ಸ್ವರ್ಣ ಕಮಲ ಪಡೆದ 'ಬ್ಯಾರಿ' ಚಿತ್ರ ಕೃತಿ ಚೌರ್ಯವೇ?

By Rajendra

Movie Byari Controversy
2011ನೇ ಸಾಲಿನಲ್ಲಿ ಸ್ವರ್ಣ ಕಮಲ ಪ್ರಶಸ್ತಿ ಪಡೆದಿರುವ 'ಬ್ಯಾರಿ' ಚಿತ್ರದ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಚಿತ್ರ ಕೃತಿ ಚೌರ್ಯದ ಆರೋಪಕ್ಕೆ ಗುರಿಯಾಗಿದೆ. ಚಿತ್ರದ ನಿರ್ದೇಶಕರು ಈ ಬಗ್ಗೆ ಏನನ್ನೂ ಹೇಳದೆ ಇರುವುದು ಇನ್ನಷ್ಟು ಅನುಮಾನಗಳಿಗೂ ಕಾರಣವಾಗಿದೆ.

ಸಾ.ರಾ.ಅಬೂಬಕ್ಕರ್ ಅವರ 'ಚಂದ್ರಗಿರಿಯ ತೀರದಲ್ಲಿ' ಕಾದಂಬರಿಯ ಕಥಾವಸ್ತುವೇ 'ಬ್ಯಾರಿ' ಚಿತ್ರ ಎನ್ನಲಾಗಿದೆ. ಚಿತ್ರದ ನಿರ್ದೇಶಕರು ಈ ಕೃತಿಯನ್ನು ಬಳಸಿಕೊಂಡೇ ಚಿತ್ರ ಮಾಡಿದ್ದು, ಇದಕ್ಕೆ ಸೂಕ್ತ ಉತ್ತರ ನೀಡಬೇಕೆಂದು ಹಲವರು ಆಗ್ರಹಿಸಿದ್ದಾರೆ. ಆದರೆ ಚಿತ್ರದ ನಿರ್ದೇಶಕ ಸುವೀರನ್ ಮಾತ್ರ ಇದುವರೆಗೂ ಈ ಬಗ್ಗೆ ಸ್ಪಷ್ಟೀಕರಣ ನೀಡಿಲ್ಲ.

ಅಲ್ತಾಫ್ ಹುಸೈನ್ ಚೊಕ್ಕಬೆಟ್ಟು ನಿರ್ಮಿಸಿರುವ ಈ ಚಿತ್ರ ಕರಾವಳಿ ಕರ್ನಾಟಕದ 'ಬ್ಯಾರಿ' ಜನಾಂಗದ ಸಾಮಾಜಿಕ ಸಮಸ್ಯೆಗಳ ಸುತ್ತ ಬೆಳಕು ಚೆಲ್ಲುತ್ತದೆ. ಇರ್ಫಾನ್ ಚೊಕ್ಕಬೆಟ್ಟು ಕಥೆ ಆಧಾರಿತ ಈ ಚಲನಚಿತ್ರದ ನಾಯಕ ನಟನಾಗಿಯೂ ಅಲ್ತಾಫ್ ಅಭಿನಯಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಖ್ಯಾತ ಮಲಯಾಳಂ ನಟ ಮಮ್ಮುಕೊಯಾ, ತಮಿಳು ನಟಿ ಮಲ್ಲಿಕಾ ನಟಿಸಿದ್ದಾರೆ. (ಒನ್‌ಇಂಡಿಯಾ ಕನ್ನಡ)

More from Filmibeat

English summary
A Golden Lotus award winning movie Byari caught in plagiarism row. It is said that, the movie is copied from renowned novelist Sara Abubakar's Chandragiriya Teeradalli.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X