Don't Miss!
- News ಬಂಡೀಪುರ: ಹುಲಿ ದಾಳಿಯಿಂದ ಮರಿಯಾನೆ ಸಾವು, ನಡುರಸ್ತೆಯಲ್ಲೇ ಮುಗಿಲು ಮುಟ್ಟಿದ ತಾಯಿಯ ಆಕ್ರಂದನ, ವಿಡಿಯೋ ವೈರಲ್
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುನಿರತ್ನ 'ಕಠಾರಿವೀರ' ಬಿಡುಗಡೆ ಹಾದಿ ಸುಗಮ
ಯಶವಂತಪುರ (ವಾರ್ಡ್ ನಂಬರ್ 37) ಹಾಲಿ ಕಾರ್ಪೋರೇಟರ್ ಮುನಿರತ್ನ ನಿರ್ಮಾಣದ 'ಕಠಾರಿವೀರ ಸುರಸುಂದರಾಂಗಿ' ಚಿತ್ರದ ಬಿಡುಗಡೆ ಹಾದಿ ಸುಗಮವಾಗಿದೆ. ಭಾರಿ ಬಜೆಟ್ನ ಈ ಚಿತ್ರ 2ಡಿ ಹಾಗೂ 3ಡಿ ಆವೃತ್ತಿಗಳಲ್ಲಿ ಬಿಡುಗಡೆಯಾಗುತ್ತಿದ್ದು ಎರಡೂ ಆವೃತ್ತಿಗಳೂ ಸೆನ್ಸಾರ್ನಲ್ಲಿ ಪಾಸಾಗಿವೆ.
'ಕಠಾರಿವೀರ' ಚಿತ್ರವನ್ನು ವೀಕ್ಷಿಸಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿ 2ಡಿ ಮತ್ತು 3ಡಿ ಆವೃತ್ತಿಗಳಿಗೆ ಯು/ಎ ಸರ್ಟಿಫಿಕೇಟ್ ನೀಡಿದೆ. 'ಕಠಾರಿವೀರ' 2ಡಿ ಚಿತ್ರಕ್ಕೆ ಬುಧವಾರ (ಏ.25) ಸೆನ್ಸಾರ್ ಆಗಿತ್ತು. 3ಡಿ ಚಿತ್ರವನ್ನು ಗುರುವಾರ (ಏ.27) ವೀಕ್ಷಿಸಿದ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ.
ಆದರೆ ಕೆ ಮಂಜು ಅವರ 'ಗಾಡ್ಫಾದರ್' ಚಿತ್ರದ ಸೆನ್ಸಾರ್ ಕತೆ ಏನು ಎಂಬುದು ಇನ್ನೂ ಗೊತ್ತಾಗಿಲ್ಲ. ಮೊದಲು ಯಾವ ಚಿತ್ರ ಸೆನ್ಸಾರ್ ಆಗುತ್ತದೋ ಆ ಚಿತ್ರಕ್ಕೆ ಮೊದಲು ಬಿಡುಗಡೆ ಭಾಗ್ಯ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಐತಿಹಾಸಿಕ ತೀರ್ಪು ನೀಡಿತ್ತು. ಈ ತೀರ್ಪಿಗೆ ಕೆ ಮಂಜು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಮೊದಲು ಸೆಟ್ಟೇರಿದ್ದು ತಮ್ಮ 'ಗಾಡ್ಫಾದರ್' ಚಿತ್ರ. ಹಾಗಾಗಿ ತಮ್ಮ ಚಿತ್ರವೇ ಮೊದಲು ಬಿಡುಗಡೆಯಾಗಬೇಕು ಎಂದು ಪಟ್ಟುಹಿಡಿದ್ದಾರೆ. ಆದಕಾರಣ ಎರಡೂ ಚಿತ್ರಗಳ ಬಿಡುಗಡೆ ವಿವಾದ ತಾರಕಕ್ಕೇರಿದೆ. ಈ ಸಂಬಂಧ ಶುಕ್ರವಾರ (ಏ.27) ಸಂಜೆ ಫಿಲಂ ಚೇಂಬರ್ನಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ. ಏನಾಗಲಿದೆ ಎಂಬ ಕುತೂಹಲ ಎಲ್ಲರಿಗೂ ಇದೆ. (ಒನ್ಇಂಡಿಯಾ ಕನ್ನಡ)