Don't Miss!
- News ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ & ನೆಲಮಂಗಲ ಹೊಸ ಉಪನಗರ: ಡಾ. ಕೆ. ಸುಧಾಕರ್ ಭರವಸೆ!
- Finance ಜಗತ್ತಿನಾದ್ಯಂತ 6,000 ಉದ್ಯೋಗಿಗಳನ್ನು ವಜಾ ಮಾಡಿದ ಡೆಲ್
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Sports IPL 2024 RR vs DC: ರಾಯಲ್ಸ್ ವಿರುದ್ಧ ಗೆಲುವಿನೊಂದಿಗೆ ಪುಟಿದೇಳುವುದೇ ಕ್ಯಾಪಿಟಲ್ಸ್?; ಸಂಭಾವ್ಯ ಆಡುವ 11ರ ಬಳಗ
- Lifestyle ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- Technology OnePlus: ಒನ್ಪ್ಲಸ್ ನಾರ್ಡ್ CE 4 ಫೋನ್ನ ಭಾರತದ ಬೆಲೆ ಮಾಹಿತಿ ಲೀಕ್! ಲಾಂಚ್ಗೆ ನಾಲ್ಕೇ ದಿನ ಬಾಕಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಕಿಂಗ್ ಸ್ಟಾರ್ ಯಶ್ ಕುಟುಂಬದ ಬಗ್ಗೆ ಹೀಗೊಂದು ಸುದ್ದಿ.!
Recommended Video
ರಾಕಿಂಗ್ ಸ್ಟಾರ್ ಯಶ್ ಸದ್ಯ 'ಕೆ.ಜಿ.ಎಫ್-2' ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿರುವುದು ನಿಮಗೆಲ್ಲ ಗೊತ್ತೇ ಇದೆ. ಹೀಗಿರುವಾಗಲೇ, ನಟ ಯಶ್ ಮತ್ತು ಕುಟುಂಬದ ಬಗ್ಗೆ ಒಂದು ಸುದ್ದಿ ಹರಿದಾಡುತ್ತಿದೆ. ಅದೇನಪ್ಪಾ ಅಂದ್ರೆ, 'ಕೆ.ಜಿ.ಎಫ್-2' ಚಿತ್ರದ ಶೂಟಿಂಗ್ ನಿಂದ ಕೊಂಚ ಗ್ಯಾಪ್ ಪಡೆದ ಯಶ್ ಶತ್ರು ಸಂಹಾರ ಯಾಗ ಮಾಡಿಸಿದ್ದಾರಂತೆ.
ನಿನ್ನೆ ಮಲ್ಲೇಶ್ವರಂನಲ್ಲಿರುವ ಶ್ರೀ ದುರ್ಗಾ ರಾಧಾ-ಕೃಷ್ಣ ದೇವಸ್ಥಾನದಲ್ಲಿ ನಡೆದ ಮಾರ್ಕಂಡೇಯ ಹೋಮದಲ್ಲಿ ಯಶ್ ಮತ್ತು ಕುಟುಂಬ ಪಾಲ್ಗೊಂಡಿದ್ದರಂತೆ. ಶತ್ರು ನಾಶ ಮತ್ತು ಕಂಟಕವನ್ನು ನಿಗ್ರಹಿಸಲು ಮಾರ್ಕಂಡೇಯ ಹೋಮ ಮಾಡಿಸಲಾಗಿದ್ದು, ಇದರಲ್ಲಿ ಯಶ್, ರಾಧಿಕಾ ಪಂಡಿತ್, ಯಶ್ ತಂದೆ ಮತ್ತು ತಾಯಿ ಭಾಗಿಯಾಗಿದ್ದರಂತೆ ಎಂಬ ಅಂತೆ-ಕಂತೆ ಹರಿದಾಡುತ್ತಿದೆ. ಈ ಬಗ್ಗೆ ಯಶ್ ಕುಟುಂಬ ಸ್ಪಷ್ಟನೆ ನೀಡಿಲ್ಲ.
ಕೊನೆಯ ಹಂತಕ್ಕೆ ತಲುಪಿದ 'ಕೆಜಿಎಫ್-2' ಚಿತ್ರೀಕರಣ: ಹೈದರಾಬಾದ್ ಗೆ ಹೊರಡಲಿದೆ ಚಿತ್ರತಂಡ
ಇನ್ನೂ, ಇದೇ ವೇಳೆ ದೇವಸ್ಥಾನದಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಎರಡನೇ ಕೂಸಿಗೆ ನಾಮಕರಣ ಮಾಡಲಾಗಿದೆ ಎಂಬ ಮಾಹಿತಿಯೂ ಹರಿದಾಡುತ್ತಿದೆ.
ಕಳೆದ ವರ್ಷದ ಅಕ್ಟೋಬರ್ 30 ರಂದು ಯಶ್ ಪತ್ನಿ ರಾಧಿಕಾ ಪಂಡಿತ್ ಗಂಡು ಮಗುವಿಗೆ ಜನ್ಮ ನೀಡಿದ್ದರು. ಯಶ್ ದಂಪತಿಯ ಮುದ್ದು ಮಗನಿಗೆ ಇದೀಗ ಮೂರು ತಿಂಗಳು ತುಂಬಿದ್ದು, ನಾಮಕರಣ ನೆರವೇರಿಸಲಾಗಿದೆ ಎನ್ನಲಾಗಿದೆ. ಈ ಬಗ್ಗೆಯೂ ಯಶ್ ಆಗಲಿ ರಾಧಿಕಾ ಪಂಡಿತ್ ಆಗಲಿ ಖಚಿತ ಪಡಿಸಿಲ್ಲ.