವುಕ ಪತ್ರಕಣ್ಣೀರು ತರಿಸದೇ ಇರದು ಇರ್ಫಾನ್ ಖಾನ್ ಪತ್ನಿ ಬರೆದ ಭಾವುಕ ಪತ್ರ

    ನೀವು 'ಮಾಮ್' ಚಿತ್ರದಲ್ಲಿ ಕೆಲಸ ಮಾಡಿದಿರಿ ಅದರಲ್ಲಿ ನಟಿಸಿದ್ದ ಶ್ರೀದೇವಿ ಸತ್ತು ಹೋದರು. ನೀವು ಇರ್ಫಾನ್ ಖಾನ್ ಜತೆಗೂ ನಟಿಸಿದಿರಿ. ಅವರೂ ಕೂಡ ಸತ್ತುಹೋದರು. ನಿಮಗೆ 'ಮರ್ದಾನಿ 2' ಮತ್ತು 'ಜಿಸ್ಮ್ 2' ಚಿತ್ರಗಳಿಂದ ಬಂದ ಅವಕಾಶವನ್ನು ತಿರಸ್ಕರಿಸಿದ್ದಿರಿ. ನಿಮ್ಮಿಂದಾಗಿ ಆ ಚಿತ್ರದ ಕಲಾವಿದರು ಬದುಕಿಕೊಂಡರು ಎಂದು ಲಿಯಾಖತ್ ಹುಸೇನ್, ಅದ್ನಾನ್ ಸಿದ್ದಿಕಿಗೆ ಹೇಳಿದ್ದರು. ಮುಂದೆ ಓದಿ...

    ನೆಟ್ಟಿಗರಿಂದ ವಿರೋಧ

    ನೆಟ್ಟಿಗರಿಂದ ವಿರೋಧ

    ಈ ಹೇಳಿಕೆ ನೆಟ್ಟಿಗರಲ್ಲಿ ತೀವ್ರ ಕೋಪ ತರಿಸಿತ್ತು. ಇದು ತೀರಾ ಸಂವೇದನಾರಹಿತ ಹೇಳಿಕೆ. ಸಾವಿನ ಕುರಿತು ಈ ರೀತಿ ಅವಹೇಳನಾಕಾರಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಹುಸೇನ್ ವಿರುದ್ಧ ವಾಗ್ದಾಳಿ ನಡೆಸಲಾಗಿದೆ. ಇದರ ಬಳಿಕ ತಮ್ಮ ಇನ್‌ಸ್ಟಾ ಗ್ರಾಂನಲ್ಲಿ ಹುಸೇನ್ ಕ್ಷಮಾಪಣಾ ಹೇಳಿಕೆ ನೀಡಿದ್ದಾರೆ.

    ಆನ್‌ಲೈನ್‌ನಲ್ಲಿ ವೀಕ್ಷಿಸಬಹುದಾದ ಇರ್ಫಾನ್ ಖಾನ್ ಅಭಿನಯದ ಪ್ರಮುಖ 15 ಚಿತ್ರಗಳುಆನ್‌ಲೈನ್‌ನಲ್ಲಿ ವೀಕ್ಷಿಸಬಹುದಾದ ಇರ್ಫಾನ್ ಖಾನ್ ಅಭಿನಯದ ಪ್ರಮುಖ 15 ಚಿತ್ರಗಳು

    ಹಿಡಿತ ಕಳೆದುಕೊಂಡು ಹೇಳಿದೆ, ಕ್ಷಮಿಸಿ

    ಹಿಡಿತ ಕಳೆದುಕೊಂಡು ಹೇಳಿದೆ, ಕ್ಷಮಿಸಿ

    'ಕೆಲವೊಮ್ಮೆ ನಾವು ಮಾತಿನ ಮೇಲಿನ ಹಿಡಿತ ಕಳೆದುಕೊಳ್ಳುತ್ತೇವೆ. ಆ ಸಮಯದಲ್ಲಿ ಅದು ದೊಡ್ಡ ವಿಷಯ ಎಂದೆನಿಸುವುದಿಲ್ಲ. ಆದರೆ ನಾನು ಅದರ ಬಗ್ಗೆ ಆ ನಂತರ ಯೋಚಿಸಿದೆ. ಅದು ಸೂಕ್ತವಾದ ಹೇಳಿಕೆಯಲ್ಲ ಎಂದು ನನಗೆ ಅರಿವಾಯಿತು. ಅದರಿಂದಾಗಿ ನಾನು ಕ್ಷಮಾಪಣೆ ಕೋರುತ್ತೇನೆ. ಮಾನವೀಯತೆಯನ್ನು ಮನಸಲ್ಲಿಟ್ಟುಕೊಂಡು, ನಾನು ಈ ಮಾತನ್ನು ಹೇಳಬಾರದಿತ್ತು. ನಾನು ತಪ್ಪು ಮಾಡಿದ್ದೇನೆ' ಎಂದು ಲಿಯಾಖತ್ ಹುಸೇನ್ ಹೇಳಿದ್ದಾರೆ.

    ದುರದೃಷ್ಟಕರ ಘಟನೆ

    ದುರದೃಷ್ಟಕರ ಘಟನೆ

    ಅದ್ನಾನ್ ಸಿದ್ದಿಕಿ ಕೂಡ ಹೇಳಿಕೆ ನೀಡಿದ್ದು, 'ನನಗೆ ಈಗ ಹೇಗೆ ಅನಿಸುತ್ತಿದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಆದರೆ ಇದರ ಬಗ್ಗೆ ಬಗೆಹರಿಸಬೇಕಿದೆ. ನನಗೆ ಕಾರ್ಯಕ್ರಮಕ್ಕೆ ನಿನ್ನೆ ಆಹ್ವಾನ ಬಂದಿತ್ತು. ಆಗ ಈ ದುರದೃಷ್ಟಕರ ಘಟನೆ ನಡೆದಿದೆ. ಬಹಳ ಸಂವೇದನಾಕಾರಿ ಸಂಗತಿಯ ಬಗ್ಗೆ ಲಿಯಾಖತ್ ಅವರು ಜೋಕ್ ಮಾಡಿದ್ದರು. ಅವರಿಬ್ಬರೂ ನನಗೆ ಬಹಳ ಆತ್ಮೀಯರಾಗಿದ್ದರು ಮಾತ್ರವಲ್ಲ, ಒಬ್ಬ ಮನುಷ್ಯನಾಗಿ ನನಗೆ ಇದು ಅನೇಕ ಹಂತಗಳಲ್ಲಿ ತಪ್ಪು ಎಂದು ಎನಿಸುತ್ತದೆ' ಎಂದು ಹೇಳಿದ್ದಾರೆ.

    ಅಗಲಿದ ನಟ ಇರ್ಫಾನ್ ಖಾನ್ ಆಡಿದ ಕೊನೆಯ ಮಾತುಗಳಿವುಅಗಲಿದ ನಟ ಇರ್ಫಾನ್ ಖಾನ್ ಆಡಿದ ಕೊನೆಯ ಮಾತುಗಳಿವು

    ಎಲ್ಲರ ಕ್ಷಮೆ ಕೋರುತ್ತೇನೆ

    ಎಲ್ಲರ ಕ್ಷಮೆ ಕೋರುತ್ತೇನೆ

    ಅದ್ನಾನ್ ಅವರು 2007ರಲ್ಲಿ ಇರ್ಫಾನ್ ಖಾನ್ ಜತೆ 'ಎ ಮೈಟೀ ಹಾರ್ಟ್'ನಲ್ಲಿ ಕೆಲಸ ಮಾಡಿದ್ದರು. 'ಮೃತರಾದವರ ಕುರಿತು ಜೋಕ್ ಮಾಡುವುದು ತೀರಾ ಹೀನ ಕೃತ್ಯ. ಇದು ಬಹಳ ಕೆಟ್ಟ ಅಭಿರುಚಿ. ಅಲ್ಲದೆ ಇದು ಅವರನ್ನು ಹಾಗೂ ನನ್ನನ್ನು ಮಾತ್ರವಲ್ಲ, ಇಡೀ ದೇಶಕ್ಕೆ ಕೆಟ್ಟ ಹೆಸರು ತರುತ್ತದೆ. ಹೀಗಾಗಿ ಶ್ರೀದೇವಿ ಮತ್ತು ಇರ್ಫಾನ್ ಖಾನ್ ಅವರ ಕುಟುಂಬಗಳು, ಅವರ ಪ್ರೀತಿ ಪಾತ್ರರು ಹಾಗೂ ಅಭಿಮಾನಿಗಳಿಗೆ ಕ್ಷಮೆಯಾಚಿಸುತ್ತೇನೆ' ಎಂದಿದ್ದಾರೆ.

    ಇದರಿಂದ ನಾನು ಪಾಠ ಕಲಿಕೆ

    ಇದರಿಂದ ನಾನು ಪಾಠ ಕಲಿಕೆ

    'ಆ ಸಂದರ್ಭದಲ್ಲಿ ನೀವು ನನ್ನ ದೇಹಭಾಷೆಯನ್ನು ನೋಡಿರಬಹುದು. ಅವರು ಹೇಳಿದ ಮಾತು ನನಗೆ ಬಹಳ ಕಸಿವಿಸಿ ಉಂಟುಮಾಡಿತು. ಆದರೆ ನಾನು ಅವರ ಮಟ್ಟಕ್ಕೆ ಇಳಿಯಲು ಬಯಸಲಿಲ್ಲ. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಪಶ್ಚಾತ್ತಾಪ ಪಡುತ್ತಿದ್ದೇನೆ. ಇದರಿಂದ ನಾನು ಪಾಠ ಕಲಿತಿದ್ದೇನೆ. ಭವಿಷ್ಯದಲ್ಲಿ ಇಂತಹ ಕೃತ್ಯವನ್ನು ನಾನು ಖಂಡಿತಾ ಸಹಿಸುವುದಿಲ್ಲ ಎಂದು ಭರವಸೆ ನೀಡುತ್ತೇನೆ. ಈ ತುಣಕು ಸಾರ್ವಜನಿಕವಾಗಿ ಬಹಿರಂಗಗೊಳ್ಳುವುದಿಲ್ಲ ಎಂದುಕೊಂಡಿದ್ದೆ. ಆದರೆ ದುರದೃಷ್ಟವಶಾತ್ ಅದು ಪ್ರಸಾರವಾಯಿತು. ಈ ತಪ್ಪಿಗಾಗಿ ಕ್ಷಮೆ ಕೋರುತ್ತೇನೆ' ಎಂದು ಹೇಳಿದ್ದಾರೆ.

    English summary
    Pakistani TV host Aamir Liaquat Hussain has apologized for making insensitive remarks on Irrfan Khan and Sridevi's death.
    Monday, May 4, 2020, 20:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X