Don't Miss!
- News ಷೇರು ಮಾರುಕಟ್ಟೆಯಲ್ಲಿ ಮಹಾ ಕುಸಿತ & ಏರಿಕೆ!
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶ್ರೀನಗರ ಕಿಟ್ಟಿಗೆ ಅಂಬಿ ಅರ್ಧಚಂದ್ರ ಪ್ರಯೋಗ ನಿಜವೆ?
ರೆಬಲ್ ಸ್ಟಾರ್ ಅಂಬರೀಷ್ ಅವರ ಬರ್ತ್ ಡೇ ಪಾರ್ಟಿಯಲ್ಲಿ ನಟ ಶ್ರೀನಗರ ಕಿಟ್ಟಿ ಸಿಕ್ಕಾಪಟ್ಟೆ ಟೈಟಾಗಿದ್ದರಂತೆ. ಕಂಠಪೂರ್ತಿ ಕುಡಿದು ಅನುಚಿತವಾಗಿ ವರ್ತಿಸಿದರು ಎಂಬ ಕಾರಣಕ್ಕೆ ಕಿಟ್ಟಿಗೆ ಅಂಬಿ ಅರ್ಧಚಂದ್ರ ಪ್ರಯೋಗ ಮಾಡಿದರು ಎಂಬ ಸುದ್ದಿ ಇದೆ. ಆದರೆ ಇದನ್ನು ಸಾರಾಸಗಟಾಗಿ ಶ್ರೀನಗರ ಕಿಟ್ಟಿ ತಳ್ಳಿ ಹಾಕಿದ್ದಾರೆ.
"ನಾನು ಬರ್ತ್ ಡೇ ಪಾರ್ಟಿಗೇ ಹೋಗಿಲ್ಲ. ಇನ್ನು ತಳ್ಳುವುದು ಎಲ್ಲಿಂದ ಬಂತು. ಅಂಬಿಯೊಂದಿಗೆ ನನಗೆ ಒಳ್ಳೆಯ ಸಂಬಂಧವಿದೆ. ಅಂಬರೀಷ್ ಆ ರೀತಿ ನಡೆದುಕೊಳ್ಳುವವರು ಅಲ್ಲ. ನನ್ನನ್ನು ಹೊರಗೆ ತಳ್ಳಿದರು ಎಂದು ಕೆಲವು ಮಾಧ್ಯಮಗಳಲ್ಲಿ ಬಂದ ಸುದ್ದಿ ಸತ್ಯಕ್ಕೆ ದೂರವಾದುದು" ಎಂದಿದ್ದಾರೆ ಶ್ರೀನಗರ ಕಿಟ್ಟಿ. [ದಟ್ಸ್ ಕನ್ನಡ ಕಟ್ಟೆಯ ಮೇಲೆ ಕಿಟ್ಟಿ ಸಂದರ್ಶನ]
ಅಂಬಿ ಬರ್ತ್ ಡೇ ಪಾರ್ಟಿಯಲ್ಲಿ ಗುಂಡು ಜಾಸ್ತಿಯಾದ ಕಾರಣ, ಹಿರಿಯ ಕಲಾವಿದರ ಬಗ್ಗೆ ಮನಬಂದಂತೆ ಮಾತನಾಡಿದ್ದಾರೆ. ಎಷ್ಟು ಬಾರಿ ಎಚ್ಚರಿಸಿದರೂ ಕಿಟ್ಟಿ ಮಾತುಗಳಿಗೆ ಲಗಾಮು ಹಾಕಲು ಸಾಧ್ಯವಾಗಿಲ್ಲ. ಬೇಸತ್ತ ಅಂಬಿ ಅವರನ್ನು ಕತ್ತುಹಿಡಿದು ತಳ್ಳಿದರು ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಇದನ್ನು ಅಲ್ಲಗಳೆದಿರುವ ಕಿಟ್ಟಿ, ಅಂಬರೀಷ್ ಬರ್ತ್ ಡೇ ಪಾರ್ಟಿಗೆ ನಾನು ಹೋಗೆ ಇಲ್ಲ. ನಮ್ಮಿಬ್ಬರ ಸಂಬಂಧಕ್ಕೆ ಕಲ್ಲು ಹಾಕುವ ಪ್ರಯತ್ನವನ್ನು ಕೆಲವರು ಮಾಡಿದ್ದಾರೆ. ಅಂಬರೀಷ್ ಅವರು ಅಜಾತಶತ್ರು ಇದ್ದಂತೆ. ನನ್ನನ್ನು ಮನೆಯಿಂದ ಹೊರತಳ್ಳಿದರು ಎಂಬ ಸುದ್ದಿ ಸಂಪೂರ್ಣ ಸುಳ್ಳು ಎಂದಿದ್ದಾರೆ. (ಏಜೆನ್ಸೀಸ್)