Don't Miss!
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Automobiles Mahindra Thar: ಸುಲಭವಾಗಿ ಆಫ್ರೋಡ್ ಕಿಂಗ್ ಖರೀದಿಸಬೇಕೆ?: ಆನ್ರೊಡ್ ಬೆಲೆ, EMI ಸಂಪೂರ್ಣ ಮಾಹಿತಿ!
- News ನೇಹಾ ಕೊಲೆಗೆ ಸಿಎಂ ತೀವ್ರ ಖಂಡನೆ: ಕೊಲೆಗಾರನಿಗೆ ಶಿಕ್ಷೆ ಕುರಿತು ಸಿದ್ದರಾಮಯ್ಯ ಹೇಳಿದ್ದೇನು?
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮತ್ತೊಂದು ತಮಿಳು ರೀಮೇಕ್ ನಲ್ಲಿ ನಟಿಸ್ತಾರಾ ಶರಣ್.?
ತಮಿಳು ನಟ ಶಿವಕಾರ್ತಿಕೇಯನ್ ಅವರ 'ವರುತೆಪಡಾದೆ ವಲಿಬರ ಸಂಗೋ' ಚಿತ್ರವನ್ನು ಕನ್ನಡಕ್ಕೆ 'ಅಧ್ಯಕ್ಷ' ಎಂದು ರೀಮೇಕ್ ಮಾಡಿ ಶರಣ್ ಅವರು ತಮ್ಮ ಅಭಿಮಾನಿಗಳ ಮನಗೆದ್ದರು. ಈ ಚಿತ್ರದಲ್ಲಿ ಚಿಕ್ಕಣ್ಣ-ಶರಣ್ ಕಾಂಬಿನೇಷನ್ ಅಭಿಮಾನಿಗಳಿಗೆ ಸಖತ್ ಹಿಡಿಸಿತು.
ತದನಂತರ ಮತ್ತೆ ಶಿವಕಾರ್ತಿಕೇಯನ್ ಅವರ 'ರಜಿನಿ ಮುರುಗನ್' ತಮಿಳು ಚಿತ್ರವನ್ನು ಕನ್ನಡಕ್ಕೆ 'ರಾಜ್ ವಿಷ್ಣು' ಎಂದಾಗಿಸಿದರು. ಸದ್ಯಕ್ಕೆ ಈ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಈ ಚಿತ್ರದಲ್ಲಿ ಮತ್ತೆ ಶರಣ್-ಚಿಕ್ಕಣ್ಣ ಜೋಡಿ ಮೋಡಿ ಮಾಡುತ್ತಿದೆ. ಜೊತೆಗೆ ಅತಿಥಿ ಪಾತ್ರದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಮಿಂಚಿದ್ದಾರೆ.['ರಾಜ್-ವಿಷ್ಣು'ಗೆ ಮುರಳಿ ಕಡೆಯಿಂದ ಕೂಡ ಒಂದು ಸಲಾಮ್]
ಅಂದಹಾಗೆ ಇದೀಗ ಲೇಟೆಸ್ಟ್ ಮಾಹಿತಿ ಏನಪ್ಪಾ ಅಂದ್ರೆ ಕನ್ನಡದ ಕಾಮಿಡಿ ಕಿಂಗ್ ಶರಣ್ ಅವರು ಮತ್ತೊಂದು ಕಾಲಿವುಡ್ ಚಿತ್ರವನ್ನು ಕನ್ನಡಕ್ಕೆ ತರುತ್ತಿದ್ದಾರೆ ಎನ್ನಲಾಗುತ್ತಿದೆ. ತಮಿಳು ನಟ ವಿಜಯ್ ಸೇತುಪತಿ ಮತ್ತು ನಟಿ ನಯನತಾರಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ 'ನಾನುಮ್ ರೌಡಿ ಧಾನ್' ಚಿತ್ರವನ್ನು ಕನ್ನಡಕ್ಕೆ ರೀಮೇಕ್ ಮಾಡುತ್ತಿದ್ದು, ಆ ಚಿತ್ರದಲ್ಲಿ ನಟ ಶರಣ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರಂತೆ.[ಶರಣ್ ರ 'ರಾಜ್-ವಿಷ್ಣು'ಗೆ ಮರಾಠಿ ಬೆಡಗಿ ಎಂಟ್ರಿ, ಯಾರೀ ಚೆಲುವೆ?]
ತಮಿಳಿನಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್ ಆಕ್ಷನ್-ಕಟ್ ಹೇಳಿದ್ದ 'ನಾನುಮ್ ರೌಡಿ ಧಾನ್' ಎಂಬ ಕಾಮಿಡಿ-ರೋಮ್ಯಾಂಟಿಕ್ ಚಿತ್ರಕ್ಕೆ ನಟ ಕಮ್ ನಿರ್ಮಾಪಕ ಧನುಷ್ ಅವರು ಬಂಡವಾಳ ಹೂಡಿದ್ದರು.
ಇದೀಗ ಈ ತಮಿಳು ಚಿತ್ರದ ರೀಮೇಕ್ ಹಕ್ಕನ್ನು ಖರೀದಿ ಮಾಡಿರುವ ನಿರ್ಮಾಣ ಸಂಸ್ಥೆ ಶರಣ್ ಅವರನ್ನು ನಾಯಕನಾಗಿ ನಟಿಸಲು ಕೇಳಿಕೊಂಡಿದೆ. ಶರಣ್ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಎಲ್ಲವೂ ಅಧೀಕೃತ ಘೋಷಣೆಯಾಗುವವರೆಗೆ ಕಾದು ನೋಡಬೇಕಿದೆ.['ರಾಜ್-ವಿಷ್ಣು'ಗೆ ಸಲಾಂ ಹೊಡೆಯುತ್ತಿದ್ದಾರೆ ತುಂಡು ಹೈಕಳು]
ಸದ್ಯಕ್ಕೆ ನಟ ಶರಣ್ ಅವರು ಪವನ್ ಕುಮಾರ್ ಒಡೆಯರ್ ನಿರ್ದೇಶನದ 'ನಟರಾಜ ಸರ್ವಿಸ್' ಚಿತ್ರದ ಬಿಡುಗಡೆಗೆ ಕಾದಿದ್ದು, 'ರಾಜ್ ವಿಷ್ಣು' ಚಿತ್ರದ ನಂತರ ಶರಣ್ ಅವರು ಯಾವ ಸಿನಿಮಾ ಮಾಡುತ್ತಾರೆ ಅನ್ನೋ ಅಭಿಮಾನಿಗಳ ಪ್ರಶ್ನೆಗೆ ಉತ್ತರ ದೊರೆತಂತಾಗಿದೆ. ಆದರೆ ಇನ್ನೂ ಅಧೀಕೃತ ಘೋಷಣೆ ಆಗದ ಕಾರಣ ಕೊಂಚ ಕಾಯಬೇಕಾಗಿದೆ.