Don't Miss!
- Finance Tumakuru namma metro: ಮಾದಾವರದಿಂದ ತುಮಕೂರು ಮೆಟ್ರೋ ಕಾರಿಡಾರ್ ಅಪಡೇಟ್
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದರ್ಶನ್ 'ಕುರುಕ್ಷೇತ್ರ'ದ ಬಗ್ಗೆ ಗುಸುಗುಸು: ಚಿತ್ರತಂಡದ ವಿರುದ್ಧ ಅಂಬರೀಶ್ ಮುನಿಸು.!
Recommended Video
ದರ್ಶನ್ ಅಭಿನಯದ ಬಿಗ್ ಬಜೆಟ್ ಚಿತ್ರ 'ಕುರುಕ್ಷೇತ್ರ'. 3Dಯಲ್ಲಿ ಚಿತ್ರೀಕರಣವಾಗುತ್ತಿರುವ ಈ ಚಿತ್ರದ ಸೆಟ್ ನಿಂದ 'ಗುಸುಗುಸು-ಪಿಸುಪಿಸು' ಅಂತ ಮಾತನಾಡುವಂತಹ ಸುದ್ದಿ ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿದೆ.
ಮೊದಲಿಗೆ ಫೀಚರ್ ಸಿನಿಮಾ ಮಾಡಲು ಮಾತ್ರ ಪ್ಲಾನ್ ಮಾಡಿದ್ದ ಸಿನಿಮಾ ತಂಡ ಕೆಲ ದಿನಗಳ ನಂತ್ರ 3Dಯಲ್ಲಿ ಚಿತ್ರೀಕರಿಸುವುದಕ್ಕೆ ಪ್ಲಾನ್ ಮಾಡ್ತು. ಸಿನಿಮಾದಲ್ಲಿ ಆಕ್ಟ್ ಮಾಡ್ತಿದ್ದ ಪ್ರತಿ ಕಲಾವಿದರೂ ಎರಡೆರಡು ಬಾರಿ ಚಿತ್ರೀಕರಣದಲ್ಲಿ ಭಾಗಿಯಾಗುವಂತಾಯ್ತು. ಇದೇ ಕಾರಣದಿಂದ ಕೆಲ ಕಲಾವಿದರು ಸಿಟ್ಟಾಗಿದ್ದಾರಂತೆ. ಅದ್ರಲ್ಲಿ ಅಂಬರೀಶ್ ಕೂಡ ಒಬ್ಬರು.! ಮುಂದೆ ಓದಿರಿ...
'ಕುರುಕ್ಷೇತ್ರ' ಸೆಟ್ ನಲ್ಲಿ ಕೋಪಗೊಂಡ ಅಂಬಿ
'3D' ಸಿನಿಮಾದ ಚಿತ್ರೀಕರಣ ಆದ್ದರಿಂದ ಕೆಲ ಸೀನ್ ಗಳನ್ನ ಎರಡು ಬಾರಿ ಚಿತ್ರೀಕರಿಸಬೇಕಾಯ್ತಂತೆ. ಈ ಸಂದರ್ಭದಲ್ಲಿ ಅಂಬಿ, ನಿರ್ದೇಶಕ ಮತ್ತು ನಿರ್ಮಾಪಕರ ಮೇಲೆ ಕೋಪ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ವೈಡ್ ಶಾಟ್ ನಲ್ಲಿ ಅಂಬಿ ಪಾತ್ರಕ್ಕೆ ಡ್ಯೂಪ್ ಹಾಕಿಸಲಾಗಿದೆ.
ನಾಗಣ್ಣನ ಮೇಲೆ ಮುನಿರತ್ನರಿಗೆ ಸಿಟ್ಟು
'ಕುರುಕ್ಷೇತ್ರ' ಸಿನಿಮಾಗಾಗಿ ಚಿತ್ರೀಕರಿಸಿದ್ದ ಸೀನ್ ಗಳನ್ನ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹಾಗೂ ಅರ್ಜುನ್ ಸರ್ಜಾ ನೋಡಿದ್ದಾರೆ. ಕೆಲ ಸೀನ್ ಗಳು ಇನ್ನೂ ಚೆನ್ನಾಗಿ ಬರಬೇಕೆಂದು ಇಬ್ಬರೂ ಅಭಿಪ್ರಾಯ ಪಟ್ಟು, ಮರು ಚಿತ್ರೀಕರಿಸುವಂತೆ ಸಲಹೆ ನೀಡಿದ್ದಾರೆ. ಈ ಮಾತು ಅಂಬಿ ಕಿವಿಗೆ ಬಿದ್ದಿದ್ದೇ ತಡ ಮೇಕಪ್ ತೆಗೆದು ಸೆಟ್ ನಿಂದ ಹೊರಬಂದಿದ್ರಂತೆ. ಇದರಿಂದ ನಿರ್ದೇಶಕರ ಮೇಲೆ ನಿರ್ಮಾಪಕರಾದ ಮುನಿರತ್ನ ಗರಂ ಆಗಿದ್ದಾರೆ.
ಚಿತ್ರೀಕರಣದ ಸ್ಥಳದಲ್ಲಿ 'ನಾಗೇಂದ್ರ ಪ್ರಸಾದ್ 'ಉಪಸ್ಥಿತಿ
ಆರಂಭದಿಂದಲೂ ಟಾಲಿವುಡ್ ಸಂಭಾಷಣಾಕಾರ 'ಭಾರವಿ' ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದರು. ತೆಲುಗಿನ ಡೈಲಾಗ್ಸ್ ಅನ್ನ ಬೆಂಗಳೂರಿನಲ್ಲಿ ಕೂತು 'ನಾಗೇಂದ್ರ ಪ್ರಸಾದ್' ಕನ್ನಡಕ್ಕೆ ಅನುವಾದ ಮಾಡಿ ಕಳುಹಿಸುತ್ತಿದ್ದರು. ಆದ್ರೆ ಇತ್ತೀಚಿನ ಸುದ್ದಿ ಪ್ರಕಾರ 'ಭಾರವಿ' ಚಿತ್ರತಂಡದಿಂದ ಹೊರನಡೆದದ್ದು, ಈಗ ವಿ.ನಾಗೇಂದ್ರ ಪ್ರಸಾದ್ ಅವ್ರೇ ಹೈದ್ರಾಬಾದ್ ನಲ್ಲಿ ಉಳಿದುಕೊಂಡು ಸಂಭಾಷಣೆ ಬರೆಯುತ್ತಿದ್ದಾರಂತೆ.
ವರ್ಷದ ಆರಂಭದಲ್ಲಿ ಚಿತ್ರ ತೆರೆಗೆ
ಈಗಾಗಲೇ ಕೊನೆಯ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಕುರುಕ್ಷೇತ್ರ ಸಿನಿಮಾ ತಂಡ '3D' ಸಿನಿಮಾಗೆ ಬೇಕಿರುವಂತೆ ಶೂಟಿಂಗ್ ಮಾಡುತ್ತಿದೆ. ಒಂದಿಷ್ಟು ಇರುಸು ಮುರಿಸಿನ ಜೊತೆಯಲ್ಲೇ ಒಳ್ಳೆ ಚಿತ್ರವನ್ನ ಪ್ರೇಕ್ಷಕರಿಗೆ ನೀಡಬೇಕು ಅನ್ನೋದು ನಿರ್ದೇಶಕ ನಾಗಣ್ಣ ಹಾಗೂ ನಿರ್ಮಾಪಕ ಮುನಿರತ್ನ ಅವ್ರ ಪ್ರಯತ್ನ.