twitter
    For Quick Alerts
    ALLOW NOTIFICATIONS  
    For Daily Alerts

    ದುನಿಯಾ ಸೂರಿ ನಿರ್ದೇಶನದ ಚಿತ್ರದಲ್ಲಿ ಅಭಿಷೇಕ್ ಅಂಬರೀಷ್?

    |

    ನಾಗಶೇಖರ್ ನಿರ್ದೇಶನದ 'ಅಮರ್' ಚಿತ್ರದ ಮೂಲಕ ಅಂಬರೀಷ್ - ಸುಮಲತಾ ದಂಪತಿ ಪುತ್ರ ಅಭಿಷೇಕ್ ಚಿತ್ರರಂಗಕ್ಕೆ ಕಾಲಿರಿಸಿದ್ದರು. ಚಿತ್ರದ ಹಾಡುಗಳು ಹಿಟ್ ಆದರೂ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಗೆಲ್ಲಲಿಲ್ಲ. ಅದರ ಬಳಿಕ ಅಭಿಷೇಕ್ ಅವರ ಮುಂದಿನ ಸಿನಿಮಾಗಳ ಬಗ್ಗೆ ಒಂದಿಲ್ಲೊಂದು ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಯಾವುದೂ ಅಧಿಕೃತವಾಗಿರಲಿಲ್ಲ.

    Recommended Video

    ದುನಿಯಾ ಸೂರಿ ಮುಂದಿನ ಸಿನಿಮಾ ಅಂಬಿ ಪುತ್ರನ ಜೊತೆ..? | Abhishek Ambaresh Next with Duniya Suri?

    ಇದೀಗ ಚಂದನವನದಲ್ಲಿ ಮತ್ತೊಂದು ಗುಲ್ಲು ಕೇಳಿಬಂದಿದೆ. ಅಭಿಷೇಕ್ ಅಂಬರೀಷ್, ನಿರ್ದೇಶಕ ದುನಿಯಾ ಸೂರಿ ಜತೆಗೂಡಿ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. 2019ರಲ್ಲಿ 'ಅಮರ್' ಚಿತ್ರದಿಂದ ಪಾದಾರ್ಪಣೆ ಮಾಡಿದ ಅಭಿಷೇಕ್ ಅವರ ಮುಂದಿನ ಚಿತ್ರ ಯಾವುದು ಎಂಬ ಕುತೂಹಲ ಹಾಗೆಯೇ ಉಳಿದಿದೆ. ಅವರ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ವಿವಿಧ ನಿರ್ದೇಶಕರ ಜತೆ ಹೆಸರು ಕೇಳಿಬಂದಿದ್ದರೂ ಅಭಿಷೇಕ್ ಇದಾವುದನ್ನೂ ಅಧಿಕೃತವಾಗಿ ಖಚಿತಪಡಿಸಿಲ್ಲ. ಲಾಕ್ ಡೌನ್ ಅವಧಿ ತೆರವುಗೊಂಡ ನಂತರ ಅವರು ಹೊಸ ಚಿತ್ರಕ್ಕೆ ಕೈ ಹಾಕಲಿದ್ದಾರೆ ಎಂದು ಹೇಳಲಾಗಿದೆ. ಮುಂದೆ ಓದಿ...

    ಡಿ ಬಾಸ್ ದರ್ಶನ್ ಸಿನಿಮಾದಲ್ಲಿ ಅಭಿಷೇಕ್ ಅಂಬರೀಶ್ ವಿಲನ್?ಡಿ ಬಾಸ್ ದರ್ಶನ್ ಸಿನಿಮಾದಲ್ಲಿ ಅಭಿಷೇಕ್ ಅಂಬರೀಶ್ ವಿಲನ್?

    ಅಭಿಷೇಕ್ ಮನೆಯಲ್ಲಿ ಚರ್ಚೆ

    ಅಭಿಷೇಕ್ ಮನೆಯಲ್ಲಿ ಚರ್ಚೆ

    ದುನಿಯಾ ಸೂರಿ ನಿರ್ದೇಶನದಲ್ಲಿ ಅಭಿಷೇಕ್ ಅಂಬರೀಷ್ ಸಿನಿಮಾ ಮಾಡುವ ಕುರಿತು ಮಾತುಕತೆಗಳು ನಡೆದಿವೆ. ಹಾಗೆಯೇ ಕಥೆಯೊಂದರ ಕುರಿತು ಸಹ ಚರ್ಚಿಸಲಾಗಿದೆ. ಇತ್ತೀಚೆಗೆ ಲಾಕ್ ಡೌನ್ ನಿಯಮಗಳಲ್ಲಿ ಸಡಿಲಿಕೆ ಮಾಡಿದ ಬಳಿಕ ಅಭಿಷೇಕ್ ಮನೆಯಲ್ಲಿ ಇಬ್ಬರೂ ಭೇಟಿ ಮಾಡಿದ್ದಾರೆ ಎನ್ನಲಾಗಿದೆ.

    ಬ್ರೇಕ್‌ಗೆ ಕಾದಿರುವ ಅಭಿಷೇಕ್

    ಬ್ರೇಕ್‌ಗೆ ಕಾದಿರುವ ಅಭಿಷೇಕ್

    ಅಪ್ಪ-ಅಮ್ಮ ಇಬ್ಬರೂ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದವರು. ಹಾಗೆಯೇ ರಾಜಕಾರಣದ ಹಾದಿಯನ್ನೂ ತುಳಿದಿದ್ದರು. ಅಭಿಷೇಕ್ ಕೂಡ ರಾಜಕೀಯದಲ್ಲಿ ಭವಿಷ್ಯ ಹುಡುಕುವ ಸಾಧ್ಯತೆ ಇದೆ. ಅದಕ್ಕೆ ಮುನ್ನ ಚಿತ್ರರಂಗದಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುವುದು ಅವರ ಬಯಕೆ. ಹೀಗಾಗಿ ಅವರಿಗೆ ಬ್ರೇಕ್ ಸಿಗಲು ಜನಪ್ರಿಯ ಮತ್ತು ಯಶಸ್ವಿ ನಿರ್ದೇಶಕರ ಅಗತ್ಯವಿದೆ.

    ಅಂಬಿ ಪುತ್ರ ಅಭಿಷೇಕ್ ಹಿಂದಿಕ್ಕಿದ ಕೆ ಮಂಜು ಪುತ್ರ ಶ್ರೇಯಸ್ಅಂಬಿ ಪುತ್ರ ಅಭಿಷೇಕ್ ಹಿಂದಿಕ್ಕಿದ ಕೆ ಮಂಜು ಪುತ್ರ ಶ್ರೇಯಸ್

    ಸೂರಿಯ ಎರಡು ಸಿನಿಮಾಗಳು

    ಸೂರಿಯ ಎರಡು ಸಿನಿಮಾಗಳು

    'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರದ ನಂತರ ನಿರ್ದೇಶಕ ದುನಿಯಾ ಸೂರಿ ಕೈಗೆತ್ತಿಕೊಳ್ಳಲಿರುವ ಚಿತ್ರಕ್ಕೆ ಅಭಿಷೇಕ್ ನಾಯಕರಾಗಿರಲಿದ್ದಾರೆ ಎಂದು ಹೇಳಲಾಗುತ್ತಿದೆ. ಸೂರಿ ಬಹಳ ಹಿಂದೆಯೇ ಪ್ರಕಟಿಸಿರುವ 'ಕಾಗೆ ಬಂಗಾರ' ಮತ್ತು 'ಸೈಲೆಂಟ್ ಸುನೀಲ' ಚಿತ್ರಗಳು ಇನ್ನೂ ಬಾಕಿ ಉಳಿದಿವೆ.

    ಕಥೆ ಹೇಗಿರಲಿದೆ?

    ಕಥೆ ಹೇಗಿರಲಿದೆ?

    ಸದ್ಯಕ್ಕೆ ಅಭಿಷೇಕ್ ಮತ್ತು ಸೂರಿ ಜೋಡಿಯ ಸಿನಿಮಾ ಹೇಗಿರಬಹುದು ಎಂಬುದೇ ಕುತೂಹಲ ಕೆರಳಿಸಿದೆ. ರೌಡಿಸಂ, ಆಕ್ಷನ್‌ನ ಕಚ್ಚಾ ಕಥೆಗಳನ್ನು ಹೇಳುವುದರಲ್ಲಿ ನಿಸ್ಸೀಮರಾದ ಸೂರಿ, ಅಭಿಷೇಕ್‌ಗೆ ಕೂಡ ಅದೇ ರೀತಿಯ ಕಥೆ ಹೊಸೆಯಲಿದ್ದಾರೆಯೇ ಅಥವಾ ವಿಭಿನ್ನ ಪ್ರಯತ್ನಕ್ಕೆ ಕೈಹಾಕಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕು.

    ಮುನಿರತ್ನ ಚಿತ್ರ ಘೋಷಣೆ

    ಮುನಿರತ್ನ ಚಿತ್ರ ಘೋಷಣೆ

    'ಕುರುಕ್ಷೇತ್ರ' ಚಿತ್ರದ ಶತದಿನೋತ್ಸವ ಸಂದರ್ಭದಲ್ಲಿ ದರ್ಶನ್ ಮತ್ತು ಅಭಿಷೇಕ್ ಅವರನ್ನು ಹಾಕಿಕೊಂಡು ಮುಂದಿನ ಚಿತ್ರ ಮಾಡುವುದಾಗಿ ನಿರ್ಮಾಪಕ ಮುನಿರತ್ನ ಘೋಷಿಸಿದ್ದರು. ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಕುರಿತಾದ ಚಿತ್ರ ಇದು ಎಂದು ಹೇಳಿದ್ದರು.

    English summary
    Buzz around Abhishek Ambareesh's next movie will be with director Duniya Suri. Reports sayd they have already discussed a script.
    Tuesday, May 26, 2020, 17:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X