twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ 'ಕುರುಕ್ಷೇತ್ರ'ದ ಬಗ್ಗೆ ಗುಸುಗುಸು: ಚಿತ್ರತಂಡದ ವಿರುದ್ಧ ಅಂಬರೀಶ್ ಮುನಿಸು.!

    By Pavithra
    |

    Recommended Video

    ದರ್ಶನ್ 'ಕುರುಕ್ಷೇತ್ರ'ದ ಬಗ್ಗೆ ಗುಸುಗುಸು: ಚಿತ್ರತಂಡದ ವಿರುದ್ಧ ಅಂಬರೀಶ್ ಮುನಿಸು | Filmibeat Kannada

    ದರ್ಶನ್ ಅಭಿನಯದ ಬಿಗ್ ಬಜೆಟ್ ಚಿತ್ರ 'ಕುರುಕ್ಷೇತ್ರ'. 3Dಯಲ್ಲಿ ಚಿತ್ರೀಕರಣವಾಗುತ್ತಿರುವ ಈ ಚಿತ್ರದ ಸೆಟ್ ನಿಂದ 'ಗುಸುಗುಸು-ಪಿಸುಪಿಸು' ಅಂತ ಮಾತನಾಡುವಂತಹ ಸುದ್ದಿ ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

    ಮೊದಲಿಗೆ ಫೀಚರ್ ಸಿನಿಮಾ ಮಾಡಲು ಮಾತ್ರ ಪ್ಲಾನ್ ಮಾಡಿದ್ದ ಸಿನಿಮಾ ತಂಡ ಕೆಲ ದಿನಗಳ ನಂತ್ರ 3Dಯಲ್ಲಿ ಚಿತ್ರೀಕರಿಸುವುದಕ್ಕೆ ಪ್ಲಾನ್ ಮಾಡ್ತು. ಸಿನಿಮಾದಲ್ಲಿ ಆಕ್ಟ್ ಮಾಡ್ತಿದ್ದ ಪ್ರತಿ ಕಲಾವಿದರೂ ಎರಡೆರಡು ಬಾರಿ ಚಿತ್ರೀಕರಣದಲ್ಲಿ ಭಾಗಿಯಾಗುವಂತಾಯ್ತು. ಇದೇ ಕಾರಣದಿಂದ ಕೆಲ ಕಲಾವಿದರು ಸಿಟ್ಟಾಗಿದ್ದಾರಂತೆ. ಅದ್ರಲ್ಲಿ ಅಂಬರೀಶ್ ಕೂಡ ಒಬ್ಬರು.! ಮುಂದೆ ಓದಿರಿ...

    'ಕುರುಕ್ಷೇತ್ರ' ಸೆಟ್ ನಲ್ಲಿ ಕೋಪಗೊಂಡ ಅಂಬಿ

    'ಕುರುಕ್ಷೇತ್ರ' ಸೆಟ್ ನಲ್ಲಿ ಕೋಪಗೊಂಡ ಅಂಬಿ

    '3D' ಸಿನಿಮಾದ ಚಿತ್ರೀಕರಣ ಆದ್ದರಿಂದ ಕೆಲ ಸೀನ್ ಗಳನ್ನ ಎರಡು ಬಾರಿ ಚಿತ್ರೀಕರಿಸಬೇಕಾಯ್ತಂತೆ. ಈ ಸಂದರ್ಭದಲ್ಲಿ ಅಂಬಿ, ನಿರ್ದೇಶಕ ಮತ್ತು ನಿರ್ಮಾಪಕರ ಮೇಲೆ ಕೋಪ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ವೈಡ್ ಶಾಟ್ ನಲ್ಲಿ ಅಂಬಿ ಪಾತ್ರಕ್ಕೆ ಡ್ಯೂಪ್ ಹಾಕಿಸಲಾಗಿದೆ.

    ನಾಗಣ್ಣನ ಮೇಲೆ ಮುನಿರತ್ನರಿಗೆ ಸಿಟ್ಟು

    ನಾಗಣ್ಣನ ಮೇಲೆ ಮುನಿರತ್ನರಿಗೆ ಸಿಟ್ಟು

    'ಕುರುಕ್ಷೇತ್ರ' ಸಿನಿಮಾಗಾಗಿ ಚಿತ್ರೀಕರಿಸಿದ್ದ ಸೀನ್ ಗಳನ್ನ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹಾಗೂ ಅರ್ಜುನ್ ಸರ್ಜಾ ನೋಡಿದ್ದಾರೆ. ಕೆಲ ಸೀನ್ ಗಳು ಇನ್ನೂ ಚೆನ್ನಾಗಿ ಬರಬೇಕೆಂದು ಇಬ್ಬರೂ ಅಭಿಪ್ರಾಯ ಪಟ್ಟು, ಮರು ಚಿತ್ರೀಕರಿಸುವಂತೆ ಸಲಹೆ ನೀಡಿದ್ದಾರೆ. ಈ ಮಾತು ಅಂಬಿ ಕಿವಿಗೆ ಬಿದ್ದಿದ್ದೇ ತಡ ಮೇಕಪ್ ತೆಗೆದು ಸೆಟ್ ನಿಂದ ಹೊರಬಂದಿದ್ರಂತೆ. ಇದರಿಂದ ನಿರ್ದೇಶಕರ ಮೇಲೆ ನಿರ್ಮಾಪಕರಾದ ಮುನಿರತ್ನ ಗರಂ ಆಗಿದ್ದಾರೆ.

    ಚಿತ್ರೀಕರಣದ ಸ್ಥಳದಲ್ಲಿ 'ನಾಗೇಂದ್ರ ಪ್ರಸಾದ್ 'ಉಪಸ್ಥಿತಿ

    ಚಿತ್ರೀಕರಣದ ಸ್ಥಳದಲ್ಲಿ 'ನಾಗೇಂದ್ರ ಪ್ರಸಾದ್ 'ಉಪಸ್ಥಿತಿ

    ಆರಂಭದಿಂದಲೂ ಟಾಲಿವುಡ್ ಸಂಭಾಷಣಾಕಾರ 'ಭಾರವಿ' ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದರು. ತೆಲುಗಿನ ಡೈಲಾಗ್ಸ್ ಅನ್ನ ಬೆಂಗಳೂರಿನಲ್ಲಿ ಕೂತು 'ನಾಗೇಂದ್ರ ಪ್ರಸಾದ್' ಕನ್ನಡಕ್ಕೆ ಅನುವಾದ ಮಾಡಿ ಕಳುಹಿಸುತ್ತಿದ್ದರು. ಆದ್ರೆ ಇತ್ತೀಚಿನ ಸುದ್ದಿ ಪ್ರಕಾರ 'ಭಾರವಿ' ಚಿತ್ರತಂಡದಿಂದ ಹೊರನಡೆದದ್ದು, ಈಗ ವಿ.ನಾಗೇಂದ್ರ ಪ್ರಸಾದ್ ಅವ್ರೇ ಹೈದ್ರಾಬಾದ್ ನಲ್ಲಿ ಉಳಿದುಕೊಂಡು ಸಂಭಾಷಣೆ ಬರೆಯುತ್ತಿದ್ದಾರಂತೆ.

    ವರ್ಷದ ಆರಂಭದಲ್ಲಿ ಚಿತ್ರ ತೆರೆಗೆ

    ವರ್ಷದ ಆರಂಭದಲ್ಲಿ ಚಿತ್ರ ತೆರೆಗೆ

    ಈಗಾಗಲೇ ಕೊನೆಯ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಕುರುಕ್ಷೇತ್ರ ಸಿನಿಮಾ ತಂಡ '3D' ಸಿನಿಮಾಗೆ ಬೇಕಿರುವಂತೆ ಶೂಟಿಂಗ್ ಮಾಡುತ್ತಿದೆ. ಒಂದಿಷ್ಟು ಇರುಸು ಮುರಿಸಿನ ಜೊತೆಯಲ್ಲೇ ಒಳ್ಳೆ ಚಿತ್ರವನ್ನ ಪ್ರೇಕ್ಷಕರಿಗೆ ನೀಡಬೇಕು ಅನ್ನೋದು ನಿರ್ದೇಶಕ ನಾಗಣ್ಣ ಹಾಗೂ ನಿರ್ಮಾಪಕ ಮುನಿರತ್ನ ಅವ್ರ ಪ್ರಯತ್ನ.

    English summary
    Kannada Actor Ambareesh annoyed with Kurukshetra Movie Team'ಕುರುಕ್ಷೇತ್ರ' ಚಿತ್ರತಂಡದ ಬಗ್ಗೆ ಅಂಬರೀಶ್ ಮುನಿಸಿಕೊಂಡಿದ್ದಾರೆ.
    Friday, November 17, 2017, 14:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X